ಸೋಮವಾರ, ನವೆಂಬರ್ 22, 2021

ಚಿತ್ರಗವನ - ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಮಂಡ್ಯ.

ಕಿಟಿಕಿ ಕುಡ್ಯಯ ಮೇಲೆ ಕುಳಿತಿರುವ
ಜೋಡಿ ಶುಕಗಳ ಕಂಡು ಏನ ಬಯಸಿದೆ,,
ಒಳಚಿತ್ತದಿ ಯಾರ ನೂತ  ನೆನದು
ಯಾರ ಆಗಮನಕೆ ಕಾದಿದೆ,,//೧//

ಅಂದದ ಹಸುರು ಕೆಂಪು ಮಿಶ್ರಿತ
ಲಂಗ ರವಿಕೆ ದವಣಿ ತೊಟ್ಟು,,
ಕೈಗಳ ಜೋಡಿಸಿ ಕುಳಿತ ನೋಟದಿ
ಚಂದದ ಕರಕೆ ಕಂಕಣವ ತೊಟ್ಟು,,//೨//

ಕಾಮನಬಿಲ್ಲಂತ ಉಬ್ಬಿನ ಸೊಬಗಿನ
ಸೌಂದರ್ಯದ ಚಂದದ ಗೊಂಬೆಯೇ,,
ಕಿವಿಗೆ ಹರಳಿನ ಚಿನ್ನದ ಓಲೆಯ
ಧರಿಸಿರುವ ಅಂದಗಾತಿಯೇ,,//೩//

ಯಾರೇ ನೀನು ಸ್ವರ್ಗ ಗೌರಿ
ನಗು ಮೊಗದ ಚೆಲುವ ಸುಂದರಿಯೇ,,
ಹಣೆಯಲಿ ಸಿಂಧೂರ ತಿಲಕವಿಟ್ಟು
ಅರಳಿದ ನಯನದ ಸಿಂಗಾರಿ ಬಂಗಾರಿಯೇ,,//೪//
- ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...