ಶುಕ್ರವಾರ, ಸೆಪ್ಟೆಂಬರ್ 2, 2022

ಮನಕಂಟಿದ ಕವಿತೆಗಳು (ವಿಮರ್ಶೆ) - ಮೈಬೂಬಸಾಹೇಬ.ವಾಯ್‌.ಜೆ.

 ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ 

ಷಕೀಬ್ ಕಣದ್ಮನೆಯವರ ಸರಳತೆ ಎಂತಹ ವ್ಯಕ್ತಿಗೂ ಮಾದರಿ. ತಲೆ ಹೋಗುವ ಸಮಸ್ಯೆಯಿದ್ದರೂ ಹೂ  ನಗೆ ಚೆಲ್ಲುವ  ಶ್ರಮಜೀವಿ. ವಿದ್ಯಾರ್ಥಿ ಜೀವನದ ಜೊತೆಜೊತೆಗೆ ರೈತನ ಪಟ್ಟ ಹೊತ್ತಿರುವ ಯಾವಾಗಲೂ ತೋಟ -ಜಮೀನು ಕೆಲಸಗಳಲ್ಲಿ  ತೊಡಗಿ ಭೂಮಿಯ ಸ್ವರ್ಗವ  ಕಾಣುವ ವ್ಯಕ್ತಿತ್ವ ಒಂದೆಡೆಯಾದರೆ, ಕನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಅವರು ಮೋಹದ ಮೋಡದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ಅವರ ಭಾಷೆ,ಭಾವ ನುಡಿಗಳ ಮೃದುತ್ವ, ಆಂತರ್ಯದ ಧೋರಣೆ ಅದಮ್ಯ ಹಂಬಲ ನಾಡು ನುಡಿಗಾಗಿ ನುಡಿಯುವ ಒಳಗ ಕರಳು ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿರತವಾಗಿದೆ ಅದಕ್ಕಾಗಿಯೇ ದೇಶದ ಬೆನ್ನೆಲುಬಿಗೆ ಹೊತ್ತಿಗೆ ಅರ್ಪಿಸಿದ್ದಾರೆ.
     ಬಂಡಾಯದ ಹಿನ್ನೆಲೆ ಹೊಂದಿರುವ ಡಾ ಸಿದ್ದ್ರಾಮ ಕಾರಣೀಕ ಅವರ ಮುನ್ನುಡಿ,ಹಂಪಿ ವಿವಿಯ ಕನ್ನಡ ಸಂಶೋಧಕ ಶರೀಪ ಹಸಮಕಲ್ಲ ಅವರ ಬೆನ್ನುಡಿಯನ್ನೊಳಗೊಂಡು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ಮುದ್ರಿತವಾಗಿದ್ದು, 
  'ಕರುಳಲ್ಲಿ ಹುಟ್ಟ್ತೈತೆ ಕನ್ನಡ
   ಕಂಠದಲ್ಲಿ ಹರಿದಾಡತೈ ಗಡಗಡ '
 ಎನ್ನುವ ಪದ್ಯದ ಸಾಲುಗಳು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿತೋರಿಸುವ ಮೂಲಕ ನಾಡುನುಡಿಯ ಪ್ರಖರತೆಯನ್ನು ತಲೆದೋರುವಲ್ಲಿ ಸಹಕಾರಿಯಾಗಿದೆ. 
ನಾಡುನುಡಿ,ದೇಶ ಪ್ರೇಮ,ಅನ್ನದಾತರಿಗೆ ಸಲಾಮು,ಹಜರತ್ ಸುಲ್ತಾನರ ಪರಾಕ್ರಮ,ಚಂದಿರನ ಲೋಲುಪತೆ,ಪ್ರಣಯದ ಹಾಡು,ಹಕ್ಕಿಹಾಡುವ ಶೋಕಗೀತೆ,ನನ್ನದಲ್ಲದ ಲೇಖನಿ ಎನ್ನುವ ಹಲವು ಪದ್ಯಗಳು ಮತ್ತೆ ಮತ್ತೆ ಓದಿಸಿಕೊಂಡರೆ, 
ಹೃದಯವನ್ನು ಗುಡಿಗೆ ಹೋಲಿಸಿ,ಸ್ನೇಹದಲ್ಲಿ ದೇವರನ್ನು ಕಾಣುವ ರೂಪಕ ಅತ್ಯಾಪ್ತವಾಗಿಸುತ್ತದೆ.
 "ನೆಮ್ಮದಿ ಇರದ ಜೀವನ 
 ಯಮನಿಗೆ ಅಹ್ವಾನ" 
    ಎನ್ನುವ ಕವಿವಾಣಿ,ಜೀವನದಲ್ಲಿ ತೃಪ್ತಿ ಎನ್ನುವುದು ಅತೀವ ಕಾಳಜಿಯ ವಾಕ್ಯವಾಗಿ ಗುರುತಿಸಿಕೊಂಡು ಜೀವನ ಪ್ರೀತಿಯನ್ನು ಸಾರುವುದರಲ್ಲಿ ಸಹಕಾರಿಯಾಗಿದೆ.'ಕವಿಯ ಕಲ್ಪನೆಗೆ ಎಟುಕದ ಸೌಂದರ್ಯ ನಿನ್ನದು ನಿನಗೆಂದೆ ಕಾಯುವ ಭಾಗ್ಯ‌ ನನ್ನದು'
  ಈ ರಸಭರಿತ ಕಾವ್ಯ ಕಲ್ಪನೆಗೂ ನಿಲುಕದ ನಿಲುವು ಪ್ರಾಸಭರಿತವಾದ ಹೊಸ ಛಾಯೆಯಗಳ ಮಾಯೆಯನ್ನು ಬರಮಾಡಿಕೊಳ್ಳುವ,
'ಅವಳು ನಕ್ಕರೆ ಮಲ್ಲಿಗೆಯ ಛಾಯೆ'ಎನ್ನುವಲ್ಲಿ ಪ್ರೇಮಿಯನ್ನು ಪ್ರೇಮಿಸುವ ಪರಿಯಲ್ಲಿ‌ ಹೊಸ ಪ್ರಮೇಯ ತೆರೆಯಲೆತ್ನಿಸಿದ್ದಾರೆ‌.ಆಚಾರ ಪತ್ನಿಯೊಂದಿಗೆ ವ್ಯವಹರಿಸುವ ವಿಚಾರ ಸತಿಯ ಸೇರಿಸಿ ಅದಕೆ ಸವಿಯ ಸುರಿಸಿ ಹರಸುವ ಪರಿ ಪರೋಕ್ಷವಾಗಿ ಪ್ರಪಂಚವೆಲ್ಲಾ ಪ್ರೇಮದಲ್ಲಿದೆ ಪ್ರೀತಿ ಇಲ್ಲದ ಹೊರತು ಏನನ್ನು ಮಾಡಲಾರೆ ದ್ವೇಷವನ್ನು ಕೂಡಾ' ಎನ್ನುವ  ಚಂಪಾ ಅವರ ಕವಿತೆಯ ಸಾಲುಗಳು ನೆನಪಿಸುತ್ತಾರೆ 
    ಪ್ರೇಮ ಋತುಮಾನಗಳಾಗಿ,ಶತಮಾನದ ಭಾವಗಳಾಗಿ,ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ'ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ.
   ತಂಗಿಗಾಗಿ,ಮೌನಯಾನ ದಂತಹ ಕೆಲವು ಪದ್ಯಗಳು ಒಡಲ ಪ್ರೇಮ,ಪ್ರಾದೇಶಿಕತೆ ದಾರ್ಶನಿಕತೆಯನ್ನು ತಿಳಿಸುವುದರೊಂದಿಗೆ ತಿಳಿಸಿ ಪ್ರಾಂತ್ಯದ ಪ್ರೀತಿಯಿಂದ ರಾಷ್ಟ್ರಪ್ರೇಮದತ್ತ ತಿರುಗುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.ಎನ್ನುವ ಕವಿಭಾವ ರಸದೌತ್ತತೆ ಸಾರುವಲ್ಲಿ ನಿರತವಾಗಿದೆ.
ತಮ್ಮ ತವರೂರಾದ ನವಿಲುರೂನಿಂದ ಹಿಡಿದು, ಭಾರತ ದೇಶದ ಬಗ್ಗೆಯೂ ಕವಿತೆಗಳನ್ನು ರಚಿಸಿ ದೇಶಪ್ರೇಮ ಮೆರೆದಿದ್ದಾರೆ. ತನ್ನ ಪ್ರೇಯಸಿಯನ್ನು ಕವಿತೆಗಳ ಮೂಲಕ ಕಾಡಿ, ಬೇಡಿ,  ಆರಾಧಿಸಿ, ಪ್ರೇಮ ಲಹರಿ ಒಂದೆಡೆ ಅದ್ಭುತವಾಗಿ ಮೂಡಿ ಬಂದಿದೆ. ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಜೀವನ ನಡೆಸುವ ಇವರು ತಮ್ಮ ಕವನ ಸಂಕಲನದಲ್ಲಿ ಪ್ರಕೃತಿಯ ವಿವಿಧ ರೀತಿಯ ಮಜಲುಗಳನ್ನು ತುಂಬಾ ಮೋಹಕವಾಗಿ ವರ್ಣಿಸಿದ್ದಾರೆ
 ಒಂದೆರಡು ಕವಿತೆಗಳಾದ, ಹೀಗೇಕೆ?, ಕಣ್ಣೀರ ಮಳೆ
 ನಾನು ತುಂಬಾ ಭಾವುಕನಾದ ಕವಿತೆಗಳು. ತಮ್ಮ ತಂಗಿಯರಿಗೆ ಕವಿತೆ ಬರೆದು ಅಣ್ಣನ ವಾಸ್ತಲ್ಯವನ್ನು ಮೆರೆದಿರುವುದು  ಬಾಂಧವ್ಯಗಳಿಗೆ ಸಂಬಂಧಗಳಿಗೆ ಇವರು ನೀಡುವ ಪ್ರಾಮುಖ್ಯತೆಯನ್ನು ಕಲಿಸಿಕೊಡುತ್ತವೆ.    ಭಾರತದ ಬೆನ್ನೆಲುಬು ರೈತ, ಮತ್ತು ಯೋಧರಿಗೆ ನೈಜ್ಯತೆಯ  ವಂದನಾರ್ಪಣೆ   ಸಲ್ಲಿಸಿದ್ದಾರೆ. "ಈ ಪುಸ್ತಕದ ಪ್ರತಿ  ಪುಟಗಳ ತೆನೆ ಹಿಡಿದ ಕೈಗಳು ಚಿಹ್ನೆಯೂ" ಕವಿಯ ರೈತನ ಮೇಲಿನ ಅಭಿಮಾನ ತಿಳಿಸಿಕೊಡುತ್ತದೆ. ಮೊಟ್ಟಮೊದಲ ಪ್ರಯತ್ನವೇ ರಂಗುರಂಗಾಗಿದ್ದರು, ಅಲ್ಲಲ್ಲಿ ಕೆಲಮಟ್ಟಿನ ದ್ವಂದ್ವಗಳು ಕಂಡುಬಂದರೂ ಮೊದಲ ಪ್ರಯತ್ನದ ಕವನ ಕೃಷಿಯಲ್ಲಿ ತಕ್ಕಮಟ್ಟಿನ ಕಥನ ಪ್ರಿಯತೆಯೂ ಸೃಜಿಸಿದ್ದಾರೆ.ಎಲ್ಲವೂ ಒಳಿತಾಗಲಿ ಹೊಸತನ ನಿರಂತರವಾಗಲಿ.. ಮೋಹದ ಮೋಡಗಳು ತಿಳಿಯಾಗಿರುವಂತೆ ಬಾಸವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಅತಿ  ಹೆಚ್ಚು ವಿಮರ್ಶೆ, ಕಥೆ, ಕವನ, ಕಾದಂಬರಿ ನಿಮ್ಮಿಂದ ಕರುನಾಡಿಗೆ ಕೊಡುಗೆ ಆಗಲಿ
    ನಾಡಿನ ಬಹುಸಂಖ್ಯಾತ ಆವಾಸದ ಮೇಲೆ ಬರೆ ಎಳೆಯುವ ಹುನ್ನಾರಗಳು ನಡೆಯುತ್ತಿರುವ ಈ ದಿನಗಳಲ್ಲಿ,ಸಮಾನ ಚಿಂತನೆಯ ಸುಸಂಸ್ಕೃತ ವ್ಯಕ್ತಿಯ ನಿರ್ಮಾಣ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಹೊತ್ತಿನಲ್ಲಿ ಪಠ್ಯಗಳಲ್ಲಿ ವೈರತ್ವದ ಬೀಜ ನೆಡುವ ಕೆಲಸ ಗೊತ್ತಿಲ್ಲದದಂತೆ ನಡೆಯುವತ್ತಿರುವುದು ಖೇದಕರ ಸಂಗತಿ.ಈ ವರ್ಗೀಕರಣ ಪದ್ದತಿ ಹಿಂದಿನಿಂದಲೂ ನಡೆಯುತ್ತಲೇ ಬಂದಿತ್ತು. ಈಗಾಗಲೂ ನಡೆಯುತ್ತಿದೆ ಆ ವಿಚಾರ ಬೇರೆ,ಆದರೆ ಸಮತೆ ಬಿತ್ತುವ ನೆಲದಲ್ಲಿ ವೈಷಮ್ಯ,ದ್ವೇಷ,ಅಸೂಯೆ,ಅಸಮಾನತೆ, ಅಂದಭಕ್ತಿಯನ್ನು ದೇಶಭಕ್ತಿಯ ರೂಪದಲ್ಲಿ ಪಠ್ಯದಲ್ಲಿ ಇರಿಸುತ್ತಿರುವುದು ಅಂದಕ್ಕಾರದ ಮಹೋನ್ನತ ಹಂತ ತಲುಪಿದೆ ಎಂದ್ಹೇಳಡ್ಡಿಯಿಲ್ಲ‌.
       ಬಹು ಸಂಸ್ಕೃತಿಯ ಭಾರತ,ಜಾತಿ,ಮತ,ಧರ್ಮ,ಪಂಥಗಳನ್ನು ದೂರ ಸರಿಸಿ ನಾವೆಲ್ಲಾ ಭಾರತೀಯರು ಎನ್ನುವ ಭಾವ ಮೂಡಿಸುವ ಹೊತ್ತಿಗೆಯಲ್ಲಿ ವಿಷ ಪೋಣಿಸುವ ಹುನ್ನಾರ ನಡೆಯುತ್ತಿರುವ ವಿಚಾರ ಹೀನ ಸಂಸ್ಕಾರದ ಲಕ್ಷಣಗಳು,ಭಾರತೀಯತೆ,ಬಂದುತ್ವ,ಸಹೋದರತ್ವದ   ಉಗ್ರಾಣ ನಮ್ಮ ದೇಶ, ಅದನ್ನು ಅಗ್ರಹಾರದಂತೆ ಬದಲಿಸುತ್ತಿರುವ ಹೊಲಸು ರಾಜಕೀಯದವರು  ಮುಂದ್ಯಾವುದಕ್ಕೂ ಹೇಸುವುದಿಲ್ಲ. ಎನ್ನುವ ಕನ್ಸರ್ವೇಶನ್ನಗಳು ಆಗಾಗ ಸಾಬಿತಾಗುತ್ತಿವೆ.ಪ್ರಗತಿಪರ ವಿಚಾರವಾದಿಗಳನ್ನು ದೇಶದ್ರೋಹದ ಪಟ್ಟಕಟ್ಟಿ ಸಮಾಜದಿಂದ ತಿರಸ್ಕೃತರನ್ನಾಗಿ ಮಾಡುವ ಕುತಂತ್ರಿಗಳಿವರೆನ್ನುವುದರಲ್ಲಿ ಸಂದೇಹವಿಲ್ಲ.ಇಂತಹ ಬಸವಾದಿ ಶರಣರ ನಾಡಿನಲ್ಲಿ ಸಮಾನತೆಗಾಗಿ ಹಾತೊರೆಯುತ್ತಿರುವ ಪ್ರಗತಿಪರ ಚರಿಸ್ಮಾ ಕಾಣುವುದು ‌ವಿರಳಾತೀವಿರಳ ಅಂತ ವಿರಳ ಸಂಗತಿಗಳನ್ನು ತನ್ನ ಸರಳ ಸಾಹಿತ್ಯದಲ್ಲಿ ಅಳವಡಿಸಿ ಕೊಂಡಿದ್ದಲ್ಲದೆ ಬರೆದಂತೆ ಬದುಕಿರುವ ಚೇತನಕ್ಕೆ ಅಭಯ ಹಸ್ತದಿಂದ ಬರಮಾಡಿಕೊಳ್ಳೋಣ.

- ಮೈಬೂಬಸಾಹೇಬ.ವಾಯ್‌.ಜೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...