ಬುಧವಾರ, ಆಗಸ್ಟ್ 17, 2022

ನೆನಪಿನ ದೋಣಿ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

ಬಣ್ಣ ಬಣ್ಣದ ಕಾಗದದ ದೋಣಿಯ ಒನಪು
 ಮಾಸಿಲ್ಲವಿನ್ನೂ ಬಾಲ್ಯದ ಆ ಸುಂದರ ನೆನಪು 

ಚಿಣ್ಣರಿಗೆ ಸಂಭ್ರಮದ ದಿನವದು ಮಳೆಗಾಲವು
 ಕಾಗದದ ದೋಣಿಯಿಂದ ತುಂಬುತ್ತಿದ್ದ ಹಳ್ಳವು

 ತಾಮುಂದು ನಾ ಮುಂದು ಎಂದುಲಿಯುತ್ತಿದ್ದ ದಿನಗಳು
 ಮಕ್ಕಳ ಕೈಯಲ್ಲಿ ಅರಳುತ್ತಿದ್ದವು ಕಾಗದದ ದೋಣಿಗಳು

 ಚಂದದ ದೋಣಿಗೆ ಅಂದದಿ ಹೆಸರು ಬರೆದು
 ಹರಿವ ನೀರಿನಲಿ ತೇಲಿ ಬಿಡುತ್ತಿದ್ದ ಸುಂದರ ಕ್ಷಣವದು

 ಚಿತ್ತಾರ ಗೊಂಡ ದೋಣಿಗಳು ಬೀಗುತ್ತಿದ್ದವು ನೀರಿನಲಿ
 ತಾರೆಯರು ಕದ್ದೊಯ್ದರೆ ಎಂಬ ಭೀತಿ ಮನದಲಿ

 ಬಾಲ್ಯದ ಆಟಗಳು ಸ್ನೇಹ ಸೇತುವೆಯೇ ಆಗಿದ್ದವಂದು
 ಯಂತ್ರಗಳೊಂದಿಗೆ ಉರುಳುವ ಮಕ್ಕಳ ಬಾಲ್ಯವಿಂದು

 ಮಧುರ ಸ್ನೇಹದ ನೆನಪ ಬುತ್ತಿಯ ಬಿಚ್ಚೋಣ
  ಕಳೆದ ಸುಂದರ ಕ್ಷಣಗಳ ಮತ್ತೆ ಮೆಲುಕು ಹಾಕೋಣ

 ಸವಿನೆನಪ ದೋಣಿಯಲಿ ಸಾಗಲಿ ಎಲ್ಲರ ಮನ 
ಸುಂದರ ನಿಷ್ಕಲ್ಮಶ ಸ್ನೇಹದ ಕಣಜವಾಗಲಿ ಜೀವನ

- ಮಧುಮಾಲತಿ ರುದ್ರೇಶ್ ಬೇಲೂರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...