ಶುಕ್ರವಾರ, ಸೆಪ್ಟೆಂಬರ್ 2, 2022

ವಿದ್ಯಾಲಯ (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಮಾತೆ ಶ್ರೀ ಶಾರದೆಯ ಆಲಯ 
ನಾವು ಕಲಿಯುವ ವಿದ್ಯಾಲಯ 
ಮೊದಲು ಕಲಿಯಬೇಕು ವಿನಯ 
ಆಗ ಜೀವನವು ಕಲ್ಪವೃಕ್ಷಾಲಯ 

ಮೊದಲ ಗುರುವೇ ತಾಯಿಯು 
ಮನೆಯೇ ಪ್ರಥಮ ಶಾಲೆಯು 
ತಂದೆಯೆ ಪ್ರಪ್ರಥಮ ದೈವವು 
ಒಡಹುಟ್ಟಿದವರೆ ಸಹ ಪಾಟಿಯು 

ವಿದ್ಯಾಲಯದಿ ನೂತನ ಸ್ನೇಹವು 
ಜೊತೆಗೆ ಆಟ ಪಾಠಗಳ ಕೂಟವು 
ಶಿಕ್ಷಕರಿಗೆ ಕೊಡಬೇಕು ಗೌರವವು 
ಶಿಸ್ತಿನಿಂದಿದ್ದರೆ ಮಾನ ಸಮ್ಮಾನವು 

ಗುರುಗಳು ಮಾಡುವರು ಬೋಧನೆ 
ನಾವು ಮಾಡಬೇಕು ಅವ್ರ ಆರಾಧನೆ 
ಕಲಿಕೆಯಲ್ಲಿರಬೇಕು ಬಹಳ ಸಹನೆ 
ಆಗಲೇ ಸಾಧ್ಯವಾಗುವದು ಸಾಧನೆ 
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...