ಸದ್ದಿಲ್ಲದೆ ನಡೆದಿದೆ ಸಾಧನೆಗಾಗಿ
ಈ ಒಂದು ಕಾಯಕ
ಬಿಡದೆ ಸಾಗಬೇಕು ಪ್ರತಿಕ್ಷಣ
ಏರುಪೇರುಗಳ ದಾಟಿದ ಜೀವನ
ನಿಲ್ಲದೆ ಮಾಡು ನಿನ್ನ ಯಾನ
ಅಳುಕದೆ ಅಂಜದೆ ಮುನ್ನಡೆಯಬೇಕು ಇಲ್ಲಿ
ಸಹನೆ ತಾಳ್ಮೆ ಇರಬೇಕು ಸದಾ ನಿನ್ನಲ್ಲಿ
ನಿನ್ನ ಕಾರ್ಯ ಉತ್ತಮವಾಗಿರಬೇಕು ಎಂದು ಸದಾ ಹೇಳಿಕೊ ನಿನ್ನಲ್ಲಿ
ಶ್ರಮಿಸಬೇಕು ನಿರಂತರ ನೀ ಇಲ್ಲಿ
ಧೈರ್ಯದಿಂದಲೇ ಮುನ್ನಡೆ ಮುನ್ನಡೆ ನೀ ಇಲ್ಲ
ನಿನ್ನ ಮೇಲಿನ ನಂಬಿಕೆಯಲ್ಲಿ
ಸದಾ ನೀ ಮುಂದೆ ಸಾಗು ಜ್ಞಾನದ ಅನ್ವೇಷಣೆಯಲ್ಲಿ
ಹಿಂದೆಳೆಯುವ ಕೈ ಸಾವಿರಾರು
ಸಕಾರಾತ್ಮಕವಾಗಿ ನೀ ಎಂದಿಗೂ ಇರು
ಅನಿವಾರ್ಯವೆಂದಾಗ ಬಂದವನು ಬಿಡು
ಸಾಧನೆಗಾಗಿ ನಿನ್ನ ಸಮಯ ಇಡು
ಸಾಧಿಸಿದಾಗ ಬರುವುದು ಬೆಳದಿಂಗಳು ನೋಡು
- ಸಂಧ್ಯಾ ಭಟ್ ಶಿರಸಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ