ಭಾನುವಾರ, ನವೆಂಬರ್ 14, 2021

ಚುಟುಕುಗಳು - ಭರತ್ ಕುಮಾರ್ ಆರ್, ಕೊಣನೂರು.

ತವರಿನ ಪ್ರೀತಿ ತಾಯಿ ಇರುವ ತನಕ
ಅಣ್ಣನ ಪ್ರೀತಿ ಅತ್ತಿಗೆ ಬರುವ ತನಕ
ಜನಗಳ ಪ್ರೀತಿ ನಮ್ಮ ಹತ್ತಿರ ಒಂದುಸ್ಥಾನ ಇರುವತನಕ
ಸಂಬಂದಿಕರ ಪ್ರೀತಿ ನಮ್ಮ ಹತ್ತಿರ ಹಣ ಇರುವತನಕ
ನನ್ನ ಪ್ರೀತಿ ಸಾಯುವ ತನಕ /೧/

ತಾಯಿ ಇಲ್ಲದಿದ್ದರೆ ಹಸಿವಿನ ಬೆಲೆ ತಿಳಿಯುತ್ತದೆ
ಅದೇ ತಂದೆ ಇಲ್ಲದಿದ್ದರೆ ಮನೆಯ ಜವಾಬ್ದಾರಿ ಬೆಲೆ ತಿಳಿಯುತ್ತದೆ
ಅದೇ ತಂದೆ ತಾಯಿ ಇಬ್ಬರು ಇಲ್ಲದಿದ್ದರೆ ಜೀವನದ ಬೆಲೆ ತಿಳಿಯುತ್ತದೆ /೨/

ನೆನದವರಿಗೆ ನೆನಪಾಗಿ
ನೊಂದವರಿಗೆ ನೆರವಾಗಿ
ಪ್ರೀತಿಸುವ ಹೃದಯಕ್ಕೆ ಉಸಿರಾಗಿ
ಸ್ನೇಹಿತರ ಬದುಕಿಗೆ ಬೆಳಕಾಗಿ
ಇರುವುದು ನಿಜವಾದ ಸ್ನೇಹ/೩/

ಚನ್ನಾಗಿರೊ ಮನಸ್ಸು ಹುಡುಕಿ
ಆದರೆ ಚನ್ನಾಗಿರೊ ಮುಖ ಹುಡುಕಬೇಡಿ
ಒಳ್ಳೆಯ ಮುಖ ಯಾವತ್ತು ಚನ್ನಾಗಿರೊಲ್ಲ
ಆದರೆ ಒಳ್ಳೆ ಮನಸ್ಸು ಯಾವತ್ತು ಬೇಜಾರ್ ಮಾಡಲ್ಲ....... ಓಕೆ... ಫ್ರೆಂಡ್/೪/

ನಮ್ಮ ಮುಖದ ಸೌoದರ್ಯವನ್ನು
ನಾವೇ ನೋಡಿಕೊಳ್ಳಲು ಸಾಧ್ಯವಿಲ್ಲ
ಅದಕ್ಕೆ ಕನ್ನಡಿಯ ಸಹಾಯ ಬೇಕು
ಹಾಗೆ ನಮ್ಮ ಸರಿ ತಪ್ಪುಗಳನ್ನು ನಾವೇ
ಸರಿಪಡಿಸಿ ಕೊಳ್ಳಲು ಸಾಧ್ಯವಿಲ್ಲ
 ಅದಕ್ಕೆ ಕನ್ನಡಿಯಂಥಹಾ ಮನಸಿರೊ ಸ್ನೇಹಿತರು ಬೇಕು/೫/

ವಿದ್ಯಾರ್ಥಿಗಳೇ ಚಿನ್ನ
ವಿದ್ಯೆಯೇ ಫಲಕ
ವಿದ್ಯಾಮಂದಿರವೇ ಗಣಿ
ಹೆಣ್ಣಿಗೆ ಅಂದವೇ ಆಶ್ರಯ
ಹೂವಿಗೆ ಪರಿಮಳದ ಆಶ್ರಯ
ಕಾಲೇಜಿಗೆ ವಿದ್ಯಾರ್ಥಿಗಳ ಆಶ್ರಯ
ವಿದ್ಯೆಗೆ ಗುರುಗಳ ಆಶ್ರಯ/೬/
- ಭರತ್ ಕುಮಾರ್ ಆರ್ ಸರಗೂರು ಕೊಣನೂರು ಹೋಬಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...