ಶುಕ್ರವಾರ, ಸೆಪ್ಟೆಂಬರ್ 16, 2022

ಗುರುವಿಗೆ ಶರಣಾಗತಿಯ ಶರಣು (ಕವಿತೆ) - ಅಶ್ವಿನಿ ಭೀ. ಬರಗಾಲಿ, ಗೋಕಾಕ.

ಶರಣೆಂದೆ ಗುರುವೇ ಶರಣು ನಿನಗೆ
ಶರಣಾಗತಿ ದೇವರಿಗಿಂತ ಮಿಗಿಲಾದವರಿಗೆ..!!

ಶಾಖ ಶಕ್ಯಗಳಾಟ ಸುಳ್ಳೆಂದು 
ಶಾಲೆಯನ್ನು ದೇವಾಲಯ ಮಾಡಿದವರಿಗೆ..!!

ಶಿಲೆಯಲ್ಲಿ ಕಲೆಯನ್ನು ಕೆತ್ತಿ
ಶಿಖರದೆತ್ತರಕ್ಕೆ ಬೆಳೆಸಿದವರಿಗೆ..!!

ಶೀಲ ಕುಶಲದಿಂದಿರಲು ತಿಳಿಹೇಳಿ
ಶೀಲ ಸುಶೀಲತೆಯ ಧಾರೆ ಎರೆದವರಿಗೆ..!!

ಶುದ್ಧ ಪರಿಶುದ್ಧ ಭಾವಗಳ ಮೂಡಿಸಿ
ಶುಭ್ರತೆಯ ಬೆಳಕು ನೀಡಿದವರಿಗೆ.!!

ಶೂನ್ಯದ ಜಗತ್ತನ್ನು ಅರ್ಥೈಸಿ
ಶೂನ್ಯತೆಯ ಭಾವವ ಬರಿದಾಗಿಸಿದವರಿಗೆ..!!

ಶೃಂಖಲೆಯ ಬಂಧ ಬಿಡಿಸಿ
ಶೃಂಗಾರದಿ ಚೆಂದಗೊಳಿಸಿದವರಿಗೆ..!!

ಶಲೆ ಇಲ್ಲವಾದರೇ ಜಗವೆಲ್ಲಿ
ಶೆಲೆಯ ನೆಲೆ ನೀವಾಗಿ ನಿಂತವರಿಗೆ..!!

ಶೇಷಾವೇಷನು ಕರ ಮುಗಿದ ನಿಮಗೆ
ಶೇಷ ಚೇತನದ ಒರತೆಯ ಭಾಗವಾಗಿಸಿದವರಿಗೆ..!!

ಶೈತ್ಯೋಪಚಾರ ಮಾಡುವೆವು ನಿಮಗೆ
ಶೈಕ್ಷಣಿಕ ಲೋಕದ ಹೆಮ್ಮೆಯ ದಿಗ್ಗಜರಾದವರಿಗೆ..!!

ಶೂರತೆಯ ಜ್ಞಾನವಿತ್ತು
ಶೂತ್ರದಾಸೆಯ ತೊರೆದು ನಿಂತವರಿಗೆ..!!

ಶೋಷಿತರನ್ನು ಹುರಿದುಂಬಿಸಿ
ಶೋಧಿಸಿ ಶುದ್ಧಿಸಿ ಜಯಮಾಲೆ ತೊಡಿಸಿದವರಿಗೆ..!!

ಶೌರ್ಯ ಪರಾಕ್ರಮಗಳ ಕಲಿಸಿ
ಶೂರತೆಯ ಒಲವ ಪಸರಿಸಿದವರಿಗೆ..!!

ಶಿವಶಂಕರ ರೂಪ ನೀವಾಗಿ
ಶಂಖನಾದದಿ ಜಗವ ಬೆಳಗಿಸಿವರಿಗೆ..!!

ಶಿಕ್ಷಣದ ಅಕ್ಷರವ ಕಲಿಸಿ
ಶಿಲೆಯ ಸುಶಿಕ್ಷತೆಯ ಮೊಳಗಿಸಿದವರಿಗೆ..!

ಶಿಲೆಯಾಗಿ ಅಂದು ಕಲೆಯಾಗಿ ಇಂದು
ಶರಣಾಗತಿಯ ಬಯಸಿಹೆವು ನಾವು ನಿಮ್ಮಿಂದ..!!

ಶರಣು ಶರಣು ಶರಣಾಗತಿ
ಶರಣಾಗತರಾಗಿರುವೆವು ನಮ್ಮೆಲ್ಲ ಗುರುಬಳಗಕ್ಕೆ....!!

ಶರಣಾಗತಿ ಇಂತಿ ನಿಮ್ಮ
ಮಾಸ್ತರನ‌ ಮಗಳು ಅಶ್ವಿನಿ.....!!

- ಅಶ್ವಿನಿ ಭೀ. ಬರಗಾಲಿ, ಗೋಕಾಕ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...