ಬುಧವಾರ, ಡಿಸೆಂಬರ್ 14, 2022

ಅಳಲು (ಕವಿತೆ) - ಮಾಲತಿ ಮೇಲ್ಕೋಟೆ.

ಯಶವ ಸಂಭ್ರಮಿಪ          
ಹಿತವರಿರದಿರೆ ಒಡನೆ
ಸಂತಸವೆಲ್ಲಿಯದು
ಗೆಲುವಿನಲು ನರಗೆ

ಸೋಲಿನಲು ಸಂತೈಪ
ಹಿತವರಿರೆ ಸನಿಹದಲಿ
ನೋವಿನಲು ನೆಮ್ಮದಿಯ
ಕಾಣದಿರಲಹುದೇ

ಯಶದ ಅಮಲೆಂದೂ
ತಲೆಯ ಬೀಗಿಸದಿರಲಿ
ಸೋಲಿನಲಿ ಕಂಗೆಟ್ಟು 
ಮನ ಕುಸಿಯದಿರಲಿ

ಹಿತರಿರಲಿ ಇರದಿರಲಿ
ಇಚ್ಛಿಸಲಿ ನಿಂದಿಸಲಿ
ನಿಲಿಸದೆಯೆ ಕಾಯಕವ
ನಡೆಸಲು ನಿರ್ಲಿಪ್ತಿಯಲಿ

ಸೋಲುಗೆಲುವುಗಳನೆಂದು
ಶಾಂತಿಯಲಿ ಸ್ವೀಕರಿಸೆ
ಸಮಚಿತ್ತ ನೀಡೆನಗೆ
ಓ ನನ್ನ ಪ್ರಭುವೇ

- ಮಾಲತಿ ಮೇಲ್ಕೋಟೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...