ಶನಿವಾರ, ನವೆಂಬರ್ 26, 2022

ಸಾಧನೆ ಉಳಿಯುವುದು (ಕವಿತೆ) - ಮಧುಕೇಶವ್.ಎಂ.

ಸಾಧನೆ ಉಳಿಯುವುದು
ಈ ಜಗದಲಿ ಸಾಧನೆ ಉಳಿಯುವುದು

ನಾನು ಉಳಿಯೋದಿಲ್ಲ!
ನೀನು ಉಳಿಯೋದಿಲ್ಲ!
ಸಾಧಿಸಿದವರಿಗು ಇಲ್ಲಿ ಉಳಿವು ಇಲ್ಲ!

ಸಾಧನೆ ಉಳಿಯುವುದು!

ಕಳೆಯುವೆ ಸಮಯವ ಎಷ್ಣಾ?
ನೀ ನಿನ್ನನೆ ಕೇಳಿಕೊ ಪ್ರಶ್ನಾ?
ನೀ ಸಾಧಿಸು ನಿನ್ನಿಂದಾದಷ್ನಾ!
ನಿನ್ಹಿಂದೆಯೆ ಇರುವನು ಕೃಷ್ಣಾ...

ಸಾಧನೆ ಉಳಿಯುವುದು!

ನಿನ್ನಯ ಜನ್ಮವ ದಂಡಾ!
ನೀನಾಗಿಸ ಬೇಡವೋ ಭಂಡಾ!
ನೀನಾಗೆಲೋ ಕೀರ್ತಿ ಪ್ರಚಂಡಾ!
ಬೆಂಗಾವಲು ಬರುವ ಕೋದಂಡಾ...

ಸಾಧನೆ ಉಳಿಯುವುದು!

ಗೆಲುವಿಗೆ ಪಣವನು ತೊಟ್ಟೂ!
ನೀ ಕೆಡುಕು ತನ ಬುದ್ದಿ ಬಿಟ್ಟೂ!
ನಿನ್ನ ಸಾಧನೆ ಧರಣಿಗೆ ಕೊಟ್ಟೂ!
ಕಡೆ ಕೇಶವ ಪಾದವ ಮುಟ್ಟೂ...

ಸಾಧನೆ ಉಳಿಯುವುದು!
- ಮಧುಕೇಶವ್.ಎಂ.ಗಡೀಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...