ಬುಧವಾರ, ಡಿಸೆಂಬರ್ 21, 2022

ಮಗುವಾಗಿ ನಿತ್ಯ ನಗಬೇಕು(ಕವಿತೆ) - ಗೂಳೇಶ್ ಬಿ ಯಾಗಾಪುರ.

ಸುಖಾಸುಮ್ಮನೆ ನಗಲು
ಸುಂಕ ಕಟ್ಟಬೇಕಿಲ್ಲ
ಬರಿ ಸಂತೋಷದ ಸಮಯದಲ್ಲಷ್ಟೆ
ಸಂಗಡಿಗರ ಒಡಗೂಡಿ ನಗಬೇಕೇ? ಖಂಡಿತ ಇಲ್ಲ 
ನಗಬೇಕು ನಿತ್ಯ ನಗುತಲೆ ಇರಬೇಕು ಇತರರಿಗು ನಗಿಸುತಲೆರಬೇಕು

ನಗಲು ಸಮಯ ಸಂದರ್ಭಗಳು ಯಾಕೆ
ಹೌದು ನಗು ಎಂಬುದು ದುಃಖ ಆವರಿಸಿದ
ಮನೆ ಅಥವಾ ಆ ಪ್ರದೇಶದ ಸಮಯದಲ್ಲಿ
ನಗುವುದು ಉಚಿತವಲ್ಲ ಹಾಗೆಯೇ ಸಂಭ್ರಮದ 
ಮನೆಯಲ್ಲಿ ಒಬ್ಬೊಬ್ಬರೆ ಓಡಾಡುವುದು ಸರಿಯೇ?

ನಗು ಎಂಬುದು ಮಗುವಂತೆ 
ಮುಗ್ದ ಮನಸ್ಸುಳ್ಳ ಮಗುವಿನ ಮೊಗದಂತೆ
ನಕ್ಕರೆ ನಾಚಿಕೆ ಮಾಯಾ, ನಕ್ಕರೆ ನರ ನಾಡಿಮಿಡಿತಗಳು
ಬಾಳಲಿ ಎದುರಾಗೊ ಕಹಿ ಘಟನೆಗಳ
ಎದುರಿಸುವ ಅಮೃತವೆ ಈ ನಮ್ಮ ನಗು 

ನಗುವಿನ ಗುಳಿಗೆ ನೀ ಸೇವಿಸು
ಎದುರಾಳಿಗಳ ಮನದಲ್ಲೂ ನಿನ್ನ 
ಮುಖದ ಲಕ್ಷ್ಮಣ ಅವರಲ್ಲೂ ನಾಟಿ
ಮಾಡುವಂತಾಗುವ ನಗುವಿನ 
ಒಡೆಯ ನೀನಾಗಲು ನಿತ್ಯ ನೀ ನಗುತಿರು 

       

- ಗೂಳೇಶ್ ಬಿ ಯಾಗಾಪುರ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...