ಸೋಮವಾರ, ನವೆಂಬರ್ 22, 2021

ಚಿತ್ರಗವನ - ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಮಂಡ್ಯ.

ಕಿಟಿಕಿ ಕುಡ್ಯಯ ಮೇಲೆ ಕುಳಿತಿರುವ
ಜೋಡಿ ಶುಕಗಳ ಕಂಡು ಏನ ಬಯಸಿದೆ,,
ಒಳಚಿತ್ತದಿ ಯಾರ ನೂತ  ನೆನದು
ಯಾರ ಆಗಮನಕೆ ಕಾದಿದೆ,,//೧//

ಅಂದದ ಹಸುರು ಕೆಂಪು ಮಿಶ್ರಿತ
ಲಂಗ ರವಿಕೆ ದವಣಿ ತೊಟ್ಟು,,
ಕೈಗಳ ಜೋಡಿಸಿ ಕುಳಿತ ನೋಟದಿ
ಚಂದದ ಕರಕೆ ಕಂಕಣವ ತೊಟ್ಟು,,//೨//

ಕಾಮನಬಿಲ್ಲಂತ ಉಬ್ಬಿನ ಸೊಬಗಿನ
ಸೌಂದರ್ಯದ ಚಂದದ ಗೊಂಬೆಯೇ,,
ಕಿವಿಗೆ ಹರಳಿನ ಚಿನ್ನದ ಓಲೆಯ
ಧರಿಸಿರುವ ಅಂದಗಾತಿಯೇ,,//೩//

ಯಾರೇ ನೀನು ಸ್ವರ್ಗ ಗೌರಿ
ನಗು ಮೊಗದ ಚೆಲುವ ಸುಂದರಿಯೇ,,
ಹಣೆಯಲಿ ಸಿಂಧೂರ ತಿಲಕವಿಟ್ಟು
ಅರಳಿದ ನಯನದ ಸಿಂಗಾರಿ ಬಂಗಾರಿಯೇ,,//೪//
- ಕಟ್ಟೆ ಎಂ. ಎಸ್. ಕೃಷ್ಣಸ್ವಾಮಿ, ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ಶಿಕ್ಷಕರ ದಿನಾಚರಣೆ...

ಸೆ 5 ರಂದು ಶಿಕ್ಷಕರ ದಿನಾಚರಣೆ. ಎಲ್ಲಾ ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ. ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ...