ಶುಕ್ರವಾರ, ಫೆಬ್ರವರಿ 11, 2022

ನಮ್ಮ ಕಂದ (ಕವಿತೆ) - ಹಾಲೇಶ್ ಕೆ. ಜಿ.

ಚಂದದ ವದನ
 ಗಂಧದ ಬಣ್ಣ 
 ಕಂದನೆ ನೀನೇ ಸುಂದರವು |
 ಅಂದದ ನುಡಿಯು 
 ನಂದಿಯ ನಡೆಯು
 ನಂದನ ನಮ್ಮಯ ಬಂಧನವು||೧||

ಕೋಟನು  ಹಾಕಿ 
 ಪೇಟವ  ತೊಟ್ಟು 
 ನೋಟದಿ ಚಾರ್ಲಿಯ  ಹೋಲುವನು |
 ಚೋಟನೆ ಹುಡುಗ
 ನೋಟನು  ಹಿಡಿದು 
ಹೋಟೆಲು ಹಾದಿಯ ಹಿಡಿಯುವನು ||೨||

 ಚಿಕ್ಕನೆ ನಡಿಗೆ 
 ಚೊಕ್ಕನೆ ಮಾತು 
 ಪಕ್ಕನೆ ನಗಿಸುತ ನಲಿಯುವನು|
 ಚಕ್ಕುಲಿ ತಂದು
 ಪಕ್ಕದಲಿರುವ 
 ಮಕ್ಕಳ ಜೊತೆಯಲಿ ತಿನ್ನುವನು ||೩||

 ನಮ್ಮನೆ ಕಂದ 
 ಸುಮ್ಮನೆ ಕುಳಿತು
 ಬಿಮ್ಮನೆ ಚಿತ್ರವ ಬಿಡಿಸುವನು|
 ಗಮ್ಮನೆ ಬೋಂಡ 
 ಒಮ್ಮೆಗೆ ತಿಂದು 
 ಅಮ್ಮಗೆ ತೋರುತ ನಿಂದಿಹನು ||೪||

✍️ ಹಾಲೇಶ್ ಕೆ. ಜಿ, ಶಿಕ್ಷಕರು.
  ಚಳ್ಳಕೆರೆ ತಾಲ್ಲೂಕು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...