ಶುಕ್ರವಾರ, ಅಕ್ಟೋಬರ್ 29, 2021

ಅಂಗೈ ಮುಂಗೈ (ಕವಿತೆ) - ಕಿರಣ್ ಕುಮಾರ ಹೆಚ್ ತುಂಬೇನಹಳ್ಳಿ.

ಅಂಗಲಾಚು ಅಂಗೈ
ಹಿಡಿ  ಅನ್ನಕ್ಕೆ
ಮುಂಗೈ ಚಾಚು
ಮುಂದೆ ದಾನಕ್ಕೆ

ಅಂಗೈ ಚಾಚಿದರೆ
ಅಂಗಲಾಚಿ ಲಂಚಕ್ಕೆ
ಸಾಟಿ ಇಲ್ಲವೇ
ನಿನ್ನ ನೀಚತನಕ್ಕೆ

ಹಂಗಿಸುವವರ ಹಂಗು
ನಿನ್ನ ಅಂಗೈಯ ತೋರು
ಬೆರಳು ತೋರಿಸುವ
ದಾರಿ ಜಯಭೇರಿ

ಕೊಲ್ಲುವ ಅಂಗೈಲೇ
ಇರುವುದು ಅಂದ
ಮಾಡು ನೀ ಚಂದ
ತಾನಾಗಿಯೇ ದಾರಿ ಮುಂದ

ಅಂಗೈಯಲ್ಲೇ ಅರಮನೆ
ಮುಂಗೈಯಲ್ಲೇ ಸೆರೆಮನೆ
ನೀನಿರುವ ನಡುಮನೆ
ಮುಗ್ಗರಿಸಿದರೆ ಮಸಣದಮನೆ

ಅಂಗೈಯ ಹುಣ್ಣಿಗೆ
ಕನ್ನಡಿ ಬೇಕೇ
ಮುಂಗೈಯ ಮುನ್ನುಡಿ
ಯೋಚನೆ ಬರೆಯಬೇಕೇ ಎಂದು

- ಕಿರಣ್ ಕುಮಾರ  ಹೆಚ್ 
ತುಂಬೇನಹಳ್ಳಿ
ಕೈಲಾಂಚ ಹೋಬಳಿ
ಕೆ.ಪಿ. ದೊಡ್ಡಿ ಅಂಚೆ
ರಾಮನಗರ ತಾ ಮತ್ತು ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...