ಮಂಗಳವಾರ, ಡಿಸೆಂಬರ್ 14, 2021

ನನ್ನೇಕೆ ನೋಡಕ್ಕೆ ಬರಲಿಲ್ಲ (ಕವಿತೆ) - ಕೆ. ಬಿ. ಮಧು, ಮಂಡ್ಯ.

ಕಣ್ಣಿನ ಹೋಳಗೆ ಕರಗಿದೆ ಮಂಜು.
ಜುಳುಜುಳು ಹರಿಯುತ್ತಿದೆ.       
 ತಡೆಯಿಲ್ಲದೆ ಹನಿಗಳ ಬಿಂದು ಹೊರಹೊಮ್ಮಿದೆ.
ಯಾಕೆ ಬರಲಿಲ್ಲ ತಡಿಯಾಕೆ.


ಹೃದಯದ ಭಾವ ಅರಿಯದೆ ಹೋದೆ.
ಈ ಹೃದಯವು ಬರಡು ಭೂಮಿಯಾಗಿದೆ.
ನೀ ಇಲ್ಲದೆ ಸದಾ ಕಾತರಿಸುತ್ತಿದೆ.
ಇನ್ನೇಕೆ ಬರಲಿಲ್ಲ ನನ್ನ ನೋಡಕ್ಕೆ.

ಕತ್ತಲು ಕವಿದಿದೆ ಮೋಡವು ಮುಸುಕಿದೆ.
ಹೊಂಗಿರಣ ಬೀಳದೆ ನಾ ಬಾಡಿದೆ.
ಮಕರಂದ ಚೆಲ್ಲದೇ ನಾ ಬೆಂದೆ.
ಏಕೆ ಬರಲಿಲ್ಲ ನನ್ನ ಸವಿಯಕ್ಕೆ.

ಮುಗುಳ ಕೋಪಕ್ಕೆ ನನ್ನೇಕೆ ಬಲಿ ಕೊಟ್ಟೆ.
ಬೆಟ್ಟದಷ್ಟು ಪ್ರೀತಿಯ ಏಕೆ ಬಚ್ಚಿಟ್ಟೆ.
ಬೇಡವಾದೆನಾ ನಿನಗೆ ಈ ಚಿಟ್ಟೆ.
ನೀನೇಕೆ ಬರಲಿಲ್ಲ ನನ್ನ ನೋಡಕ್ಕೆ.

 - ಕೆ. ಬಿ. ಮಧು, ಮಂಡ್ಯ. ತಾಲೂಕ್/ಜಿಲ್ಲೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...