ಬುಧವಾರ, ಆಗಸ್ಟ್ 17, 2022

ಈ ಸಮಯ ಕಳೆದುಹೋಗುತ್ತೆ (ಲೇಖನ) - ಮಾನಸ ಎಂ. ಸೊರಬ.

ಸಮಯ ಎಷ್ಟು ಶ್ರೇಷ್ಠ ಅನ್ಸತ್ತೆ ನಿಜಾ ಅಲ್ವಾ ಸಮಯ ಜೀವನದಲ್ಲಿ ಎಲ್ಲಾವನ್ನು ಸರಿ ಮಾಡುತ್ತೆ. ಸಮಯ ಮನುಷ್ಯನಿಗೆ ಅಮೂಲ್ಯ ಪ್ರತಿ ಕ್ಷಣವೂ ಕೂಡ ಬಹಳ ಮುಖ್ಯ ನಾವು ಅದನ್ನ  ಉಪಯೋಗ ಆಗುವ ಹಾಗೆ ಬಳಸಿಕೊಂಡು ಸಾಗಬೇಕು. ಕೆಟ್ಟ ಸಮಯ ಬಂದಾಗ ನಾವು ಹೇಗೆ ಅದನ್ನ ತಗೋತಿವಿ ಅನ್ನೋದರ ಮೇಲೆ ನಿರ್ಧರಿಸುತ್ತದೆ. ಜೀವನದಲ್ಲಿ ನಿಮ್ಮ ಹತ್ರ ಏನು ಇಲ್ಲದಾಗ ನಿಮ್ಮ ತಾಳ್ಮೆ ಹಾಗೂ ನಿಮ್ಮ ಬಳಿ ಎಲ್ಲವೂ ಇದ್ದಾಗ ನಿಮ್ಮ ನಡುವಳಿಕೆ ತುಂಬಾ ಮುಖ್ಯ ಅನ್ಸತ್ತೆ. ನಿಮ್ಮ ದೌರ್ಭಲ್ಯಗಳಿಗೆ ನೀವು ಕಾರಣವಾಗಬೇಡಿ ನಿಮ್ಮ ಬಲಕ್ಕೆ ನೀವು ಕಾರಣವಾಗಿ. ಕೆಟ್ಟ ಸಮಯ ಇದೇ ಎಂದಾಕ್ಷಣ ಈಡಿ ಜೀವನವೇ ಕೆಟ್ಟದಾಗುತ್ತೆ ಅಂದುಕೊಳ್ಳುವುದು ತಪ್ಪು ಅಂತಹ ಸಂದರ್ಭದಲ್ಲಿ ಆತ್ಮವಿಶ್ವಾಸ  ಇರಬೇಕು.ನಮ್ಮ ಮನಸ್ಸು ಕೆಲವೊಮ್ಮೆ ಕೆಲವು  ಕಾರಣಗಳಿಂದ  ನೋವುಂಟಾಗುತ್ತದೆ ನಮ್ಮ ನಿಯಂತ್ರಣ ತಪ್ಪುತ್ತದೆ ಅಂತಹ ಸಂದರ್ಭದಲ್ಲಿ ಅದರ ಪಾಡಿಗೆ ಹಾಗೆ ಬಿಡಿ ಸಮಯ ಕೊಡಿ ಅದು ಹಾಗೆ ಸರಿ ಹೋಗುತ್ತದೆ. ಸಮಯದ ಬೆಲೆ ತಿಳಿದವರಿಗೆ ಜೀವನದ ಬೆಲೆಯೂ ಸಹ ತಿಳಿದಿರುತ್ತದೆ. ಸಮಯಕ್ಕೆ ನಾವು ಗೌರವ ಕೊಟ್ಟರೆ ಮುಂದೆ ಸಮಯವೇ ನಮಗೆ ಗೌರವ ತಂದುಕೊಡುತ್ತದೆ. ಈ ದಿನ ನಮ್ಮ ಕೊನೆ ದಿನವೆಂದು ಕಳೆದರೆ ಬದುಕು ಪ್ರತಿ ಕ್ಷಣದ ಸಂಭ್ರಮ ಆಗುತ್ತೆ ಯಾಕಂದರೆ ಯಾರಿಗೆ ಗೊತ್ತು ಏಷ್ಟು ಜನರಿಗೆ ನಾಳೆಯ ಸೂರ್ಯ ನೋಡಲು ಸಿಗುವುದೋ ಇಲ್ಲವೋ ಎಂದು. ಜೀವನದಲ್ಲಿ ಗಡಿಯಾರ ಎಲ್ಲರಿಗೂ ಒಂದೇ ಆದ್ರೆ ಅದರಲ್ಲಿ ತೋರಿಸೋ ಟೈಮ್ ಎಲ್ಲರಿಗೂ ಒಂದೇ ಅಲ್ಲಾ . ಸಮಯ ಯಾರಿಗೂ ಕಾಯುವುದಿಲ್ಲ ಬಡವ ಶ್ರೀಮಂತ ಎಲ್ಲರಿಗೂ ಗಡಿಯಾರ ಮಾತ್ರ ಒಂದೇ ಎಲ್ಲರನ್ನೂ ಸಮಾನವಾಗಿ ಕಾಣುವುದು ಈ ಸಮಯ ಮಾತ್ರ.ನಿನ್ನೆಯ ಸಮಯದ ಬಗ್ಗೆ ಯೋಚನೆ ಮಾಡಿ ನಾಳೆಯ ಸಮಯವನ್ನ  ಹಾಳುಮಾಡಬೇಡಿ ಇವತ್ತಿನ ದಿನವನ್ನು ಸರಿಯಾಗಿ ಬಳಸಿಕೊಳ್ಳಿ.ನಂಬಿಕೆಗೆ ಹೇಗೆ ಸಮಯ ಬೇಕು ಹಾಗೆ ಸಮಯದ ಮೇಲೂ ನಂಬಿಕೆ ಇರಲಿ.
Wait for your time
Time proves everything

     - ಮಾನಸ ಎಂ. ಸೊರಬ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...