ಸೋಮವಾರ, ನವೆಂಬರ್ 22, 2021

ತಲ್ಲಣಸದಿರು ತನುವ (ಕವಿತೆ) - ಶಿವಾ ಮದಭಾಂವಿ, ಬೆಳಗಾವಿ.

ಅನಿಸುತ್ತಿದೆ ಯಾಕೋ
ಅರಿವಿಲ್ಲದೆ ಹಾಕುತ್ತಿರುವೇ ಚೌಕಾಕಾರ
ಕ್ಷಮಿಸುವೇಯಾ ಏನ್ನ ಮನ
ಬಿಡದಿರು ಎನ್ನ ಮನವ

ಹೇಗಿದ್ದರೂ ನನ್ನಾಕೆ
ಎಲ್ಲಿದ್ದರೂ ನನ್ನಾಕೆ
ಆ ದೇವರೆ ಕೂಡಿಸಿಟ್ಟವನೆ ನಮ್ಮ ಜೋಡಿ
ಇನ್ಯಾಕ ಬೇಕು ಬೇರೆಯವರ ಉಸಾಬರಿ

ಆಗಿರುವೇ ನನ್ನ ಪ್ರಾಣ
ಏಳೇಳು ಜನ್ಮ ನೀ ನನ್ನ ಉಸಿರು
ನೀ ಇಲ್ಲದೆ ಹೋದರೆ
ಇದ್ದಂಗ ಕಗ್ಗತ್ತಲ ಕಾಡ
ಹಿಡಿಯುವುದೊಂದೆ ಮಾರ್ಗ ಪರಶಿವನ ಪಾದ

ಇನ್ನೆಂದೂ ಮಾಡಲಾರೆ ಹೀಗೆಂದು
ಆದರೂ ಇರು ನೀ ಸುರಕ್ಷಿತವಾಗಿ
ಬೆಳಕಲ್ಲೂ ದೂಡುವ ಗೊಸೂಂಬೆಗಳಿರುವರು ಹತ್ತಿರದಲ್ಲಿ

ಬೇಜಾರಾಗಬೇಡ ತಪ್ಪು ನನ್ನದೆ
ಅರಿವಿಲ್ಲದೆ ಚುಚ್ಚುತ್ತಿರುವೇ ಅಂಕುಶ
ಕ್ಷಮಿಸುವೇಯಾ ನನ್ನ
ಕ್ಷಮಿಸುಬಿಡು ಇದೊಮ್ಮೆ
ದೊಡ್ಡ ಮನಸ್ಸು ಮಾಡಿ...
- ಶಿವಾ ಮದಭಾಂವಿ, ಬೆಳಗಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...