ಶನಿವಾರ, ನವೆಂಬರ್ 26, 2022

ನಿವೇದನೆ (ಕವನ) - ರಾಘವೇಂದ್ರ ಕುಲಕರ್ಣಿ.

ಋತುವಿಗೂ ಸಾವು ಇರಬಹುದು
ನೆನಪು ಅದಕಾಗಿ ಹೂವ ಪೋಣಿಸಿದೆ
ಹೂವಿಗೂ ಮುನಿಸಿರಬಹುದು
ಅರಳುವದನು ಮರೆತಾಗಿದೆ

ಅವನಿಗೂ ಬೆಸರ ಬರಬಹುದು
ಸುರಿವ ಹನಿಗಳ ಬೆವರ ವಾಸನೆಗೆ
ಅವಳ ಬಿಸಿಯುಸಿರು ತಣ್ಣಗಾಗಲೂ ಬಹುದು
ಚಂದ್ರ ಹುಣ್ಣಿಮೆ ಮರೆತ ಆ ಘಳಿಗೆಗೆ.‌..

ನಾನೇನು ಪ್ರೀತಿಸಲಿ ಇನ್ನೂ
ಶವ ನಗುತಲಿ ಮಸಣ ಬಯಸುವಾಗ
ಒಂದೇ ಆಸೆ ಗೋರಿ ತುಂಬಲಿ 
ಪಾದ ಧೂಳಿಯ ಮಣ್ಣಿಂದಲೆ ಎನ್ನುವಾಗ...
- ರಾಘವೇಂದ್ರ ಕುಲಕರ್ಣಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...