ಶುಕ್ರವಾರ, ಫೆಬ್ರವರಿ 11, 2022

ಹಸಿರ ಹಾಡು (ಕವಿತೆ) - ಶ್ರೀಮತಿ ರೇಖಾ ನಾಡಿಗೇರ

ಮರದ ಬೊಡ್ಡೆಯದು ಮೈಚಾಚಿ ಚಿಗುರಿಹುದು
ಬೇರಿಲ್ಲದಿರೆ ರೆಂಬೆಯಲ್ಲಿ?
ಕೊಂಬೆಯೆಲ್ಲಿ?//

ಕಡಿಯುವದು,ಕುಕ್ಕುವದು ಮನುಜ ಸ್ವಭಾವ
ಬೇರು ಬೊಡ್ಡೆಯನಾದರೂ ಉಳಿಸಿಹನಲ್ಲ
ಕಾಯಲವನ ದೈವ//

ಹಕ್ಕಿ ಪ್ರಾಣಿ ಪಕ್ಷಿಗಳಿಗೆಂದೇ ಹುಟ್ಟಿ ಬಂದವರು ನಾವು
ಹೂ ಹಣ್ಣು ಹಸಿರು ಗೊಬ್ಬರ ನೀಡಿ
ನಿಮಗೆಲ್ಲ ಉಸಿರಿತ್ತವರು ನಾವು//

ಅರಿಯದಾಗಿಹಿರಿ ಭವಿಷ್ಯದ ದಿನಗಳ
ಗುಡ್ಡ ಬೆಟ್ಟ ಕಾಡುಗಳ ಹೀಗೇ ಸವರುತ್ತ ಸಾಗಿದರೆ
ಮುಂದೆಲ್ಲಿ ಕಾಣುವಿರಿ
ಕೆರೆ ತೊರೆ ನದಿಗಳ//

ನೀರು ಗೊಬ್ಬರ ಕೊಟ್ಟವರು
ನೀವಲ್ಲ
ಕಾಲಕಾಲಕ್ಕೆ ಮಳೆಯ ಹನಿಸಿ ಪೊರೆದವನು ಆ ದೇವರಲ್ಲ!//

ಪ್ರತಿಭಟಿಸಲಾರೆವೆಂದು ನಿಮ್ಮ ಉರವಣಿಗೆ
ನೀರಿಗಾಗಿ ತತ್ತರಿಸುತ್ತಿರುವಿರಿ ಕಾಣದೇನು ನಮಗೆ

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
9886590666


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...