ಶುಕ್ರವಾರ, ಸೆಪ್ಟೆಂಬರ್ 2, 2022

ಗಣಾಧೀಶ (ಕವಿತೆ) - ಶಿವಾ ಮದಭಾಂವಿ

ಹಾಡಿರೇ ಗಣಪನ ಭಜಿಸಿರೆ ಗಣಪನ 
ಕಡುಬು ಮೋದಕ ಪ್ರಿಯ ಗೌರಿಸುತನ
ಸಡಗರ-ಸಂಭ್ರಮದ ಸರದಾರನ
ಭಜಿಸಿರೆ ಹುಲ್ಲು ಗರಿಕೆಯ ಪ್ರಿಯನ

ಮೂಶಿಕವಾಹನವ ಏರಿ ಬರುವ ಚತುರನ
ಭಜಿಸಿರೆ ಹಾಡಿರೇ ಗಜಮುಖನ 
ಸಂಕಷ್ಟ ನಿವಾರಿಸುವ ವಿಘ್ನ ವಿನಾಶಕನ
ಭಜಿಸಿರೆನ್ನ ಮುಕ್ಕಣ್ಣನ ಪ್ರಿಯಸುತನ

ತಾಯಿಯಾಜ್ಞೆಗೆ ತಂದೆಯ ತಡೆದ ಆಜ್ಞಾಪಾಲಕನ
ಭಜಿಸಿರೆ ಗಣೇಶನ ಪ್ರಥಮಪೂಜಿತನ
ರಾವಣನ ಗರ್ವ ಮುರಿದ ಗಣಾಧೀಶನ
ಭಜಿಸಿರೆ ಸಿದ್ದಿಪ್ರದಾಯಕ ವಿಘ್ನೇಶನ

ಷಣ್ಮುಖನ ಲೋಕ ಸುತ್ತಿಸಿದ ಜಾಣನಾ
ಭಜಿಸಿರೆ ಭಜಿಸಿರೆ ಶಿವಗೌರಿತನಯನ
ತಂದೆ ತಾಯಿಯಲ್ಲಿ ಲೋಕವ ಕಾಣೆಂದು ತಿಳಿಸಿದ
ಗಣನಾಥನ ಪಾಡಿ ಭಜಿಸಿರೆ ಎಲ್ಲಾ

- ಶಿವಾ ಮದಭಾಂವಿ.
ಗೋಕಾಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...