ಬುಧವಾರ, ಆಗಸ್ಟ್ 17, 2022

ಬೇಡ ಸಂಶಯದ ಭೂತ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ತುಂಬಿದೆ ಕಣ ಕಣದಲೂ ನಿನ್ನದೆ ಬಿಂಬ
ಹರಿದಾಡುತಿದೆ ಕ್ಷಣ ಕ್ಷಣ ನಿನ್ನ ನಾಮವ ಹೇಳಿಕೊಂಡು

ಚೆಲುವೆ ಪ್ರತಿ ಕ್ಷಣ ಕ್ಷಣವೂ ನಿನ್ನದೇ ಧ್ಯಾನ
ಮನದೊಡತಿ ಆಗಿಹೇ ನೀ ನನ್ನ ಪ್ರಾಣ

ನೀ ಬೆನ್ನೇರಿಸಿಕೊಳ್ಳಬೇಡ ಸಂಶಯದ ಭೂತ
ಅದರಿಂದ ಲಾಭವಿಲ್ಲ ಆಗುವುದು ಹೆಚ್ಚು ಅನಾಹುತ

ದಾರಿ ದೂರವಿರಬಹುದು ಮನವೆಂದಿಗೂ ಹತ್ತಿರ
ಕೇಳೆ ಜಾಣೆ ನೀನಿಲ್ಲದೆ ನಾ ಹೇಗಿರಲಿ ಕೊಡು ನೀ ಉತ್ತರ

ನೀನೆ ನಾನು ನಾನೇ ನೀನು ತಿಳಿ ನಮ್ಮಿಬ್ಬರ ಉಸಿರೇ ಒಂದು
ಪ್ರೇಮಾಮೃತದ ಹೊತ್ತಿಗೆಯಲಿ ಬರೆಯೋಣ ನಮ್ಮಿಬ್ಬರ ಹೆಸರು ಚೆಂದ

- ಶಿವಾ ಮದಭಾಂವಿ, ಗೋಕಾಕ.
8951894526

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...