ಮರದ ಬೊಡ್ಡೆಯದು ಮೈಚಾಚಿ ಚಿಗುರಿಹುದು
ಬೇರಿಲ್ಲದಿರೆ ರೆಂಬೆಯಲ್ಲಿ?
ಕೊಂಬೆಯೆಲ್ಲಿ?//
ಕಡಿಯುವದು,ಕುಕ್ಕುವದು ಮನುಜ ಸ್ವಭಾವ
ಬೇರು ಬೊಡ್ಡೆಯನಾದರೂ ಉಳಿಸಿಹನಲ್ಲ
ಕಾಯಲವನ ದೈವ//
ಹಕ್ಕಿ ಪ್ರಾಣಿ ಪಕ್ಷಿಗಳಿಗೆಂದೇ ಹುಟ್ಟಿ ಬಂದವರು ನಾವು
ಹೂ ಹಣ್ಣು ಹಸಿರು ಗೊಬ್ಬರ ನೀಡಿ
ನಿಮಗೆಲ್ಲ ಉಸಿರಿತ್ತವರು ನಾವು//
ಅರಿಯದಾಗಿಹಿರಿ ಭವಿಷ್ಯದ ದಿನಗಳ
ಗುಡ್ಡ ಬೆಟ್ಟ ಕಾಡುಗಳ ಹೀಗೇ ಸವರುತ್ತ ಸಾಗಿದರೆ
ಮುಂದೆಲ್ಲಿ ಕಾಣುವಿರಿ
ಕೆರೆ ತೊರೆ ನದಿಗಳ//
ನೀರು ಗೊಬ್ಬರ ಕೊಟ್ಟವರು
ನೀವಲ್ಲ
ಕಾಲಕಾಲಕ್ಕೆ ಮಳೆಯ ಹನಿಸಿ ಪೊರೆದವನು ಆ ದೇವರಲ್ಲ!//
ಪ್ರತಿಭಟಿಸಲಾರೆವೆಂದು ನಿಮ್ಮ ಉರವಣಿಗೆ
ನೀರಿಗಾಗಿ ತತ್ತರಿಸುತ್ತಿರುವಿರಿ ಕಾಣದೇನು ನಮಗೆ
- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
9886590666
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ