ಶುಕ್ರವಾರ, ಫೆಬ್ರವರಿ 11, 2022

ಹೊಸಬೆಳಕು (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಭರವಸೆಯ ಹೊನ್ನ ಬೆಳಕ ಬೀರುತˌˌˌˌ
ಬರುತಿಹ ನೇಸರ ಹೊನ್ನ ಕಿರಣವ ಸೂಸುತˌˌ
ಮುಚ್ಚಿದ ಬೊಗಸೆಯ ಅರಳಿಸಬೇಕಿದೆˌˌ
ಅರಳುವ ಬದುಕಿಗೆ ಬೆಳಕು
ಮೂಡಬೇಕಿದೆ ˌˌˌ

ಬಂಡೆಯಡಿ ಸಿಲುಕಿದ ಬೀಜಕ್ಕೆ
ಸ್ಪೂರ್ತಿಯದುˌˌ
ಭಾಸ್ಕರನ ಭರವಸೆಯ
ಬೆಳ್ಳಿಕಿರಣವದುˌˌ
ಕಗ್ಗತ್ತಲ ಕಾಡಿನಲ್ಲಿ ಸೂರ್ಯರಶ್ಮಿಯೆ ಜ್ಯೋತಿˌˌ
ತಮ ಕವಿದ ಮನಕೆ ಬೇಕು
ಭರವಸೆಯ ಪ್ರೀತಿˌˌ

ಅಂಧಕಾರವ ಸೀಳಿ ಬರುವ ರವಿಕಿರಣವುˌˌˌ
ಆಗಲಿ ಎಮ್ಮ ಮನಗಳಿಗೂ
ಆಶಾದೀಪವುˌˌ
ಮುಗಿಲಿಗೆ ಕೈಚಾಚುವ ತರುಗಳಂತೆˌˌ
ಗೆಲ್ಲಬೇಕಿದೆ ನಾವು ಮರೆತೆಲ್ಲ
ಚಿಂತೆ ˌˌ

ಬನ್ನಿ ಪ್ರಕ್ರತಿದೇವಿಯ ಆರಾಧಿಸೋಣˌˌ
ನಿತ್ಯ ಹೊಸ ಪಾಠವ ನಿಸರ್ಗದಿಂದಲೇ ಕಲಿಯೋಣˌˌ
 - ಮಧುಮಾಲತಿ ರುದ್ರೇಶ್, ಬೇಲೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...