ಸೋಮವಾರ, ನವೆಂಬರ್ 22, 2021

ಕವಿ ಮಾನ್ಯ (ಕವಿತೆ) - ಜಿ.ಟಿ.ಆರ್. ದುರ್ಗ, ಬಂಗಾರಪೇಟೆ.

ಸಾಹಿತ್ಯ ಬರೆಯುವರ ಕೈಯಲ್ಲಿದೇ....
ಅದರಲ್ಲಿ ಬರೆಯಬೇಕು ಸತ್ಯ ಒಂದಿದೇ...
ನಿತ್ಯದ ಉಸಿರಂತೆ ಗಾಳಿಯಂತಾಬೇಕು
ಬೆಳಕನು ಕೊಡುವ ಸೂರ್ಯನಂತಿರಬೇಕು

ರವಿ ಕಾಣದನ್ನು ಕವಿ ಕಂಡು ಬರೆಯುವ
ಜಗದಲ್ಲಿನ ಕುರುಹುಗಳ ಹುಡುತಲಿರುವ
ನಿಗುಢವಾದ ವಿಷಯವ ಲಿಖಿತದಿ ಮುದ್ರಿಸುವ
ಅಕ್ಷರದಲ್ಲಿ ಚಿತ್ರಿಸುವ ಮನಸು ಶುಭ್ರ ಮಾಡುವ

ಎಲ್ಲರಲ್ಲು ಒಂದೊಂದು ನೋವುಗಳ ಕಂಡು
ಪದಗಳ ಪದ್ಯದಲ್ಲಿ ಸ್ವರ ರಾಗವನ್ನು ಕಂಡು
ಕಲ್ಲಲ್ಲಿ ಕೆತ್ತುವಂತ ಶಿಲೆಯಂತೆ ರೂಪಿಸುವ
ಪ್ರಕೃತಿ ನಾಚಿಸುವಂತ ಹಾಡೊಂದು ಬರೆಯುವ

ಕವಿ ವರ್ಮನ ಕಲ್ಪನೆ ತಿಳಿದವರಿಲ್ಲ
ಜಗಕೆ ಬೆಳಕು ಕೊಡುವ ಸೂರ್ಯ ಚಂದ್ರರೆಲ್ಲ
ದಿನವು ಪೃಥ್ವಿ ಕಾಯುಂತೆ ಲೋಕ ಚಿಂತನೆ
ಕವಿಯ ಬರಹದಲ್ಲಿ ಜನರ ಜ್ಞಾನ ಚಿಂತನೆ

ಯಾರಿಗೂ ಕೆಟ್ಟದನ್ನು ಆಲೋಚಿಸದ ಕಲ್ಪನೆ
ಇರಿವೆಂಭತ್ತು ಕೋಟಿ ಜೀವ ಕೇಳುವಂತ ಸತ್ಯನೆ
ಬರೆಯವ ಕವಿಯ ಬೆಳಕಿಗೆ ತರುವ ಮಹಾನೀಯ
ಬರಲಿ ಸಾಹಿತ್ಯದ ಅರಮನೆಯ ಕವಿಮಾನ್ಯ
- ಜಿ. ಟಿ. ಆರ್. ದುರ್ಗ, ಜಿ ಹೆಚ್ ಎಲ್ , ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...