ಶುಕ್ರವಾರ, ಫೆಬ್ರವರಿ 11, 2022

ಅಮ್ಮನೊಳಗೊಂದು ಹೆಣ್ಣು ಭ್ರೂಣ (ಕವಿತೆ) - ರವಿ ನಾಯ್ಕ.

ನಾನು ಅಮ್ಮನೊಳಗಿನ ಭ್ರೂಣ,ಮಾತನಾಡುತಿಹೆ ನಾ ಹೆಣ್ಣು..!!
ನನ್ನಮ್ಮನ ಉದರದ ಮೇಲೇನೋ 
ಅಡ್ಡಾಡುತಿಹದನ್ನು ಗಮನಿಸಿದೆ 
ಅದೇಕೋ ಅಮ್ಮನ ಉಸಿರೇ ಜೋರಾಗಿತ್ತು..
ಯಾರೋ ಹೊರಗಿನ ಮುಖ ಕಾಣದ ಆಗಂತುಕರು ಮುಖ ಹಿಂಡಿದ ಭಾವ ಭ್ರೂಣದಲ್ಲೇ ನನಗರಿವಾಗಿತ್ತು !!

ಸಮಾಜದ ಕಟ್ಟಳೆಯ ಮೀರಿ, ನಾನಿನ್ನು ಕತ್ತಲ ಕೊತ್ತಲದಲ್ಲಿಈಜುವಾಗಲೇ,
ಅವರಿಗೆ ಅರಿಯಬೇಕಿತ್ತು ನನ್ನದ್ಯಾವ ಲಿಂಗ??
ಭಲಾತ್ಕಾರಕೆ ಕಾನೂನಿನ ಚೌಕಟ್ಟಿನಡಿಯಲಿ 
ಎಳೆಯಬೇಕಿತ್ತೆನ್ನ ಹೊರಗೆ !!ನಿಮಗಿದೋ ಅರಿವಿರಲಿ ನಾ 
ತಾಯಿಯ ಗರ್ಭದಲೆ ಹೋರಾಡಿದವಳು 
ಎಲ್ಲರಿಗಿಂತ ಮುಂಚೆ ಗುರಿ ಮುಟ್ಟಿ 
ಅಮ್ಮನ ಅರಮನೆಯಲೇ ಚೀತ್ಕರಿಸಿದವಳು,                          
ನಾನೀಗ ಬೇಡವಾಗಿದ್ದೆನಾ ಯಾರಿಗೂ 
ಕಾರಣ ನಾ ಹೆಣ್ಣು ಎಂಬ ಭ್ರೂಣ!!
ಅರಿಯಬೇಕಿತ್ತು ನಾ ಬಯಸುವ ಜೀವಗಳಿಗೆ,
ದೂಡಬೇಕಿತ್ತೆನ್ನ ಹೇಸಿಗೆಗೆ ಯಾಕೀ ತಾರತಮ್ಯ?
ನನ್ನ ಬಿಡಿ ಅಲ್ಲೇ ಬೆಳೆಯಲು, 
ಅನ್ನ ಪೂರ್ಣೆಯಾಗಿ ಬರುವೆನು!
ನನ್ನ ಪೂರ್ಣ ಅರಿಯದೆ ಹಿಚುಕ ಬೇಡಿ ನನ್ನೆಯ ಕತ್ತನು!!
ನಾ ಭ್ರೂಣ ..ದಯಮಾಡಿ ಮಾಡದಿರೆನ್ನ ಹರಣ.

- ರವಿ ನಾಯ್ಕ.
ಉತ್ತರ ಕನ್ನಡ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...