ಬುಧವಾರ, ಅಕ್ಟೋಬರ್ 20, 2021

ಅಶೋಕ ವಿಜಯ ದಶಮಿಯ ಮಹತ್ವ (ಲೇಖನ) - ನಂದಾದೀಪ ಬೋರಳೆ.

ಇಂದು ಜಗತ್ತಿನ ಪ್ರಸಿದ್ಧ ಮಹಾನ್ ಯೋಧ ಮತ್ತು ದಯೇ,ಕರುಣೆ,ಮೈತ್ರಿಯ ಉಪಾಸಕ, ಬೋಧಿಸತ್ವ ಚಕ್ರವರ್ತಿ ಸಮ್ರಾಟ ಅಶೋಕನ ಧಮ್ಮ ವಿಜಯ ದಶಮಿಯಂದು ಸಮಸ್ತ ನಾಡಿನ ಬಹುಜನ ಮೂಲನಿವಾಸಿಗಳಿಗೆ ಹಾದಿ೯ಕ ಶುಭಾಶಯಗಳು.

ಅಶೋಕನ 13 ನೇ ಶಾಸನದಲ್ಲಿ ಉಲ್ಲೇಖಿಸಿದ ಹಾಗೆ ಅಶೋಕನು ತನ್ನ ರಾಜ್ಯಾಭಿಷೇಕದ ಎಂಟು ವರ್ಷಗಳ ನಂತರ ಅಂದರೆ ಕ್ರಿಸ್ತಪೂರ್ವ 261 ರಲ್ಲಿ ಕಳಿಂಗ ರಾಜ್ಯದ ಮೇಲೆ ದಾಳಿ ಮಾಡಿದ. ಈ ಯುದ್ಧದಲ್ಲಿ ಲಕ್ಷಾಂತರ ಜನ ಸತ್ತರು, ಲಕ್ಷಗಟ್ಟಲೆ ಜನ ಗಾಯಗೊಂಡರು, ಸಾವಿರಾರು ಜನರಿಗೆ ಬಂಧಿಸಲಾಯಿತು ಮತ್ತು ಎಷ್ಟೋ ಜನರಿಗೆ ಗಡಿಪಾರು ಮಾಡಲಾಯಿತು. ಆ ಭೀಕರ ಯುದ್ಧದಲ್ಲಿ ಹರಿದ ರಕ್ತದ ಭಯಾನಕತೆಯನ್ನು ಕಂಡು ಅಶೋಕನ ಹೃದಯ ಕಂಪಿಸಿತು ಮತ್ತು ಅವನ ಆಲೋಚನೆಗಳಲ್ಲಿ ಬದಲಾದಣೆಯಾಯಿತು.

ಈ ಘಟನೆಯ ನಂತರ ಅಶೋಕನು ಬೌದ್ಧ ಭಿಕ್ಖು ನಿಗ್ರೋಧ ಮತ್ತು ಮೊಗ್ಗಲಿಪುತ್ತರೊಂದಿಗೆ ಸಂವಾದ ನಡೆಸಿ ಅವರ ಮಾಗ೯ದಶ೯ನದಲ್ಲಿ ಅಶ್ವಿನ್ ತಿಂಗಳ ಶುಕ್ಲ ಪಕ್ಷದ ಹತ್ತನೇ ದಿನದಂದು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದನು. ಅಂದಿನಿಂದ ಪ್ರತಿವರ್ಷ 'ಧಮ್ಮ ವಿಜಯ ದಶಮಿ ದಿನ' ಎಂದು ಅಶೋಕನಿಂದ ಹಿಡಿದು ಇಡೀ ಮಗಧನ ಎಲ್ಲಾ ಮೌರ್ಯ ಚಕ್ರವರ್ತಿಗಳು ಆಚರಿಸಲು ಆರಂಭಿಸಿದರು. ಬೌದ್ಧ ಧರ್ಮವನ್ನು ಸ್ವಿಕಾರ ಮಾಡಿದ ನಂತರ, ಅಶೋಕನು ಈ ರೀತಿ ಘೋಷಣೆ ಮಾಡಿದನು.
1.ನಾನು ಇನ್ನು ಮುಂದೆ ಯುದ್ಧ ಮಾಡುವುದಿಲ್ಲ
2. "ಯುದ್ಧ-ಭೇರಿ" (ಭೇರಿ ಘೋಷ್) ಬದಲಿಗೆ "ಧಮ್ಮ-ಭೇರಿ" (ಧಮ್ಮ ಘೋಷ) ಅನ್ನು ಅಳವಡಿಸಿಕೊಂಡನು.
3. ತಥಾಗತನ ಬೌದ್ಧ ಧಮ್ಮ ಮತ್ತು "ಬಹುಜನ ಹಿತಾಯ- ಬಹುಜನ್ ಸುಖಾಯ್" ಗಳನ್ನು ತನ್ನ ಅಧಿಕೃತ ಧರ್ಮವೆಂದು ಘೋಷಿಸಿದನು.
4.ಎಲ್ಲಾ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದನು ಮತ್ತು ಗಾಯಗೊಂಡವರಿಗೆ ವೈದ್ಯಕೀಯ ಸೇವೆ ಒದಗಿಸಲು ಆದೇಶಿಸಿದರು.
5.ಇಂದಿನಿಂದ ನನ್ನ ಸಾಮ್ರಾಜ್ಯದಲ್ಲಿ ನೆಲೆಸಿರುವ ಎಲ್ಲ ಜನರು ನನ್ನ ಮಕ್ಕಳು ಮತ್ತು ಅವರ ಕಲ್ಯಣಕ್ಕಾಗಿ ಹಗಲಿರುಳು ಪ್ರಯತ್ನಿಸುವುದಾಗಿ ಆತ ಘೋಷಿಸಿದ್ದ.

ಅಶೋಕ್ ತನ್ನ ರಾಜ್ಯ ಧರ್ಮ ಮತ್ತು ಆಡಳಿತ ನೀತಿಗಳನ್ನು ಸುಮಾರು 20 ಸಣ್ಣ ಮತ್ತು ದೊಡ್ಡ ಸ್ತಂಭ ಶಾಸನಗಳಲ್ಲಿ ಬರೆದು ಇಡೀ ಸಾಮ್ರಾಜ್ಯದಲ್ಲಿ ಹೂತಿಟ್ಟನು. ಬೌದ್ಧ ಧರ್ಮದ ಸಂಪೂರ್ಣ ಸಾರವನ್ನು ಓದಿದ ಅಶೋಕನು ತಮ್ಮ ಎರಡನೇ ಶಾಸನದಲ್ಲಿ ಧಮ್ಮ (ಧರ್ಮ) ಎಂದರೇನು? ಎಂದು ವಿವರಿಸುವಾಗ ಅಶೋಕನು ಈ ರೀತಿ ಹೇಳುತ್ತಾನೆ - "ತಪ್ಪು ಕೆಲಸಗಳನ್ನು ಮಾಡದಿರುವುದು, ಗರಿಷ್ಠ ಒಳ್ಳೆಯ ಕಾರ್ಯಗಳನ್ನು ಮಾಡುವುದು, ಎಲ್ಲಾ ಜೀವಿಗಳನ್ನು ದಯೆ, ಸಹಾನುಭೂತಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುವುದು, ಸತ್ಯಕ್ಕೆ ಬದ್ಧವಾಗಿರುವುದು ಮತ್ತು ಶುದ್ಧತೆಯನ್ನು ಅನುಸರಿಸುವುದೇ ಧಮ್ಮ ಅಥವಾ ಧರ್ಮ." ಎಂದು ಅಶೋಕ್ ವಿವರಿಸುತ್ತಾನೆ.

ಧಮ್ಮದ ಬಗ್ಗೆ ಇನ್ನೂ ಮುಂದೆ ಹೇಳುತ್ತಾ- "ಪ್ರಾಣಿ-ಪಕ್ಷಿಗಳ ಹತ್ಯ ಮಾಡಬಾರದು, ಬೌದ್ಧ ಸನ್ಯಾಸಿಗಳ ಸೇವೆ ಮಾಡುವುದು, ತಂದೆ ತಾಯಿಗಳ ಸೇವೆ ಮಾಡುವುದು ಮತ್ತು ಗೌರವಿಸುವುದು, ಶಿಕ್ಷಕರನ್ನು ಗೌರವಿಸುವುದು, ಸ್ನೇಹಿತರು, ಸಂಬಂಧಿಕರು ಮತ್ತು ಶ್ರಮಣರನ್ನು ಗೌರವಿಸುವುದು, ಗುಲಾಮರು ಮತ್ತು ಸೇವಕರೊಂದಿಗೆ ಸರಿಯಾಗಿ ವರ್ತಿಸುವುದು ಮತ್ತು ಸ್ವಲ್ಪ ಹಣವನ್ನು ಖರ್ಚು ಮಾಡುವುದು. ಇತ್ಯಾದಿ ಧಮ್ಮ (ಧಾರ್ಮಿಕ) ನಡವಳಿಕೆಗಳ ಬಗ್ಗೆ ಹೇಳುತ್ತಾರೆ.

ಅಶೋಕ ರಾಜ ಬಹುಜನ 'ಹಿತಾಯ ಬಹುಜನ ಸುಖಾಯ' ವನ್ನು ತನ್ನ ಜೀವನ ಮತ್ತು ಆಡಳಿತದ ಗುರಿಯನ್ನಾಗಿಸುವ ಕೆಲಸ ಮಾಡಿದನು. ತನ್ನ ಏಳನೆಯ ಶಾಸನದಲ್ಲಿ - "ನನ್ನ ರಾಜ್ಯ ಸೇರಿದಂತೆ ಎಲ್ಲಾ ನೆರೆಹೊರೆಯ ದೇಶಗಳಲ್ಲಿ ನಾನು ರಸ್ತೆಯ ಪಕ್ಕದಲ್ಲಿ ಆಲದ ಮರಗಳನ್ನು ನೆಟ್ಟಿದ್ದೇನೆ. ಎಲ್ಲ ಮನುಷ್ಯರು ಮತ್ತು ಪ್ರಾಣಿಗಳು ಆ ಮರಗಳಿಂದ ನೆರಳು ಪಡೆಯುತ್ತಿವೆ. ಬಾವಿಗಳನ್ನು  ನಿಮಿ೯ಸಿದೆನೆ, ಪ್ರಯಾಣಿಕರಿಗಾಗಿ ವಿಶ್ರಾಂತಿ ಕೊಣೆಗಳನ್ನು ನಿರ್ಮಿಸಿದ್ದೇನೆ. ಹಾಗೂ ಆಸ್ಪತ್ರೆಗಳು ಮತ್ತು ಔಷಧಿಗಳ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳುತ್ತಾನೆ.

ಅಶೋಕ 84 ಸಾವಿರ ಚೈತ್ಯಗಳು, ಸ್ತೂಪಗಳು, ಬೌದ್ಧ ವಿಹಾರಗಳು ಮತ್ತು ಬೌದ್ಧ ಸ್ಥಳಗಳನ್ನು ನಿರ್ಮಿಸಿದನು. ಮತ್ತು ಕ್ರಿಸ್ತಪೂರ್ವ 258 ರಲ್ಲಿ ತನ್ನ ರಾಜ್ಯದ್ಯಂತ ರಾಜ್ಯೋತ್ಸವದ ಅಂಗವಾಗಿ ದೀಪಗಳನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಿದನು. ಅಂದಿನಿಂದ ಈ ದೀಪಗಳ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.

ಮಹಾನ್ ಚಕ್ರವರ್ತಿ ಅಶೋಕನು ಭಾರತದಲ್ಲಿ ಸಮಾನತೆ ಮತ್ತು ಸಹೋದರತ್ವವನ್ನು ಆಧರಿಸಿದ ಸಾರ್ವಜನಿಕ ಕಲ್ಯಾಣ ರಾಜ್ಯ ವ್ಯವಸ್ಥೆಯ ಅಡಿಪಾಯವನ್ನು ಹಾಕಿದ್ದನ್ನು ನಾವು ನೋಡುತ್ತೇವೆ. ಬುದ್ಧನ ವಿಚಾರಗಳನ್ನು ಪ್ರಚಾರ ಮಾಡಲು ತನ್ನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರರನ್ನು ಶ್ರಿಲಂಕಾ ಮತ್ತು ಚೀನಾಕ್ಕೆ ಕಳುಹಿಸುವ ಮೂಲಕ ಬೌದ್ಧ ಧರ್ಮವನ್ನು ಹರಡುವ ಪ್ರಮುಖ ಐತಿಹಾಸಿಕ ಕೆಲಸವನ್ನು ಅಶೋಕ ಮಾಡಿದನು. ಬೌದ್ಧ ಭಿಕ್ಖುಗಳನ್ನು ಬರ್ಮಾ, ಟಿಬೆಟ್, ಜಪಾನ್ ಸೇರಿದಂತೆ ಹಲವು ದೇಶಗಳಿಗೆ ಪ್ರಚಾರ ಮಾಡಲು ಕಳುಹಿಸಿದ.ಅಶೋಕನ ಈ ಪ್ರಯತ್ನದಿಂದಾಗಿ ಜಗತ್ತಿಗೆ ಭಾರತವು 'ವಿಶ್ವಗುರು' ಆಗಲು ಸಾಧ್ಯವಾಯಿತು.

ಆದರೆ ಕ್ರಿಸ್ತಪೂರ್ವ 185 ರಲ್ಲಿ ಕೊನೆಯ ಮೌರ್ಯ ಚಕ್ರವರ್ತಿ ಬೃಹದೃತ್ತನನ್ನು ಬ್ರಾಹ್ಮಣ ಸೇನಾಧಿಪತಿಯಾದ ಪುಷ್ಯಮಿತ್ರ ಶುಂಗ ಹತ್ಯೆಗೈದು ಮೌರ್ಯ ಸಾಮ್ರಾಜ್ಯವನ್ನುಮುಗಿಸಿದನು. ಇತಿಹಾಸದಲ್ಲಿ ಈ ಘಟನೆ ಬೌದ್ಧ ಧಮ೯ ನಶಿಸಲು ಒಂದು ಕಾರಣವಾಯಿತು. ಪುಶ್ಯಮಿತ್ರ ಶುಂಗನು ಮಗಧ ರಾಜ್ಯವನ್ನು ವಶಪಡಿಸಿಕೊಂಡು ಶುಂಗ ಮನೆತನ ಸ್ಥಾಪಿಸಿದನು. ಆನಂತರ ಆತನು ಲಕ್ಷಾಂತರ ಬೌದ್ಧ ಭಿಕ್ಖುಗಳ ಹತ್ಯೆ ಮಾಡಿದನು. ಚಕ್ರವರ್ತಿ ಅಶೋಕ ನಿರ್ಮಿಸಿದ 84 ಸಾವಿರ ಬೌದ್ಧ ವಿಹಾರಗಳು ಮತ್ತು ಸ್ತೂಪಗಳನ್ನು ನಾಶಮಾಡಿದನು. ನಂತರ ಬ್ರಾಹ್ಮಣ ಪುರೋಹಿತರು ಕ್ರಿ.ಶ. 300 ರಿಂದ 1200 ರವರೆಗಿನ ಅವಧಿಯಲ್ಲಿ  ಧಮ್ಮ ವಿಜಯ ದಶಮಿಯನ್ನು ರಾಮ-ರಾವಣ ಯುದ್ಧ ಮತ್ತು ದುರ್ಗಾ-ಮಹಿಷಾಸುರ ಯುದ್ಧಗಳೆಂದು ಬರೆದು ಪ್ರಚಾರ ಮಾಡಿದರು. ಹಿಗೆ ಮುಂದೆ ಇದು  'ಬಹುಜನ ಹಿತಾಯ ಬಹುಜನ ಸುಖಾಯ' ಹೋಗಿ 'ಬಹುಜನ್ ಅಹಿತಾಯ್ ಮತ್ತು ಬಹುಜನ್ ದುಃಖಾಯ್' ಆಯಿತು.

ಆದ್ದರಿಂದ, ಬಾಬಾಸಾಹೇಬ್ ಡಾ.ಅಂಬೇಡ್ಕರ್, ಭಾರತದ ಸಂವಿಧಾನದ ಅನುರೂಪ ಒಂದು ಸಮತಾವಾದಿ-ಪ್ರಜಾಪ್ರಭುತ್ವ ಭಾರತದ ಸೃಷ್ಟಿಗಾಗಿ ಮತ್ತು ಭಾರತೀಯ ಬಹುಜನ ಸಮಾಜದ ಅಭಿವೃದ್ಧಿ ಮತ್ತು ಪ್ರಗತಿಗಾಗಿ ವಿಜಯ ದಶಮಿಯ ದಿನ (ಅಕ್ಟೋಬರ್ 14, 1956)  ನಾಗವಂಶಿಗಳ ನಾಡು ನಾಗಪುರದಲ್ಲಿ 5 ಲಕ್ಷ ಜನರ ಸಮ್ಮುಖದಲ್ಲಿ ಅವರು ಬೌದ್ಧಧರ್ಮವನ್ನು ಸ್ವಿಕಾರ ಮಾಡುವ ಮೂಲಕ ಬ್ರಾಹ್ಮಣ ವ್ಯವಸ್ಥೆಯ ಮೇಲೆ ದಾಳಿ ಮಾಡಿದರು ಮತ್ತು ಅವರು ಬೌದ್ಧ ಧಮ್ಮ ಚಕ್ರಕ್ಕೆ ಅಗ್ರಗತಿಯನ್ನು ನಿಡಿದರು. ಅಂದಿನಿಂದ ಈ ಧಾರ್ಮಿಕ-ಸಾಂಸ್ಕೃತಿಕ ಅಭಿಯಾನವು ನಿರಂತರವಾಗಿ ನಡೆಯುತ್ತಿದೆ ಮತ್ತು ನಡೆಯುತ್ತದೆ.
 ✍️ ನಂದಾದೀಪ ಬೋರಳೆ
 #BAMCEF
 #Buddhist international Network.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...