ಶುಕ್ರವಾರ, ಡಿಸೆಂಬರ್ 30, 2022

ಅರಿವಿರದ ಸಮಯ(ಕವಿತೆ) - ಮಂಜುನಾಥ ಮೇಟಿ.

ಅಡಚಣೆಯಿಲ್ಲದೆ ಸಾಗುತಿದೆ
ಅರುವಿರದ ಸಮಯ
ಸುಖಃದ ಹಂಗನು ತೊರೆದು
ಅಲಕ್ಷಿಸಿದೆ ದುಖಃದ ಭಯ

ಕಾಲಕ್ಕೆ ತಕ್ಕಂತೆ ಬದಲಾಗುತ
ಗೆದ್ದವರ ತಾಳಕ್ಕೆ ಕುಣಿಯುತ
ತಿಳಿಯದ ಪಾಠವ ಕಲಿಸುತ
ಮತ್ತೊಮ್ಮೆ ಸಿಗನೆಂದು ಹೇಳುತ

ಸಾಗುತಿದೆ ಅರುವಿರದ ಸಮಯ

ಗೆಲುವೆ ಶಾಶ್ವತವಲ್ಲವೆಂದು
ಸೋಲಿಗೂ ಕೊನೆಯಿದೆ ಎಂದು
ಪ್ರಯತ್ನಕ್ಕೆ ವಿಜಯವಾಗಲೆಂದು
ನೊಂದ ಮನಸ್ಸಿಗೂ ಯಶಸಿದೆ ಎಂದು

ಹೇಳುತ ಸಾಗಿದೆ ಅರುವಿರದ ಸಮಯ.

- ಮಂಜುನಾಥ ಮೇಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...