ಬುಧವಾರ, ಆಗಸ್ಟ್ 17, 2022

ಮನವೊಂದು ಯೋಚನೆ ನೂರೊಂದು (ಕವಿತೆ) - ರಾಕೇಶ್ ಡಿ. ವೀರಾಪುರ.

ಸಮನಾಗಿ ಇರಬೇಕು ಬದುಕಲಿ ಸುಖದುಃಖ
ಸದಾ ಎಚ್ಚರದಿ ಇರಲು ಸಮಸ್ಯೆಗಳು ಪ್ರಮುಖ
ಆದರೂ ಕಷ್ಟಗಳು ಹೆಚ್ಚಲು ತ್ರಾಸವು ಜೀವಕ
ಅದರ ನಡುವೆ ನೆಮ್ಮದಿ ಹುಡುಕಾಟ ಮನಕ

ಅರಿಯದೆ ಆದಂತಹ ಘಟನೆಗೆ ಮನವು
 ಹೃದಯದಿ ಕವಿದಿದೆ ಮನದಿ ನೀರವ ಮೌನವು
ಎಂದು ಮರೆಯಲಾಗದ ಇಂತಹ ದಿನವು
ನೆನೆದರೆ ಸಾಕೆನಿಸುತ್ತದೆ ಈ ನನ್ನ ಜೀವನವು

ಮನವೊಂದಿದೆ ಯೋಚನೆಗಳು ನೂರಾರಿವೆ
ಕಷ್ಟಗಳು ಜೀವನವನು ಸದಾ ಎಚ್ಚರಿಸುತ್ತಿವೆ
ಮೈಮರೆಸದೆ ಸರಿದಾರಿಯಲಿ ನೆಡೆಯುತ್ತಿದೆ
ಗುರಿಸಾದಿಸುವ ಸಲುವಾಗಿ ಜೀವನ ಸಾಗಿದೆ
 
ಬದುಕಿನಾಟವು ಕೆಲವೊಮ್ಮೆ ಅನಿರೀಕ್ಷಿತವು
ಬಯಸದೆ ಬರುವ ನೋವುಗಳು ನಿರೀಕ್ಷಿತವು
ಎರಡರ ನಡುವೆ ಜೀವನ ಒಂದೊಮ್ಮೆ ಸುಗಮ
ಜೊತೆಗೆ ಬದುಕಲಿ ನೋವುನಲಿವಿನ ಸಂಗಮ

    - ರಾಕೇಶ್ ಡಿ. ವೀರಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...