ಮಂಗಳವಾರ, ಡಿಸೆಂಬರ್ 14, 2021

ಕೆಲಸ - ಕಾಣಬೇಕು ಸಂತಸ (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಕಾಯಕವೇ ಕೈಲಾಸ, 
ಬದುಕುವುದಕ್ಕೆ ಬೇಕು ಒಂದು ಕೆಲಸ, 
ನಾವು ಮಾಡೋ ಒಳ್ಳೆಯ ಕೆಲಸದಲ್ಲಿ ದೇವರ ವಾಸ, 
ಕಾಯಕದಲ್ಲಿ ಕಾಣಬೇಕು ಸಂತಸ... 
ಕೆಲಸ ಮಾಡ್ತಾ-ಮಾಡ್ತಾ ಜೀವನದ ಆಟ ಗೆಲ್ಲೋ ಓ! ಮನ್ಸಾ, 

ನಿನ್ನ ಬದುಕು - ನಿನ್ನ ಹಕ್ಕು, 
ದುಡಿಮೆಯಿಂದ ಮುಂದುಕು,
ಕಂಡಿದ್ದೆಲ್ಲಾ ಬೇಕು-ನೋಡಿದ್ದೆಲ್ಲಾ ಬೇಕು, 
ಬಯಸಿದ್ದೆಲ್ಲಾ ಬೇಕು,
ಕನಸು ಕಾಣುತ್ತಿರಬೇಕು, 
ಆದರೆ ಅವಶ್ಯಕತೆಗೆ ಏನು ಬೇಕೋ ಅಷ್ಟಿದ್ದರೆ  ಸಾಕು, 
ಇತರರ ನೋಡಿ ಅನುಕರಣೆಯ ಹಿಂದೆ ಬಿದ್ದರೆ ಕೊಳಕು-ಆದರೂ ಕೊಳಕನ್ನು ತೊಳೆದು ಬದುಕು, 

ಮಾಡುವ ಕಾಯಕದಲ್ಲಿ ಶ್ರದ್ಧೆಯಿರಲಿ, 
ಕೀಳರಿಮೆ ಮೂಡದಿರಲಿ,
ಸ್ವಾಭಿಮಾನ ತುಂಬಿರಲಿ,
ಕಷ್ಟವಾದರೂ ಇಷ್ಟವಾಗಿರಲಿ,
ದುಡಿಮೆಯಿಂದ ಕಷ್ಟಗಳು ದೂರಾಗಲಿ,
ಚೈತನ್ಯ ತುಂಬಿ ತುಳುಕುತಿರಲಿ, 
ಬದುಕು ನೆಮ್ಮದಿಯಾಗಿರಲಿ... 

ಕೆಲಸಗಳು ಹಲವಾರು, 
ಕೆಲಸಮಾಡುತ್ತಾ ಬದುಕನ್ನು ಸಾಗಿಸುವ ದಾರಿಗಳೂ ನೂರಾರು, 
ಬಗೆ-ಬಗೆಯ ಮಾತುಗಳನ್ನಾಡಿ- ಹೀಯಾಳಿಸುವ ಜನರು, ಅಂತವರ ಮಾತಿಗೆ ಕಿವಿಗೊಡದೇ ಮುನ್ನಗ್ಗುತ್ತಿರು,
ಆದರೂ ಕೊಂಡಾಡಿ ಖುಷಿಪಟ್ಟು ಮಾತಾಡುವವರು ಕೆಲವರು, 
ಏರು-ಏರು ಎಲ್ಲರನು ದಾಟಿ ಮೇಲೆರು, 
ಮೇಲೆರಿದಾಗ ಹತ್ತಿದ ಏಣಿಯನ್ನು ಮರೆಯದಿರು....
- ಶಾಂತಾರಾಮ ಶಿರಸಿ, ಉತ್ತರ ಕನ್ನಡ..
8762110543
7676106237.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...