ಶುಕ್ರವಾರ, ಸೆಪ್ಟೆಂಬರ್ 2, 2022

ವಿದ್ಯಾಲಯ (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಮಾತೆ ಶ್ರೀ ಶಾರದೆಯ ಆಲಯ 
ನಾವು ಕಲಿಯುವ ವಿದ್ಯಾಲಯ 
ಮೊದಲು ಕಲಿಯಬೇಕು ವಿನಯ 
ಆಗ ಜೀವನವು ಕಲ್ಪವೃಕ್ಷಾಲಯ 

ಮೊದಲ ಗುರುವೇ ತಾಯಿಯು 
ಮನೆಯೇ ಪ್ರಥಮ ಶಾಲೆಯು 
ತಂದೆಯೆ ಪ್ರಪ್ರಥಮ ದೈವವು 
ಒಡಹುಟ್ಟಿದವರೆ ಸಹ ಪಾಟಿಯು 

ವಿದ್ಯಾಲಯದಿ ನೂತನ ಸ್ನೇಹವು 
ಜೊತೆಗೆ ಆಟ ಪಾಠಗಳ ಕೂಟವು 
ಶಿಕ್ಷಕರಿಗೆ ಕೊಡಬೇಕು ಗೌರವವು 
ಶಿಸ್ತಿನಿಂದಿದ್ದರೆ ಮಾನ ಸಮ್ಮಾನವು 

ಗುರುಗಳು ಮಾಡುವರು ಬೋಧನೆ 
ನಾವು ಮಾಡಬೇಕು ಅವ್ರ ಆರಾಧನೆ 
ಕಲಿಕೆಯಲ್ಲಿರಬೇಕು ಬಹಳ ಸಹನೆ 
ಆಗಲೇ ಸಾಧ್ಯವಾಗುವದು ಸಾಧನೆ 
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...