ಶುಕ್ರವಾರ, ಫೆಬ್ರವರಿ 11, 2022

ಸಾಮಾಜಿಕ ಚಿಂತನೆಗಳ ಹೊತ್ತು ಸಾಗಿದ ಹಾಗೂ ಭಾವನೆಗಳ ಗುಚ್ಛ ಇರುವ ಕೃತಿ ' ನೀ ಬಿಟ್ಟು ಹೋಗುವ ಮುನ್ನ' (ಪುಸ್ತಕ ಅವಲೋಕನ) - ಶ್ರೀ ರಾಜು ಕವಿ ಸೂಲೇನಹಳ್ಳಿ.

ನನ್ನ ಪ್ರೀತಿಯ ಸಹೋದರಿ ಎಂದೇ ಭಾವಿಸುವ ಡಾಕ್ಟರ್ ಅರ್ಚನಾ ಎಂ ಪಾಟೀಲ್ ಅವರು ಉದಯೋನ್ಮುಖ ಕಾವೇರಿಯಾಗಿ ಬರುತ್ತಿದ್ದಾರೆ ಈಗಾಗಲೇ ಒಂದಷ್ಟು ಕೃತಿಗಳನ್ನು ರಚಿಸಿದ್ದಾರೆ ಅಭಿರುಚಿಯನ್ನು ಕಂಡು ಕವನಸಂಕಲನದಲ್ಲಿ ನನಗೆ ಅವಕಾಶ ಮಾಡಿಕೊಟ್ಟ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂಬ ಕವನ ಸಂಕಲನ ಕವಿತೆಗಳನ್ನು ಒಳಗೊಂಡಿದೆ ಅದರಲ್ಲಿ ಮುಖ್ಯವಾಗಿ ಎಲ್ಲಾ ಕವಿತೆಗಳು ಉತ್ತಮವಾದ ಸಂದೇಶ ಮತ್ತು ಸಾಮಾಜಿಕ ಕವಿತೆಗಳಾಗಿವೆ ಅಷ್ಟೇ ಅಲ್ಲದೆ ಎಲ್ಲಾ ಕವಿತೆಗಳನ್ನು ಉತ್ತಮವಾದಂತಹ ಸಮಾಜದಲ್ಲಿನ ಹುಳುಕುಗಳನ್ನು ಕವಿತೆಗಳನ್ನು ರಚಿಸಿದ್ದಾರೆ.
 ಗಮನಿಸಿದಂತೆ ಕವಿತೆಗಳನ್ನು ನೋಡಿದಾಗ ಹೆಸರು ಪ್ರೀತಿಸಬೇಕು ಮಾಡುತ್ತಿರುವ ಕೆಲಸದಲ್ಲಿ ಎನ್ನುವ ಪದ ಸಾಕುವವನ ಮಗುವಾದಾಗ ಹೊಸತನ ನೀನು ಯಾವಾಗಬಹುಶಃ ಎಲ್ಲಾ ಕವಿತೆಗಳನ್ನು ಕಣ್ಣಾಡಿಸಿದಾಗ ನನಗೆ ತಿಳಿದದ್ದು ಈ ಜೀವನದಲ್ಲಿ ಬಹುಮುಖ್ಯವಾಗಿ ನಮಗೆ ಬೇಕಾಗಿರುವಂತಹ ಅಂಶವೆಂದರೆ ಎಲ್ಲರೊಡನೆ ಸಮಾನತೆಯಿಂದ ಹಾಗೂ ಜಾತಿ ವ್ಯವಸ್ಥೆ ಎನ್ನುವುದನ್ನು ಬಿಟ್ಟರೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವುದು ತುಂಬಾ ಮುಖ್ಯವಾಗಿರುತ್ತದೆ ಅಂತ ಮೌಲ್ಯಯುತ ವಿಚಾರಗಳನ್ನು ಪಾಟೀಲರವರು ಹೇಳುವಂತ ಒಂದು ಪ್ರಯತ್ನ ಮಾಡಿದ್ದಾರೆ ಪ್ರೀತಿ-ವಿಶ್ವಾಸಗಳು ಆಧ್ಯಾತ್ಮಿಕ ಸಾಮಾಜಿಕ ಸಾಂಸ್ಕೃತಿಕ ಮೌಲ್ಯವಿರುತ್ತದೆ ಕವಿತೆಗಳಲ್ಲಿ ನಾಲ್ಕರಿಂದ ಎಂಟು ಹತ್ತು ಸಾಲುಗಳಲ್ಲಿ ಮಹತ್ವವನ್ನು ನೀಡಿದ್ದಾರೆ ವಿಚಾರಗಳು ಹೆಣ್ಣಿನ ಕುರಿತು ಭಾರತ ದೇಶದ ಪ್ರೇಮದ ಕುರಿತು ಕುರಿತು ನಾಗರಪಂಚಮಿ ಕುರಿತು ಒಂದು ವಿಚಾರವನ್ನು ತಿಳಿಸುತ್ತದೆ.
 
ಮತ್ತು ಮನಸ್ಸಿನ ಭಾವನೆಗಳನ್ನು ಅಷ್ಟೇ ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುವ ಒಂದು ಸುಮಧುರವಾದ ಪ್ರಯತ್ನವನ್ನು ಬೇರೆ ಬೇರೆ ಇದ್ದರೂ ಉತ್ತಮ ಬರಹ ರಚಿಸಿರುವುದು ಗಮನ ಸೆಳೆಯುತ್ತದೆ. ನಾವು ಕವನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಏನು ಈ ಬಂಧಕೆ ಹೆಸರು, ಈ ಬದುಕು ಒಪ್ಪಿಕೋ, ವಿಶ್ವನಾಥನ ಮಕ್ಕಳು, ಪ್ರೀತಿಸಬೇಕು, ಕನಸು ಕಾಣುವರೆಷ್ಟೋ, ಮಾಡುತ್ತಿರು ನೀ ನಿನ್ನ ಕೆಲಸ, ಕಲಿ, ಅವ್ವ ಎನ್ನುವ ಪದ ಸಾಕು, ಅದೆಲ್ಲ ರವಿಗೂ ಶಶಿಗೂ ಹೋಲಿಕೆ, ಕಾಲಕ್ಕೆ ನೀ ಕೊಟ್ಟ ಹೆಸರು, ಅನ್ನ ತಿನ್ನುವರಿಗೊಂದು ಮನನ, ಮತ್ತೇ ಭ್ರೂಣ ಮಗುವಾದಾಗ, ಹೊಸತನ, ಕಡಲ ಮುಂದೆ ನಿಂತೊಮ್ಮೆ, ಮಂಡಕ್ಕಿ ಬಜ್ಜಿನೂ ತಿನ್ನೋದು ಬಿಡ್ತೇನೆ ನೀ ಸಿಕ್ರೇ, ಅದ್ಯಾವ ಬಾಷೆಯು ದೂರದಿರಿ, ಈ ಎಲ್ಲಾ ಕವನಗಳನ್ನು ಒಂದೊಂದು ಶೀರ್ಷಿಕೆಗೆ ತಕ್ಕಂತೆ ಮೌಲ್ಯ ಹೊಂದಿವೆ.

ಸಾಮಾನ್ಯ ವಿಷಯಗಳು ಆದರೂ ಎಷ್ಟು ಮುಖ್ಯ ಆದು ಎಂತಹ ಪರಿಣಾಮ ಬೀರಬಲ್ಲದು ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ. ಈ ಕವಿತೆಗಳಲ್ಲಿ ಬಹು ಮುಖ್ಯ ಅವ್ವ, ಮಹತ್ವ ಹಾಗೆಯೇ ಕಡಲು ಹೇಗಿದೆ ಮಂಡಕ್ಕಿ ಎಷ್ಟು ಚೆಂದ ಇನ್ನೂ ಮುಂತಾಗಿ ಚಿಕ್ಕ ಚಿಕ್ಕ ಸಂಗತಿಗಳನ್ನು ಕವನಗಳು ಆಗಿ ಪರಿವರ್ತನೆ ಮಾಡಿ ಓದುಗರಿಗೆ ರುಚಿ ಉಣ ಬಡಿಸಿದ್ದಕ್ಕೆ ಧನ್ಯವಾದಗಳು. 

ಇನ್ನೂ ಮುಂದುವರೆದು ನಾ ನಿನ್ನ ಮಗನೇ, ನಿನ್ನ ಕೇಳುವಾಗ ಶುರುವಾಗೋದು,ನಿನ್ನ ಸುಳಿಗೆ ಸಿಲುಕಿ ನೀವು ಎಷ್ಟು ನೆಮ್ಮದಿ, ಸಾಕು ಬೇಕು, ಒಂದು ಜೀವನದ ಪಾಠ ಬಂದವರು, ಮತ್ತೆ ಮೊದಲಿನಂತೆ ಮನೆಯಲ್ಲಿ ಕುಳಿತರೆ ಸಾಕಲ್ಲ, ನೆನಪು ಕಣ್ಣದ ಕಣ್ಣದ ಆರತಿ, ನಿಂತ ನೀರಲ್ಲಿ, ಅವಳಿಗೆ ಮಗನಾದ ಮಗಳು, ನಮ್ಮವ್ವನ ಸಂಭ್ರಮ, ಕರುನಾಡಲ್ಲಿ ಪ್ರಕೃತಿಯ ವಿಸ್ಮಯ, ಅಮೂಲ್ಯವಾದ ಶಾಲೆ ಪರಿಸರ, ಈ ಎಲ್ಲಾ ಕವನಗಳು ಸಾಮಾನ್ಯ ಅಂಶಗಳೇ ಆಗಿದ್ದರೂ ಆಳವಾಗಿ ಓದಿದಾಗ ಸಂಪೂರ್ಣ ಸಾಮಾಜಿಕ ಸಂದೇಶಗಳನ್ನು ಹೊಂದಿರುವ ಚಿಂತನೆಗೆ ಹಚ್ಚುವ ಕವನಗಳಾಗಿವೆ ಎಂಬುದು ನನಗೆ ಅನ್ನಿಸಿತು. 

ಸಹೋದರಿ ಆರ್ಚನಾ ಪಾಟೀಲ್ ಅವರ ವಿವಿಧ ದೃಷ್ಟಿಕೋನದಿಂದ ವಿಭಿನ್ನವಾಗಿ ಕವನ ರಚನೆ ಮಾಡುವ ಸಾಹಸ ಒಂದಷ್ಟು ಒಳ್ಳೆಯ ಕಾರ್ಯ ಎನ್ನಲಾಗಿದೆ. ಇನ್ನೂ ಮುಂತಾಗಿ ಒಂದೊಂದು ಶೀರ್ಷಿಕೆ ಚೆಂದದ ವಿವರಣೆ ಸರಾಗವಾಗಿ ಓದಿಸುತ್ತವೆ ಆದು ಬಹಳ ಮನಸ್ಸಿಗೆ ನಾಟುತ್ತದೆ. ನಮ್ಮ ಸಂಸ್ಕೃತಿಯ ಹಬ್ಬ ಹರಿದಿನ ಹಾಗೂ ಆಚರಣೆಗಳ ಬಗ್ಗೆ ಸಂಪ್ರದಾಯ ಬಗ್ಗೆ ಮಾಹಿತಿ ಕಲೆ ಹಾಕಿ ಬರೆದಿದ್ದಾರೆ ಎಂಬಂತೆ ಪದ ಕಟ್ಟಿದ್ದಾರೆ. ಕರ್ನಾಟಕದ ಪ್ರಸಿದ್ಧ ಸ್ಥಳ ಆದ ಹಂಪೆಯ ಕುರಿತು ಆನಂತರ ಮತ್ತಿತ್ತರ ವಿಷಯಗಳ ಕುರಿತು ಸೂಕ್ಷ್ಮವಾಗಿ ಗಮನಿಸಿ ತನಗೆ ಪ್ರವಾಸ ಹೋದಾಗ ಕಂಡ ದೃಶ್ಯಗಳು ಕಣ್ಣಿಗೆ ಬಿದ್ದಿರಬೇಕು ಅವನ್ನೇ ಪದವಾಗಿಸಿ ಕವಿತೆ ಬರೆಯುವ ಇವರ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ಇಷ್ಟು ಒಟ್ಟಾರೆ ಎಲ್ಲಾ ಕವನಗಳನ್ನು ಓದಿ ವಿಮರ್ಶಿಸಿ ನನ್ನ ಲೇಖನ ಬರೆದಿದ್ದೇನೆ.

ಕವಯಿತ್ರಿ ಆದ ಡಾ. ಅರ್ಚನಾ ಎನ್ ಪಾಟೀಲ ಅವರಿಗೆ ಒಂದು ಚಿಕ್ಕ ಸಲಹೆ ಏನೆಂದರೆ ತಾವು ಸಾಕಷ್ಟು ಕವನ ಸಂಕಲನ ಓದಿ ಶೀರ್ಷಿಕೆ ಸ್ವಲ್ಪ ಎಲ್ಲರಿಗಿಂತ ಭಿನ್ನವಾಗಿ ಚೊಕ್ಕವಾಗಿ ಇರಲಿ ಪೂರ್ಣ ಉದ್ದನೆಯ ಸಾಲು ಬೇಡ ಎರಡು ಅಥವಾ ನಾಲ್ಕು ಪದಗಳ ಒಳಗೆ ಶೀರ್ಷಿಕೆ ಇರಲಿ ಹಾಗೆಯೇ ಕೊಂಚ ಸಾಮಾನ್ಯ ಪದಗಳನ್ನು ಕಡೆಗಣಿಸಿ ಕನ್ನಡ ನಿಘಂಟು ಓದಿ ಸಾಹಿತ್ಯ ಅರ್ಥ ಕೊಡುವ ಪದ ಹಾಕಿ ಖಂಡಿತ ಒಳ್ಳೆಯ ಕವನ ಸಂಕಲನ ಆಗುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಕೋರುತ್ತೇನೆ. ಇನ್ನೂ ಹಲವಾರು ಕೃತಿಗಳು ತಮ್ಮ ಅಮೃತ ಹಸ್ತದಿಂದ ಹೊರ ಹೊಮ್ಮಲಿ ರಾಜ್ಯಧ್ಯಾಂತ ನಿಮ್ಮ ಹೆಸರು ಮೊಳಗಲಿ ಎಂದು ಆಶಿಸುತ್ತೇನೆ ಶುಭವಾಗಲಿ ಸಹೋದರಿ.

- ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ
ಪ್ರಕಾಶಕರು
ತನುಶ್ರೀ ಪ್ರಕಾಶನ ಸೂಲೇನಹಳ್ಳಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...