ಶುಕ್ರವಾರ, ಸೆಪ್ಟೆಂಬರ್ 2, 2022

ನಶಾ ಮುಕ್ತ - ಪರಿಸರಯುಕ್ತ ಭಾರತಕ್ಕಾಗಿ ಕೈ ಜೋಡಿಸೋಣ (ಲೇಖನ) - ಹನುಮಂತ ದಾಸರ ಹೊಗರನಾಳ.

ಸುಂದರ ಮತ್ತು ಸೊಗಸಾದ ಬದುಕನ್ನು ಸರಳವಾಗಿ ಸುಲಲಿತವಾಗಿ ಸಾಗಿ ಬದುಕುವ ಕ್ಷಣಗಳು ಸಾವಿರಾರು ನಮ್ಮೆಲ್ಲರ ಕಣ್ಮುಂದೆ ಸುಳಿದಿವೆ ಅಂತಹ ಒಳ್ಳೆಯ ಕ್ಷಣಗಳನ್ನು ಅನುಭವಿಸಿ ಆರೋಗ್ಯತವಾಗಿ ಬದುಕಿ ನಲಿಯುವ ಬದಲು ನಾವು ಇಂದಿನ ದಿನಮಾನಗಳಲ್ಲಿ ಹಲವಾರು ದುಶ್ಚಟಗಳಿಗೆ ಬಂಧಿಯಾಗಿ ನಮ್ಮ ಬದುಕಿಗೆ ನಾವೇ ಬೆಂಕಿ ಇಟ್ಟುಕೊಳ್ಳುವಂತಹ ಸಮಯ ಸಮೀಪ ಸುಳಿದಾಗಿದೆ. ಭಾರತದಲ್ಲಿ ಮಧ್ಯಪಾನ ಮತ್ತು ಧೂಮಪಾನಕ್ಕೆ ಸಂಬಂಧಿಸಿದಂತೆ ಉತ್ಪನ್ನಗಳ ತಯಾರಿಕಾ ಕಾರ್ಖಾನೆಗಳೂ ಕೂಡ ಹೇರಾಳವಾಗಿ ಅಭಿರುದ್ಧಿ ಹೊಂದುತ್ತಿರುವುದರಿಂದ ದೇಶಕ್ಕೆ ಆದಾಯ ಹೆಚ್ಚುತ್ತಿದೆ ಎನ್ನುವುದಾದರೆ ಮತ್ತೊಂದೆಡೆ ನೋಡಿದಾಗ ಇಂತಹ ಉತ್ಪನ್ನಗಳ ತಯಾರಿಕೆಯಿಂದ ಮುಖ್ಯವಾಗಿ ಯುವ ಪೀಳಿಗೆಯ ಮೇಲೆ ಬಹಳಷ್ಟು ಪರಿಣಾಮ ಬಿರುತ್ತದೆ. ವಿಶೇಷವಾಗಿ ಒಂದು ದೇಶಕ್ಕೆ ಯುವ ಪೀಳಿಗೆಯ ಶಕ್ತಿ ಅತ್ಯಾವಶ್ಯಕವಾಗಿರುತ್ತದೆ ಹೀಗಿರುವಾಗ ಇಂತಹ ಉತ್ಪನ್ನಗಳಿಂದ ಹದೆಗೆಡುತ್ತಿರುವ ಯುವ ಪೀಳಿಗೆ ಅಷ್ಟೇ ಅಲ್ಲದೇ ಇಂದಿನ ದಿನಮಾನಗಳಲ್ಲಿ ವಯೋಮಿತಿಗೆ ಮೀರಿ ಅಂದರೆ ಮುಖದ ಮೇಲೆ ಮೀಸೆ ಗಡ್ಡ ಮೂಡದೇ ಇರುವ ಬಾಲಕರು, ಹೆಣ್ಣು, ಗಂಡೆನ್ನದೆ ಪ್ರತಿಯೊಬ್ಬರೂ ಮಧ್ಯಪಾನ, ಧೂಮಪಾನ, ಗೂಟಕಾ, ತಂಬಾಕು ಹೀಗೆ ಹಲವಾರು ಚಟಗಳಿಗೆ ಮಾರುಹೋಗುವುದಷ್ಟೇ ಅಲ್ಲದೇ ಅದು ದೈನಂದಿನ ಚಟುವಟಿಕೆಯಾಗಿ ಮಾರ್ಪಟ್ಟಿದೆ ಹಾಗೂ ಬಿಟ್ಟರೂ ಬಿಡಲಾಗದ ಮಾಯೆ ಎಂಬಂತಾಗಿದೆ.
ಮಧ್ಯಪಾನ ಮತ್ತು ತಂಬಾಕು ಉತ್ಪನ್ನದ ವ್ಯಾಪಾರ ದೇಶದ ಮೂರನೇ ಅತಿದೊಡ್ಡ ವ್ಯಾಪಾರವಾಗಿದೆ. ದೇಶದಲ್ಲಿ  ದಿನಕ್ಕೆ ಸುಮಾರು 5 ಜನ ಇಂತಹ ದುಶ್ಚಟಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರಿದ್ದರೆ, ಕರ್ನಾಟಕದಲ್ಲಿ ಸುಮಾರು 6000 ಜನರು  ವರ್ಷಕ್ಕೆ ಈ ಮಧ್ಯಪಾನ ಮತ್ತು ಧೂಮಪಾನಗಳಂತಹ ವ್ಯಸನಗಳಿಂದ ಜೀವ ಕಳೆದುಕೊಳ್ಳುತ್ತಾರೆ. ಇಂತಹ ಭಯಾನಕ ಮತ್ತು ಮಾರಕವಾದಂತಹ ದುಶ್ಚಟಗಳಿಂದ ಪ್ರತಿಯೊಬ್ಬ ವ್ಯಕ್ತಿಯು ದೂರವಿರಲು ಮತ್ತು ತಡೆಗಟ್ಟಲು ಭಾರತ ಸರ್ಕಾರ ಹಲವಾರು ಅಭಿಯಾನ ಮತ್ತು ಯೋಜನೆಗಳನ್ನು ಜಾರಿಗೆ ತಂದು ಸಂಬಂಧಿಸಿದ ಇಲಾಖೆಗಳ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಮಾಹಿತಿ ತಲುಪಿ ಅವರನ್ನು ಜಾಗೃತಗೊಳಿಸಲೆಂದು ಹಲವಾರು " ತಂಬಾಕು ಮುಕ್ತ ಭಾರತ ", " ನಶಾ ಮುಕ್ತ ಭಾರತ "
ಮಧ್ಯಪಾನ ಮುಕ್ತ ಭಾರತ ಹೀಗೆ ಹಲವಾರು ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಡೆಯುತ್ತಲೇ ಇವೆ. ಆದರೇ ದುರದೃಷ್ಟವೆಂದರೇ ಭಾರತ ಮಧ್ಯಪಾನ ಮತ್ತು ಧೂಮಪಾನ ವ್ಯಾಪಾರದಲ್ಲಿ 3ನೇ ಅತಿದೊಡ್ಡ ವ್ಯಾಪಾರ ಹೊಂದಿದ್ದರೂ ಅದರಿಂದ ಶೇಖರಣೆಗೊಂಡ ಆದಾಯದಿಂದ ನಕ್ಸಲರಿಸ್ಮ್, ಟೆರಾರಿಸ್ಮ್ ಹೀಗೆ ಅನೇಕ ಕೆಟ್ಟ ಕೃತ್ಯಕ್ಕೆ ಮತ್ತು ಕೆಟ್ಟ ಕಾರ್ಯಕ್ರಮಗಳ ಉತ್ತೇಜನಕ್ಕೆ ಹಾಗೂ ಅಭಿರುದ್ಧಿಗಾಗಿ ಬಳಸಲಾಗುತ್ತಿದೆ ಎಂಬ ಸತ್ಯಂಶ ಹೊರಬಿದ್ದಿದೆ. ಆದರೇ ಯಾವತ್ತೂ ನಮ್ಮ ದೇಶ ಈ ಮಧ್ಯಪಾನ ಮತ್ತು ತಂಬಾಕು ಉತ್ಪನ್ನಗಳ ತಯಾರಿಕಾ ಕ್ಷೇತ್ರಗಳಿಂದ ಬರುವ ಆದಾಯದ ರೂಪ ಸಂಪೂರ್ಣವಾಗಿ ಬದಲಾಗಬೇಕು ಮತ್ತು ಅಂತಹ ವ್ಯಾಪಾರ ಕೇಂದ್ರಗಳನ್ನು ಸ್ಥಗಿತಗೊಳಿಸಬೇಕು ಆ ವ್ಯಾಪಾರಗಳಿಂದ ದೇಶಕ್ಕೆ ಬರುವ ಆದಾಯಕ್ಕೆ ಕಡಿವಾಣವಾಕಬೇಕು ಹಾಗೂ ಅಂತಹ ವ್ಯಾಪಾರಗಳು ನಡೆಯದಂತೆ ಸರ್ಕಾರ ಅದೊಂದು ಬಹುದೊಡ್ಡ ಕಾರ್ಯ ಮಾಡಬೇಕಿದೆ. ಏಕೆಂದರೆ ಮಧ್ಯಪಾನ ಮತ್ತು ಧುಮಪಾನದಿಂದ ಎಷ್ಟೋ ಯುವಕರು ಸಾವಿಗೀಡಾಗುತ್ತಿದ್ದಾರೆ ಅದೆಷ್ಟೋ ಶ್ವಾಸಕೋಶ, ಕ್ಯಾನ್ಸರ್ ಗಳಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದೆಷ್ಟೋ ಪಾಲಕರು ಮಕ್ಕಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ, ಅದೆಷ್ಟೋ ಮಹಿಳೆಯರು ಪತಿಗಳನ್ನು ಕಳೆದುಕೊಂಡು ಮುಂಡೆಯರಾಗಿದ್ದಾರೆ, ಅದೆಷ್ಟೋ ಕಂದಮ್ಮಗಳು ತಂದೆಯನ್ನು ಕಳೆದುಕೊಂಡು ಅನಾಥ ಹಾಗೂ ತಂದೆಯ ಪ್ರೀತಿ ಇಲ್ಲದೇ ಮರುಗಿ ಬದುಕುತ್ತಿವೆ ಅದಕ್ಕಾಗಿ ಇಂತಹ ಹಲವಾರು ಭಾವನೋತ್ಮಕ ಅಂಶಗಳನ್ನು ಮನಗಂಡು ಸರ್ಕಾರ ನಶೆ ಮುಕ್ತ ಭಾರತಕ್ಕಾಗಿ ಕೈ ಜೋಡಿಸಿ ಮಧ್ಯಪಾನ ಮತ್ತು ಧೂಮಪಾನಕ್ಕೆ ಕಡಿವಾಣ ಹಾಕಬೇಕು ಹಾಗೂ ಯುವ ಜನತೆಯನ್ನು ಅಷ್ಟೇ ಅಲ್ಲದೇ ಪ್ರತಿಯೊಬ್ಬ ಮಾನವನನ್ನು ಅಂತಹ ಕೆಟ್ಟ ಚಟಗಳಿಂದ ಹೊರ ಬರುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಮುಖ್ಯವಾಗಿ ದೇಶದಲ್ಲಿ ಯಾರೇ ಹುಟ್ಟಿದ್ದರೂ ಅವರು ತಮ್ಮ ಸ್ವಂತ ನಿರ್ಧಾರದಿಂದ ಯಾವುದೇ ಆತ್ಮಹತ್ಯ ಕೃತ್ಯಕ್ಕೆ ಕೈ ಹಾಕುವುದಾಗಲಿ ಆತ್ಮಹತ್ಯ ಮಾಡಿಕೊಳ್ಳುವುದಾಗಲಿ ಆದರೇ ಆಕಸ್ಮಿಕವಾಗಿ ಬದುಕುಳಿದರೆ ಅವನಿಗೆ ಕಾನೂನು ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂಬ ಸುಪ್ರೀಂ ಕೋರ್ಟ್ ನಿಯಮದಂತೆ ಇಂತಹ ಚಟಗಳಿಗೆ ತುತ್ತಾಗುವವರಿಗೂ ಕೂಡ ದಂಡ ಮತ್ತು ಶಿಕ್ಷೆ ವಿಧಿಸುವಂತಹ ನಿಯಮಗಳು ಅವಶ್ಯವಾಗಿ ಜಾರಿಯಾಗಲಿ ವಿಶೇಷವಾಗಿ ಇಂತಹ ಕೆಟ್ಟ ಚಟಗಳು ಬರೀ ಪುರುಷರಿಗಷ್ಟೇ ಅಂಟಿದ್ದಲ್ಲ ಇದು ಮಹಿಳೆಯರಿಗೂ ತಲುಪಿದೆ ಅವರೂ ಕೂಡ ಕೆಟ್ಟ ಚಟಗಳಿಗೆ ದಾಸರಾಗಿದ್ದಾರೆ ಹಾಗೂ ಅದೊಂದು ಪ್ರಸ್ತುತ ಕಾಲಮಾನದ ಪಾಶ್ಚಿಮತ್ಯಾ ಶೈಲಿಯ ಟ್ರೆಂಡ್ ಆಗಿ ರೂಪಿತಗೊಂಡಿದೆ ಈ ಶೈಲಿಯನ್ನು ಆದಷ್ಟು ಬೇಗ ಕಡಿಮೆಗೊಳಿಸುವಂತೆ ಕಡಿವಾಣ ಹಾಕಬೇಕು ಏಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ನಿಕೋಟಿನ್ ಮತ್ತು ಸ್ಪಿರಿಟ್ ನಂತಹ ಅಂಶಗಳು ದೇಹಕ್ಕೆ ಬೇಗನೆ ಅಂಟಿಕೊಂಡು ಇಡೀ ದೇಹದ ಸ್ಥಿತಿಯನ್ನೇ ಬದಲಿಸಿ ಅವರ ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬಿಡುಗಡೆಗೂ, ಸ್ಥನಗಳ ಹಾರ್ಮೋನಿಗೂ ಮತ್ತು ಇನ್ನಿತರ ದೇಹದ ಬದಲಾವಣೆಗೆ ಕಾರಣವಾಗಿರುವ ಎಲ್ಲಾ ತೆರನಾದ ಹಾರ್ಮೋನ್ ಬಿಡುಗಡೆಯ ತೊಂದರೆಗೂ ಮತ್ತು ಬಂಜೆತನಕ್ಕೂ ಕಾರಣವಾಗಬಲ್ಲ ಪದಾರ್ಥಗಳಾಗಿವೆ ಹೀಗಾಗಿ ಇಂತಹ ದುಶ್ಚಟಗಳಿಂದ ಆದಷ್ಟು ಮಹಿಳೆಯರನ್ನು ಮುಕ್ತಗೊಳಿಸುವಂತಹ ಕಾರ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯಗಳು ಕಾರ್ಯನಿರ್ವಹಿಸಬೇಕಿದೆ. ಭಾರತೀಯ ನಾಗರಿಕರಾದ ನಾವುಗಳು ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೆ ಯಾವುದೇ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ, ಚೈನೀಸ್ ತಿಂಡಿ ತಿನಿಸುಗಳಿಗೆ ಎಡಿಕ್ಟ್ ಆಗದೇ ನಮ್ಮ ದೇಶಿಯ ಪದ್ಧತಿಯ ತಿಂಡಿ ತಿನಿಸುಗಳು, ಉಡುಗೆ ತೊಡುಗೆಯ ಸಂಸ್ಕೃತಿಯ ಜೊತೆಗೆ ಸ್ವದೇಶೀ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ನಮ್ಮ ದೇಶದ ಆದಾಯವನ್ನು ಹೆಚ್ಚಿಸುವುದಲ್ಲದೇ ಆರೋಗ್ಯತವಾದ ದೇಶ ಮತ್ತು ಆರೋಗ್ಯತವಾದ ದೇಹವನ್ನಾಗಿ ಕಾಪಾಡಿಕೊಳ್ಳಬಹುದು. ಭವ್ಯ ಭಾರತದಲ್ಲಿ ಭಿನ್ನವಾಗಿ ಬದುಕೋಣ, ಭವ್ಯ ಭಾರತಕ್ಕೊಂದು ಭಿನ್ನತೆಯ ಭಾವ ತರೋಣ ಬೇರಾವುದೇ ದುಶ್ಚಟಕ್ಕೊಳಗಾಗಿ ದೇಹದ ಖಿನ್ನತೆಗೆ ಬಲಿಯಾಗದಿರೋಣ ಸಹಸ್ರಾರು ವರ್ಷಗಳಿರುವ ಭಾರತದ ಇತಿಹಾಸದಂತೆ ಒಳ್ಳೆಯ ತಿಂಡಿ ತಿನಿಸು ಆಹಾರ ಪದ್ಧತಿಯನ್ನು ಅನುಸರಿಸಿ ಧ್ಯಾನ ಯೋಗಾಸನಗಳೊಂದಿಗೆ ನೂರಾರು ವರ್ಷಗಳಷ್ಟು ಬದುಕೋಣ ನಶಾ ಮುಕ್ತ ಭಾರತ-ಪರಿಸರಯುಕ್ತ ಭಾರತವೆಂದು ವಿಶ್ವಕ್ಕೆ ಮಾದರಿಯಾಗೋಣ.
- ಹನುಮಂತ ದಾಸರ ಹೊಗರನಾಳ.
ಮೊ:9945246234.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...