ಸೋಮವಾರ, ನವೆಂಬರ್ 22, 2021

ತಲ್ಲಣಸದಿರು ತನುವ (ಕವಿತೆ) - ಶಿವಾ ಮದಭಾಂವಿ, ಬೆಳಗಾವಿ.

ಅನಿಸುತ್ತಿದೆ ಯಾಕೋ
ಅರಿವಿಲ್ಲದೆ ಹಾಕುತ್ತಿರುವೇ ಚೌಕಾಕಾರ
ಕ್ಷಮಿಸುವೇಯಾ ಏನ್ನ ಮನ
ಬಿಡದಿರು ಎನ್ನ ಮನವ

ಹೇಗಿದ್ದರೂ ನನ್ನಾಕೆ
ಎಲ್ಲಿದ್ದರೂ ನನ್ನಾಕೆ
ಆ ದೇವರೆ ಕೂಡಿಸಿಟ್ಟವನೆ ನಮ್ಮ ಜೋಡಿ
ಇನ್ಯಾಕ ಬೇಕು ಬೇರೆಯವರ ಉಸಾಬರಿ

ಆಗಿರುವೇ ನನ್ನ ಪ್ರಾಣ
ಏಳೇಳು ಜನ್ಮ ನೀ ನನ್ನ ಉಸಿರು
ನೀ ಇಲ್ಲದೆ ಹೋದರೆ
ಇದ್ದಂಗ ಕಗ್ಗತ್ತಲ ಕಾಡ
ಹಿಡಿಯುವುದೊಂದೆ ಮಾರ್ಗ ಪರಶಿವನ ಪಾದ

ಇನ್ನೆಂದೂ ಮಾಡಲಾರೆ ಹೀಗೆಂದು
ಆದರೂ ಇರು ನೀ ಸುರಕ್ಷಿತವಾಗಿ
ಬೆಳಕಲ್ಲೂ ದೂಡುವ ಗೊಸೂಂಬೆಗಳಿರುವರು ಹತ್ತಿರದಲ್ಲಿ

ಬೇಜಾರಾಗಬೇಡ ತಪ್ಪು ನನ್ನದೆ
ಅರಿವಿಲ್ಲದೆ ಚುಚ್ಚುತ್ತಿರುವೇ ಅಂಕುಶ
ಕ್ಷಮಿಸುವೇಯಾ ನನ್ನ
ಕ್ಷಮಿಸುಬಿಡು ಇದೊಮ್ಮೆ
ದೊಡ್ಡ ಮನಸ್ಸು ಮಾಡಿ...
- ಶಿವಾ ಮದಭಾಂವಿ, ಬೆಳಗಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...