ಸೋಮವಾರ, ನವೆಂಬರ್ 22, 2021

ದಾಸಶ್ರೇಷ್ಠ (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಶ್ರೇಷ್ಠರಲ್ಲಿ ಶ್ರೇಷ್ಠ ದಾಸ ನೆನಿಸಿದೆˌˌ
 ಹರಿಭಕ್ತಿಗೆ ಮಿಗಿಲಿಲ್ಲವೆಂದರುಹಿದೆˌˌˌ

 ಕನಕ-ಪುರಂದರರು ದಾಸ ಶ್ರೇಷ್ಠರೊಳುˌ
 ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳು ˌˌˌˌ

ಕುಲ ಕುಲವೆಂದು ಹೊಡೆದಾಡದಿರೆಂದು 
ಸಮರ ಸಾರಿದಿರಿ ದಿಟತನದಿ ಅಂದುˌˌˌ

 ತಿರುಪತಿ ಆರಾಧ್ಯನ ಕೃಪಾಸಿಂಧು ˌˌ
ಹೆತ್ತವರ ಪ್ರೀತಿಯ ತಿಮ್ಮಪ್ಪನೆ ಅಂದುˌˌˌ

 ಮೋಹನ ತರಂಗಿಣಿ ರಾಮಧಾನ್ಯಚರಿತೆ
 ಅರಳಿದವು ಹರಿಭಕ್ತಿಸಾರ ನಳಚರಿತ್ರೆ ˌˌˌˌ

ಬಾ ರಂಗ ಎನ್ನ ಮನಕೆ ಹೃದಯ ಸದನಕೆˌˌ
 ಹಾಡಿ ಕರೆದಿರಿ ಬಿಡದೆ ಹರಿಯನು ಮನಕೆ ˌˌˌ

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇˌˌˌ
 ಹರಿದಿದೆ ಹರಿಭಕ್ತಿಯ ಭಾವಲಹರಿಯೇˌˌˌ

 ಬೆಳಗಲಿ ಮನುಕುಲವ ಕನಕನ ಸಂದೇಶˌˌ
 ಅಳಿಯಲಿ ಕುಲಹಿರಿದೆಂಬ ಮದದ ವಿಷ ˌˌˌ
- ಮಧುಮಾಲತಿ ರುದ್ರೇಶ್ ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...