ಸೋಮವಾರ, ನವೆಂಬರ್ 22, 2021

ಓದಿದಷ್ಟು ದಾಹ ತೀರದು(ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ರವಿ ಬೆಳಗೆರೆಯವರ ಅಕ್ಷರಗಳ ಬರವಣಿಗೆಯ ಜ್ಞಾನ ಕಣಜವದು. 

"ದಿ ಅನ್ ಸ್ಟಾಪೆಬಲ್ ವ್ರೈಟಿಂಗ್ ಮಶಿನ್ ಎಂದರೆ, 
ದಿ ಜರ್ನಿ ಆಫ್ ರವಿ ಬೆಳಗೆರೆ"ಯವರನ್ನು ಕೈ ಮಾಡಿ ತೋರಿಸಲೇಬೇಕು...... 
ಅಕ್ಷರಗಳ ಅಬ್ಬರದಿಂದ ಅಂಬರದಲ್ಲಿ ರಾರಾಜಿಸುತ್ತಿದ್ದ ರವಿ ಬೆಳಗೆರೆ. 
ಚೂರಿಗಿಂತ ಚೂಪು- ರವಿ ಬೆಳಗೆರೆಯವರ  ಲೇಖನಿಯ ಛಾಪು.

ರವಿ ಕಾಣದ್ದನ್ನು ಕವಿಕಂಡ-ರವಿ-ಕವಿ ಇಬ್ಬರೂ ಕಾಣದ್ದನ್ನು ಈ ರವಿ ಬೆಳಗೆರೆ ಕಂಡ ಎಂದರೆ ಸರಿ ಹೊಂದುವ ಮಾತಾಗಿದೆ.

ರವಿ ಬೆಳಗೆರೆ ಎಂದರೆ ಆ ವ್ಯಕ್ತಿತ್ವ ಹಾಗೇ ಕಣ್ಮುಂದೆ ಬಂದು ನಿಲ್ಲುತ್ತೆ.
ಅದು ನಾನು ಪದವಿ ಓದುತ್ತಿರುವ ಸಮಯ. 
ಅದಕ್ಕಿಂತ ಮುಂಚೆ ಹಾಯ್ ಬೆಂಗಳೂರು ಪತ್ರಿಕೆಯ ಬಗ್ಗೆ ಕೇಳಿದ್ದೆ. ಆದರೆ ಆಸಕ್ತಿ ತೋರಲಿಲ್ಲ. ಒಂದು ವಾಟ್ಸಪ್ ಸ್ಟೇಟಸ್ ನ ವೀಡಿಯೋ ಮಾತ್ರ ನೋಡಿದ್ದು.
ಅದ್ಯಾವುದೆಂದರೆ "ಸರ್ ದುಡ್ಡು ಮಾಡೋದು ಹೇಗೆ... " ಎನ್ನುವ  ವೀಡಿಯೋ ನೋಡಿದ್ದೇ ತಡ. 
ಅಲ್ಲಿಂದ ರವಿಬೆಳಗೆರೆಯ ಹಾಯ್ ಬೆಂಗಳೂರಿನ ಪತ್ರಿಕೆಯ ಕಡೆಗೆ ಒಲವು, ಅವರ ಬಗೆಗಿನ ಹುಡುಕಾಡುವಿಕೆ, ತಡಕಾಡುವಿಕೆ, ಬುಕ್ಸ್, ಓ ಮನಸೇ ಮ್ಯಾಗ್ಸಿನ್,ಅಂತರ್ಜಾಲದಲ್ಲಿ ಅವರ ಬಗ್ಗೆ ಏನೇನುಂಟೋ ಅವಷ್ಟನ್ನೂ ಜಾಲಾಡಿ ಜರಡಿ ಹಿಡಿದು ಸಾಣಿಸಿದ್ದೆ.
ಅಷ್ಟೊಂದು ಆಸೆ. 

ಅದಕ್ಕಿಂತಲೂ ಹೆಚ್ಚು ರವಿಬೆಳಗೆರೆಯವರು ಬಿಡುಗಡೆ ಮಾಡುವ ಧ್ವನಿಸುರುಳಿಗಳು ಒಂದಕ್ಕಿಂತ ಒಂದು ಅಚ್ಚುಮೆಚ್ಚು ಹಿಡಿಸುತ್ತಿದ್ದವು ಅವೇನೋ ಕೇಳಿಸಿಕೊಳ್ಳುವ ಹುಚ್ಚ. 
ಅದರಲ್ಲಿ ತುಂಬಾ ಇಷ್ಟವಾದದ್ದು  ಅವರ ಸರ್ ದುಡ್ಡು ಮಾಡೋದು ಹೇಗೆ ಎಂಬುವಲ್ಲಿ ಬರುವ ಕೊಟ್ರೇಶಿಯ ಕಥೆ ಎಂದಾಕ್ಷಣ ಏನೋ ಒಂದು ಹುಮ್ಮಸ್ಸು... 

ಇನ್ನೊಂದು ಹಾಯ್ ಬೆಂಗಳೂರು ಕಾಣಲಾರೆವು, ಇನ್ನೊಬ್ಬ ರವಿ ಬೆಳಗೆರೆ ಕಾಣಲಾರೆವು. 
ನಿದ್ದೆಗಣ್ಣಲ್ಲೂ ರವಿಬೆಳಗೆರೆಯವರ ಹೆಸರು ಕೇಳಿದಾಗ ತಬ್ಬಿಬ್ಬಾಗುವ ಅನೇಕರು ತುಂಬಾ ಭಯಭೀತರಾಗಿರುತ್ತಿದ್ದರು(ಹಾಯ್ ಬೆಂಗಳೂರಿನ ಸಂಪಾದಕೀಯದಲ್ಲಿ). 

ಆಡು ಮುಟ್ಟದ ಸೊಪ್ಪಿಲ್ಲ ಎಂಬ ನುಡಿಯಂತೆ ಬೆಳಗೆರೆಯವರು ತಲುಪದ ಜಾಗಲವಿಲ್ಲ, ಮುಟ್ಟದ ವಿಷಯವಿಲ್ಲ,ಮಾತಾಡದ ವಿಷಯವಿಲ್ಲ. ಅವನ್ನೆಲ್ಲ ನನ್ನ ಹತ್ತಿರ ಹೇಳಲು ಸಾಧ್ಯವಿಲ್ಲ. 
ಅವರನ್ನು ಮುಟ್ಟಲೂ ಸಾಧ್ಯವಿಲ್ಲ. 
ಏಕೆಂದರೆ ಬೆಳಗೆರೆಯವರು ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದ್ದರಲ್ಲಾ. 
ಅದೊಂದು ಮೇರು ಪರ್ವತ, ಜ್ಞಾನದ ಗಣಿ, ಅಕ್ಷರಗಳಿಂದಲೇ ಜ್ವಾಲೆ ಎಬ್ಬಿಸುವ ಜ್ವಾಲಾಮುಖಿ. 

ರವಿ ಬೆಳಗೆರೆ ನೋಡಿದರೆ ಮುದ್ದು ಮೊಗದ ಕರುನಾಡ ಕುವರ, 
ಸರಸ್ವತೀ ಪುತ್ರ, 
ಪತ್ರಿಕಾಲೋಕದ ಮೇರು ವರದಿಗಾರ ಇವರ ಜ್ಞಾನದ ಮುಂದೆ ನಿಲ್ಲುವವರು ಯಾರ.. 
ಪ್ರತಿಭಾನ್ವಿತ ಸೂತ್ರಧಾರ-ಪಾತ್ರಧಾರ, 
ಸಹಾಯಹಸ್ತದ ಸಾಹುಕಾರ, 
ಅಂತವರ್ಯಾರೂ ಇನ್ನೂ ನಮಗೆ ಸಿಗಲಾರ, ಹೊಳೆಯುತ್ತಿರುವ ನಕ್ಷತ್ರ, 
ಛಲದಂಕ ಮಾತುಗಾರ,
ದೂರದೃಷ್ಟಿಯುಳ್ಳ ಬರವಣಿಗೆಯ ಹಂಟರ್, 
ದೂರದರ್ಶನದಲ್ಲಿ ಮಿನುಗುವ ಸ್ಟಾರ್, 
ದಿ ಲೀಡರ್ ಆಫ್ ಲಿಟ್ರೇಚರ್... 

ಅವರ  ಬರಹಗಳ ಪುಸ್ತಕದ ಜೊತೆಗಿನ ಜರ್ನಿಯು ನಮಗೆ ಪಾಠ, 
ಅವರ ಬಗ್ಗೆ ಓದುವಿಕೆ ಇನ್ನೂ ಮುಗಿಯದ ಆಟ... 
ರವಿಬೆಳಗೆರೆಯವರ ಅದ್ಭುತ ಅನೇಕ ಬರಹ, 
ಅವಗಳನ್ನು ಓದುತಿರೆ/ಧ್ವನಿ ಸುರುಳಿಗಳ ಆಲಿಸುತಿರೆ ತೀರದ ಓದುವಿಕೆಯ/ಆಲಿಸುವಿಕೆಯ ದಾಹ.... 
ಅಂತವರನ್ನು  ಕಂಡಿದ್ದು, ಅವರ ಬರವಣಿಗೆ ಓದುತ್ತಿರುವುದು,ಅವರ ಧ್ವನಿ ಆಲಿಸುತ್ತಿರುವ ನಾವೇ ಭಾಗ್ಯವಂತರು... 

ರವಿ ಬೆಳಗೆರೆಯವರು ಹೇಳುವ ಕೊಟ್ರೇಶಿಯ ಸಾಲಿನಲ್ಲಿ ಬರುವವರಲ್ಲಿ ನಾನೂ ಒಬ್ಬಾತ, 
ರವಿಬೆಳಗೆರೆಯವರ ಬರವಣಿಗೆ, ಧ್ವನಿಯನ್ನು ಸದಾ ಹಿಂಬಾಲಿಸುವಾತ.... 
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.
8762110543
7676106237.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...