ಶುಕ್ರವಾರ, ಅಕ್ಟೋಬರ್ 29, 2021

ವನ-ಬನ (ಕವಿತೆ) - ಧ್ಯಾಮ್ ರಾಜ್ ವಾಯ್ಹ್ ಸಿಂದೋಗಿ.

ವನ ಸಿರಿ ರೂಪವ ಕಂಡು
ಮನ ಸೋತು ಕರಗಿ ಕೊರಗಿದೆನು
ದಾರು ಕುಡಿದು ಕಡಿದು  ತುಂಡು
ನಿದ್ದೆ ಮಾಡದೆ ರಾತ್ರಿಯ ಕಳೆದೆನು//

ಕೆಳಿತು ಗೆಜ್ಜೆಯ ನಾದ
ಕಣ್ಣಿಗೆ ಕಾಣದು ಪಾದ
ನೀಡದೆ ಮುದ ನೀಡಿತು ಭಾಧ
ಬಲ್ಲವರಾರು ಹೃದಯ ವೀಣೆಯ ಶೋಧ//

ಮರ ಬಳ್ಳಿಯ ಅಪ್ಪಿಗೆ
ಸೂರ್ಯ ಚಂದ್ರರ ಒಪ್ಪಿಗೆ
ನಿಜ ಅದು ಕಾನನ ಸ್ವರ್ಗದ ತಾಣ
ಮಜ ಮಾಡಲು ತಡ ಮಾಡದೆ ಮಾಡು ಪಯಣ//

ಸವಿ ಹಣ್ಣು ಹಂಪಲ ಗಡ್ಡೆ ಗೆಣಸು
ಬೆಳೆಯಲು ಕಾಣು ಸುಂದರ ಕನಸು
ಪೀಳಿಗೆ ಬಾಳಲು ತುಸು ಪೋಷಿಸು
ನೀಡುವೆ ಆಹಾರ ನೀರು ಶುದ್ದ  ಗಾಳಿ ಸೇವಿಸು//

ಈ ಒಡಲು ಜೀವರಾಶಿಗಳ ಕಣಜ
ಅರಿತು ಬೆರೆತು ಬಾಳು
ಹಿರಿಯರೆ ಮಾಡಿಲ್ಲವೆ ವನ ಬನ ಪೂಜ
ಬದುಕಿಗೆ ಬರದಿರಲು  ಗೋಳು//
- ಧ್ಯಾಮ್ ರಾಜ್ ವಾಯ್ಹ್ ಸಿಂದೋಗಿ. ಸಾ!!ಭೈರಾಪೂರ, ತಾ!ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...