ಶುಕ್ರವಾರ, ಡಿಸೆಂಬರ್ 30, 2022

ಅರಿವಿರದ ಸಮಯ(ಕವಿತೆ) - ಮಂಜುನಾಥ ಮೇಟಿ.

ಅಡಚಣೆಯಿಲ್ಲದೆ ಸಾಗುತಿದೆ
ಅರುವಿರದ ಸಮಯ
ಸುಖಃದ ಹಂಗನು ತೊರೆದು
ಅಲಕ್ಷಿಸಿದೆ ದುಖಃದ ಭಯ

ಕಾಲಕ್ಕೆ ತಕ್ಕಂತೆ ಬದಲಾಗುತ
ಗೆದ್ದವರ ತಾಳಕ್ಕೆ ಕುಣಿಯುತ
ತಿಳಿಯದ ಪಾಠವ ಕಲಿಸುತ
ಮತ್ತೊಮ್ಮೆ ಸಿಗನೆಂದು ಹೇಳುತ

ಸಾಗುತಿದೆ ಅರುವಿರದ ಸಮಯ

ಗೆಲುವೆ ಶಾಶ್ವತವಲ್ಲವೆಂದು
ಸೋಲಿಗೂ ಕೊನೆಯಿದೆ ಎಂದು
ಪ್ರಯತ್ನಕ್ಕೆ ವಿಜಯವಾಗಲೆಂದು
ನೊಂದ ಮನಸ್ಸಿಗೂ ಯಶಸಿದೆ ಎಂದು

ಹೇಳುತ ಸಾಗಿದೆ ಅರುವಿರದ ಸಮಯ.

- ಮಂಜುನಾಥ ಮೇಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...