ಭಾನುವಾರ, ನವೆಂಬರ್ 14, 2021

ಕಲಿಸಿದವರಾರು? (ಕವಿತೆ) - - ಜಗದೀಶ ತಿಗರಿ, ವಿಜಯನಗರ ಜಿಲ್ಲೆ.

ಆ ಶ್ವಾನಕ್ಕೆ ಗುರು ಯಾರು? 
ಮೊಳೆಯಿತು ಹೇಗೆ ನಿಯತ್ತಿನ ಚಿಗುರು..
ಹಸಿದ ಹೊಟ್ಟೆಗೆ ಸಿಕ್ಕ 
ರೊಟ್ಟಿಯ ತುಣುಕು ಕಲಿಸಿತೇನೋ... 
ಸಾಲಾಗಿ ಹೊರಟಿವೆ ನೋಡಲ್ಲಿ ಇರುವೆ
ಆ ವಿಧದ ಶಿಸ್ತಿನ ಕಿರೀಟವಿಟ್ಟವರಾರು?
ಅಗೋ ಅಲ್ಲಿ ನೋಡು ಹದ್ದು
ಮೋಡಗಳ ಮಹಡಿಯ ಮೇಲೆ ವಿರಾಜಮಾನ
ಅದೆಂಥಾ! ಆತ್ಮ ವಿಶ್ವಾಸ
ಮೂಡಿಸಿದ ಮಹನೀಯನಾರು?
ಕಾಸು ಕೂಡಿಡಲಿಲ್ಲ, ವೇಷ ತೊಡಲೇ ಇಲ್ಲ;
ಮೊಸವನಂತು ಮಾಡಲೇ ಇಲ್ಲ;
ಹುಲ್ಲು ಹಾಸಿಗೆಯಲ್ಲಿ ಸುಖ ಶಯನ;
ಎಲ್ಲಿ ಕಲಿತವು ಈ ಖಗ - ಮೃಗಗಳೆಲ್ಲ,
ಮನುಜ ಕಲಿಯದ ಈ ಸರಳ ಪಾಠವ?
- ಜಗದೀಶ ತಿಗರಿ 
ಪ್ರಥಮ ದರ್ಜೆ ಸಹಾಯಕ
ಹೊಳಗುಂದಿ
ಹೂವಿನ ಹಡಗಲಿ ತಾ
ವಿಜಯನಗರ ಜಿ
8970273749


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...