ಶುಕ್ರವಾರ, ಸೆಪ್ಟೆಂಬರ್ 2, 2022

ರಕ್ಷಾ ಬಂಧನ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಮರದ ಆಸರೆಯಿಂದ ಬೆಳೆದ ಲತೆಯು 
ಬೆನ್ನಿಗೆ ಅಂಟಿಕೊಂಡು ಹುಟ್ಟಿದ ಸೋದರಿಯು 
ಕರುಳ ಬಳ್ಳಿ ಕತ್ತರಿಸಿ ಭವ ನೀಡಿದ ತಾಯಿಯು
ಜೀವನದುದ್ದಕ್ಕೂ ಮರೆಯಲಾಗುವುದೇ ತೋರಿದ ಮಮತೆಯು

ಅರಳುವ ಹೂಗಳಂತೆ ನಲ್ಮೊಗೆಯ ತುಟಿಯು
ಮುಖದ ಮೇಲೆ ಹೊಳೆವ ಬೆಳದಿಂಗಳ ಕಳೆಯು 
ನೀ ನಕ್ಕರೆ ಸುರಿಯುವುದು ಹೂವಿನ ಸೋನೆಯು 
ನನ್ನೆದೆಗೆ ಅಪ್ಪಿದೊಡೆ ದೂರಾಗುವುದು ಕಲ್ಮಶದ ನಶೆಯು

ಕೂಡಿ ಆಡುವೆವು ಮನ ಬಿಚ್ಚಿ ನಾವು
ಕಳೆದು ದೂರಾಗುವುದು ಹಡೆದವ್ವನ ನೋವು  
ಚಳಿಯೆಂದು ನಡುಗಿದೊಡೆ ನೀಡುವಳು ಕಾವು 
ಸಿಹಿ ಬೆರಸಿ ನೀಡುವಳು ಬೆಲ್ಲ ಕಲಿಸಿದ ಬೇವು

ಇಳೆ ರವಿಗೆ ಇರುವುದು ಬೆಳಕಿನ ಬಂಧನ 
ಶಶಿ,ಪುಷ್ಪಕೆ ನೀಡುವನು ಬೆಳದಿಂಗಳ ಬೆಳಕನ 
ನೀನಿರುವೆ ನನಗೆ ಬಂಗಾರದ ಚಂದನ 
ನಮ್ಮಿಬ್ಬರನ್ನು ಕೂಡಿಸಲು ಬಂತು ರಕ್ಷಾ ಬಂಧನ

ಅಣ್ಣನರಸಿ ಅಭಿಮಾನದಿಂದ ಬಂದ ಸಹೋದರಿ, 
ನಿನಗೆ ದೊರೆಯಲಿ ಸುಖ ಸಂಸಾರದ ದಾರಿ
ತವರಿನ ಹೆಸರನ್ನು ಬೆಳಗಿಸುವ ಕುಮಾರಿ 
ಎಂದೆಂದಿಗೂ ನನ್ನ ಹೃದಯದಲ್ಲಿರುವೆ ಬಂಗಾರಿ

ನನ್ನೆದೆ ಬಡಿತವು ನೀನಾದೆ ಪುಣ್ಯಮಾತೆ
ನೀಡುವೆ ನಿನಗೆ ದೇವರಿನ ಆದ್ಯತೆ 
ನಿನ್ನಲ್ಲಿ ನೆಲೆಸಿರುವುದು ತಾಯಿಯ ಮಮತೆ
ಸಹೋದರಿಯೇ ಜಗತ್ತಿಗೆ ಎರಡನೇ ದೇವತೆ.
  - ಬಿ.ಹೆಚ್.ತಿಮ್ಮಣ್ಣ.

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...