ಬುಧವಾರ, ಆಗಸ್ಟ್ 17, 2022

ಮನವೊಂದು ಯೋಚನೆ ನೂರೊಂದು (ಕವಿತೆ) - ರಾಕೇಶ್ ಡಿ. ವೀರಾಪುರ.

ಸಮನಾಗಿ ಇರಬೇಕು ಬದುಕಲಿ ಸುಖದುಃಖ
ಸದಾ ಎಚ್ಚರದಿ ಇರಲು ಸಮಸ್ಯೆಗಳು ಪ್ರಮುಖ
ಆದರೂ ಕಷ್ಟಗಳು ಹೆಚ್ಚಲು ತ್ರಾಸವು ಜೀವಕ
ಅದರ ನಡುವೆ ನೆಮ್ಮದಿ ಹುಡುಕಾಟ ಮನಕ

ಅರಿಯದೆ ಆದಂತಹ ಘಟನೆಗೆ ಮನವು
 ಹೃದಯದಿ ಕವಿದಿದೆ ಮನದಿ ನೀರವ ಮೌನವು
ಎಂದು ಮರೆಯಲಾಗದ ಇಂತಹ ದಿನವು
ನೆನೆದರೆ ಸಾಕೆನಿಸುತ್ತದೆ ಈ ನನ್ನ ಜೀವನವು

ಮನವೊಂದಿದೆ ಯೋಚನೆಗಳು ನೂರಾರಿವೆ
ಕಷ್ಟಗಳು ಜೀವನವನು ಸದಾ ಎಚ್ಚರಿಸುತ್ತಿವೆ
ಮೈಮರೆಸದೆ ಸರಿದಾರಿಯಲಿ ನೆಡೆಯುತ್ತಿದೆ
ಗುರಿಸಾದಿಸುವ ಸಲುವಾಗಿ ಜೀವನ ಸಾಗಿದೆ
 
ಬದುಕಿನಾಟವು ಕೆಲವೊಮ್ಮೆ ಅನಿರೀಕ್ಷಿತವು
ಬಯಸದೆ ಬರುವ ನೋವುಗಳು ನಿರೀಕ್ಷಿತವು
ಎರಡರ ನಡುವೆ ಜೀವನ ಒಂದೊಮ್ಮೆ ಸುಗಮ
ಜೊತೆಗೆ ಬದುಕಲಿ ನೋವುನಲಿವಿನ ಸಂಗಮ

    - ರಾಕೇಶ್ ಡಿ. ವೀರಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...