ಶನಿವಾರ, ನವೆಂಬರ್ 26, 2022

ನಿವೇದನೆ (ಕವನ) - ರಾಘವೇಂದ್ರ ಕುಲಕರ್ಣಿ.

ಋತುವಿಗೂ ಸಾವು ಇರಬಹುದು
ನೆನಪು ಅದಕಾಗಿ ಹೂವ ಪೋಣಿಸಿದೆ
ಹೂವಿಗೂ ಮುನಿಸಿರಬಹುದು
ಅರಳುವದನು ಮರೆತಾಗಿದೆ

ಅವನಿಗೂ ಬೆಸರ ಬರಬಹುದು
ಸುರಿವ ಹನಿಗಳ ಬೆವರ ವಾಸನೆಗೆ
ಅವಳ ಬಿಸಿಯುಸಿರು ತಣ್ಣಗಾಗಲೂ ಬಹುದು
ಚಂದ್ರ ಹುಣ್ಣಿಮೆ ಮರೆತ ಆ ಘಳಿಗೆಗೆ.‌..

ನಾನೇನು ಪ್ರೀತಿಸಲಿ ಇನ್ನೂ
ಶವ ನಗುತಲಿ ಮಸಣ ಬಯಸುವಾಗ
ಒಂದೇ ಆಸೆ ಗೋರಿ ತುಂಬಲಿ 
ಪಾದ ಧೂಳಿಯ ಮಣ್ಣಿಂದಲೆ ಎನ್ನುವಾಗ...
- ರಾಘವೇಂದ್ರ ಕುಲಕರ್ಣಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...