ಮಲೆನಾಡಿನ ಮಣ್ಣಿನ ಮಗನಿವರು
ಸಾಹಿತ್ಯಕೆ ಕೊಡುಗೆಯ ಕೊಟ್ಟವರು
ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು
ರಾಷ್ಟ್ರಕವಿ ಬಿರುದಾಂಕಿತರು
ಕರ್ನಾಟಕ ಏಕೀಕರಣ ಹರಿಕಾರರು
ಸರ್ವೋದಯ ಸಮನ್ವಯ ದೂರದೃಷ್ಟಿ
ಸಮತೆಯ ಸಾರಿದವರು
ಕನ್ನಡ ನುಡಿಗಾಗಿ ಸಮರ್ಪಿಸಿಕೊಂಡವರು
ಕನ್ನಡಕ್ಕಾಗಿ ಕೈ ಎತ್ತು ಕಲ್ಪವೃಕ್ಷವಾಗುವುದು
ಎಂದ ಕನ್ನಡದ ಕಂದನಿವರು
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡಿಗನಾಗಿರುವ ದೀಕ್ಷೆ ತೊಟ್ಟವರು
ಮನುಜಜಾತಿ ತಾನೊಂದೇ ಕುಲಂ ಎನುತ
ವಿಶ್ವಮಾನವರಾದವರು
ನೆನಪಿನ ದೋಣಿಯಲಿ ಆತ್ಮಚರಿತ್ರೆಯ
ತೆರೆದವರು.
- ಆಶಾ ಶ್ರೀಧರ್, ಶಿವಮೊಗ್ಗ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ