ಗುರುವಾರ, ಅಕ್ಟೋಬರ್ 13, 2022

ಪ್ರಶಸ್ತಿ ಬೇಕೇ ? ಪ್ರಶಸ್ತಿ! (ಕವಿತೆ) - ಮಹರ್ಷಿ.

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

ಸಾಧನೆ, ಸೇವೆ ಬೇಕಾಗಿಲ್ಲ,  ಸಾಹಿತಿ ಆಗಿರಬೇಕೆಂದಿಲ್ಲ.
'ಗೌಡ' ಬೇಕೇ ? ರತ್ನ ಬೇಕೆ ? ಕೇಸರಿ, ಶ್ರೀ, ಮಾಣಿಕ್ಯ ಬೇಕೇ ? 
ಸಾಧನೆ ಏನು ಮಾಡದೆ ಇದ್ದರು ಸಾಧಕ ರತ್ನ ಅವಾರ್ಡು ಬೇಕೆ ?

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

ಎಲ್ಲರಂತೆ ಅಲ್ಲ ನಾವು. ನಂಬಹುದು ನಮ್ಮನು ನೀವು.
ಹಣವನು ನಾವು ಪಡೆಯುವುದಿಲ್ಲ.
ಮೆಂಬರ್ ಶಿಫಲಿ ಡಿಸ್ಕೌಂಟ್ ಇಲ್ಲ. 
ನಮ್ಮಲ್ಲೇನು ಮೋಸವು ಇಲ್ಲ. ಬೇಡಿಕೆ ಎಂದು ಇಳಿಯುವುದಿಲ್ಲ. ಹಣ ಕೊಟ್ಟರೆ ಪ್ರಶಸ್ತಿ ಉಂಟು. ರೆಕಮೆಂಡೇಷನ್ ನಡಿಯುವುದಿಲ್ಲ. 

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

ರಾಜ್ಯ ಮಟ್ಟದ ಪ್ರಶಸ್ತಿ ಉಂಟು, ರಾಷ್ಟ್ರ ಮಟ್ಟದ ಪ್ರಶಸ್ತಿ ಉಂಟು. ಬೇಗ ಬಂದರೆ ಮತ್ತಷ್ಟುಂಟು.

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

- ಮಹರ್ಷಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...