ಶನಿವಾರ, ಜನವರಿ 14, 2023

ಎಳ್ಳುಬೆಲ್ಲಿನ ಸಂಕ್ರಮಣ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಸೂರ್ಯ ತನ್ನ ಪಧ ಉತ್ತರದಲ್ಲಿರಿಸಿದ
ಸಂಕ್ರಮಣವ ಹಬ್ಬ ನೀವೆಲ್ಲ ಆಚರಿಸಲೆಂದ
ಸಂಗಮೇಶ್ವರನ ಜಾತ್ರೆ ನಡೆಯಿತಂದು
ಭಕ್ತಿ ಮಂಡಳಿ ಪೂಜಿಸಲು ಸೇರಿತಂದು

ನದಿ ದಂಡೆಯಲ್ಲಿ ತುಂಬಿದ ಜನಸಾಗರ 
ಕರಮುಟಿಗಿ ಮೈಸವರಿ ಸ್ನಾನ ಮಾಡುವ ಭರ
ಕಳೆಯಿತು ಕರ್ಮವು ಶುಭ ದಿನದಂದು
ಸ್ವಾಗತಿಸುತಿದೆ ಹೊಲದ ಪೈರು ನಮಗಿಂದು

ಛಜ್ಜಿ ರೊಟ್ಟಿ ಭಜ್ಜಿ ಪಲ್ಲೆ ತಿಂದಾರ ನದಿ ದಂಡೆಯಲ್ಲಿ
ಸಂಗಮೇಶ್ವರ ಪಲ್ಲಕ್ಕಿ ಹಿಡಿದಾರ ಭಕ್ತಿರಸದಲ್ಲಿ
ಸುತ್ತೂರಿನ ಜನ ಜಾತ್ರೆಯ ಗದ್ದಲಲಿ
ಬೇಕಾದ ಆಟಿಕೆ ಮಕ್ಕಳಿಗೆ ಸಿಕ್ಕಿತಲ್ಲಿ

ಮುದ್ದು ಗುಂಡುಗಳ ಹಾರಾಟದಲ್ಲಿ
ಪುರವಂತರ ಆಟ ಮೈನವರೆಳಿಸಿತು ಅಲ್ಲಿ
ಭಕ್ತರ ಜೆಂಕಾರ ಸಂಗಮೇಶ್ವನ ಹೆಸರಲ್ಲಿ
ಜಾತಿ ಮತ ಮರೆತು ಒಂದಾದರು ಭಾವೈಕ್ಯತೆಯಲ್ಲಿ

ಸಂಕ್ರಮಣವ ಹಬ್ಬ ತಂದಿತು ಹರ್ಷತುಂಬುತಲ್ಲಿ
ಹೊಳಿಗೆಯ ಊಟ ಭಕ್ತರು ಸವಿಯುತಲಿ
ಎಳ್ಳು ಬೆಲ್ಲಿನಾ ಮಿಶ್ರಣ ಹಿರಿಯರಿಗೆ ನೀಡುತ
ಹಾರೈಕೆಯ ನುಡಿಗಳು ಸುಖದಿಂದ ಬದುಕಿರೆಂತ

ಸಂಗಮೇಶ್ವನ ಸಾನಿಧ್ಯ ತುಂಬಿತ್ತು ಭಕ್ತರಿಂದ
ಜಾನಪದ ಡೊಳ್ಳು ಕುಣಿತ ನೋಡಲು ಬಲುಚೆಂದ
ಬಣ್ಣಬಣ್ಣದ ಹೂಗಳ ಮಾಲೆಯಲ್ಲಿ ಮುಳಿಗೆದ್ದ
ಕಬ್ಬು ಬಾಳೆ ಟೆಂಗು ತಿಂದು ತೆಗಿದ ಹಬ್ಬ ಚಂದ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...