ಭಾನುವಾರ, ಸೆಪ್ಟೆಂಬರ್ 26, 2021

ಸೂಸೈಡ್ ಬೇಕಾ ? (ಕವಿತೆ) - ಶ್ರೀಧರ ಗಸ್ತಿ, ಧಾರವಾಡ.

ಸೂಸೈಡ್ ಬೇಕಾ ?

ಬಾರದೇನು ಬರುವುದೇನು
ಮರಳಿ ಜೀವಗೂಡಿಗೆ
ಭಾವ ತುಂಬಿದ ಬೀಡಿಗೆ

ಅಮೂಲ್ಯ ಜೀವಕೆ ಏನಿದು ಬೇಸರ
ಮನುಜ ಬಿಡಿಸಲಾಗದ ಆಗರ
ಏಕೀ ಹರಿಶ್ಚಂದ್ರನ ಘಾಟಕೆ ಅವಸರ 

ಜನ್ಮ ತಳೆದ ಶಿಶುವೆಗೇಕೆ
ಮರಣ ಶೈಯೇಯ ಹಂದರ
ಕರುಳು ಕೇಳಿಸಲಿಲ್ಲವೇ ಆಕ್ರಂದಣದ ರೋಧನ

ಬಯಕೆ ಬವಣೆ ದೂರ ಮಾಡಿ
ದಣಿವ ದೇಹ ಕುಣಿಸಿದೆ
ಎಲ್ಲ ಇದ್ದು ಇಲ್ಲದಾಗೆ ಏಕೆ ಪಯಣ ಬೆಳೆಸಿದೆ

ಬಗೆಹರಿಯದ ಒಗಟೇನು ಅಲ್ಲ
ಈ ಬಂಧ ಬಿಡಿಸಲಾಗದ ಬಂಧ ?
ಘೋರ ಅಪಚಾರ ಆತ್ಮಹತ್ಯೆಯ ಈ ವರ್ತನೆ.

ಆತ್ಮಹತ್ಯೆ ಪರಿಹಾರವಲ್ಲ
ಬದುಕಿನ ಈ ಬಂಡಿಗೆ
ಇದ್ದು ಗೆಲ್ಲುವುದೇ ಮನುಜಮತದ ಅಭಿಮತ

✍ ಶ್ರೀಧರ ಗಸ್ತಿ ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...