ಶುಕ್ರವಾರ, ಸೆಪ್ಟೆಂಬರ್ 2, 2022

ನನ್ನವರು ನೀವೂ ಹೃದಯವಂತರು (ಕವಿತೆ) - ಹೆಚ್.ಹೆಚ್.ಮೈಲಾರಿ.

ಹೇಳಲಾಗದ ಭಾವ
ಮರೆಯಲಾಗದ ಜೀವ
ನೀವೂ
ಮರೆಯಲಾಗದ ಜೀವ

ನಮ್ಮೊಂದಿಗಿರಲು ನೀವು
ಮನ ತುಂಬಿದ ನಗುವು

ಕೂಡಿ ಆಡಿದ ಸಮಯ
ಮಾಸದ ಸ್ಮರಣೀಯ

ಕೋಟಿ ಕೊಟ್ಟರೂ ಸಿಗದು ಈ ಪ್ರೀತಿ
ಯಾರಿಲ್ಲ ನಿಮಗೆ ಸರಿಸಾಟಿ

ನೀವೇ ಸುಂದರ
ನಿಮ್ಮ ನೆನಪುಗಳೇ ಮಧುರ

ಮರೆಯಲಾಗದ ಬಂಧ
ಬಿಡಿಸಲಾಗದ ಅನುಬಂಧ

ಬೀಳ್ಕೊಡುವಾಗ ಮನಸ್ಸಿಗೆ ಕೊಂಚ ಬೇಸರ
ಉಜ್ವಲ ಭವಿಷ್ಯ ನಿಮಗಿದೆ ಮುಂದೆಂಬುದೇ ಸಡಗರ

ನಿಮ್ಮಿಷ್ಟದ ಜೀವನ ನಿಮ್ಮದಾಗಲಿ
ಶುಭವಾಗಲಿ ನಿಮಗೆ ಶುಭವಾಗಲಿ...


- ಹೆಚ್.ಹೆಚ್.ಮೈಲಾರಿ. ( ಪಾಪಚ್ಚಿ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...