ಋತುವಿಗೂ ಸಾವು ಇರಬಹುದು
ನೆನಪು ಅದಕಾಗಿ ಹೂವ ಪೋಣಿಸಿದೆ
ಹೂವಿಗೂ ಮುನಿಸಿರಬಹುದು
ಅರಳುವದನು ಮರೆತಾಗಿದೆ
ಅವನಿಗೂ ಬೆಸರ ಬರಬಹುದು
ಸುರಿವ ಹನಿಗಳ ಬೆವರ ವಾಸನೆಗೆ
ಅವಳ ಬಿಸಿಯುಸಿರು ತಣ್ಣಗಾಗಲೂ ಬಹುದು
ಚಂದ್ರ ಹುಣ್ಣಿಮೆ ಮರೆತ ಆ ಘಳಿಗೆಗೆ...
ನಾನೇನು ಪ್ರೀತಿಸಲಿ ಇನ್ನೂ
ಶವ ನಗುತಲಿ ಮಸಣ ಬಯಸುವಾಗ
ಒಂದೇ ಆಸೆ ಗೋರಿ ತುಂಬಲಿ
ಪಾದ ಧೂಳಿಯ ಮಣ್ಣಿಂದಲೆ ಎನ್ನುವಾಗ...
- ರಾಘವೇಂದ್ರ ಕುಲಕರ್ಣಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ