ಸೋಮವಾರ, ಜನವರಿ 30, 2023

ನಮ್ಮ ಜನ ಮರೆತರೋ ನಿನ್ನ (ಕವಿತೆ) - ಗಂಗಾಧರ ಬಾಣಸಂದ್ರ.

ಅದೋ ನೋಡು ಅಂಬೇಡ್ಕರ.... 
ನಮ್ಮ ಜನ ಮರೆತರೋ ನಿನ್ನಾ.....

ನೋಡುನೋಡಲ್ಲಿ ಬೀಜಸ್ಮೃತಿಯ
ರಥದ ಗಾಲಿಗಳು ಕಳಚುತ್ತಿವೆ,
ಪ್ರಶ್ನಿಸದೇ ಮೂಖವಾಗಿವೆ  ನಮ್ಮವರ
ಮನಸ್ಸುಗಳು !, 
ಪ್ರಭುತ್ವದ ಆರ್ಭಟಕ್ಕೆ,
ಹಣ-ಹೆಂಡದ ಅಮೀಷಕ್ಕೆ.
ಭೀಮಮಂಡಲ ಬೋಳಾಗುತ್ತಿದೆ, 
ಭೀಮ ಕಂಡ ಭಾರತ ಬಲಿಯಾಗುತ್ತಿದೆ.

ಹೇ... ಬೀಮನೇ....
ಅದೋ !  ನೋಡು.
ನೀ ಕೊಟ್ಟ  ಅಸ್ತ್ರ,
ಮಾರಾಟವಾಗುತ್ತಿದೆ.   
ಆಧಿಕಾರ ದಾಹದ ಜಂಜಾಟದೊಳಗೆ,
ನೀ ಕಟ್ಟಿದ ಕನಸು
ಬಲಿಯಾಗುತ್ತಿದೆ.

ಹೇ... ಭೀಮಾ ನಿನ್ನ ಹೆಸರನ್ನು, ಹೇಳಿ. 
ನೂರಾರು ಸಭೆ ಸೇರಿ  
ಸಾವಿರಾರು ಮಾತಾಡಿ. ಅವರಿವರ ಮಾತು ಕೇಳಿ, 
ಭೀಮ ಜಯಂತಿಯ ಮಾಡಿಹರೋ! 
ನಿನ್ನ ಚಿತ್ರವಿಟ್ಟು ಪೂಜಿಸಿಹರೋ.

ಅಧಿಕಾರಕ್ಕೆ ಗುದ್ದಾಡಿ 
ಕುರ್ಚಿಗಾಗಿ ಕಿತ್ತಾಡಿ....
ದುಡ್ಡಿಗಾಗಿ ಬಡಿದಾಡಿ.
ಗುಲಾಮಗಿರಿಯ ರಕ್ಷಕರಾಗಿ, ಸಂವಿಧಾನ ಮರೆತಿಹರೋ.

ನಮ್ಮ ಜನ,  ನಿನ್ನ ತತ್ವ- ಚಿಂತನೆಯ 
ಮಾರೆತು ಬಿಟ್ಯಾರೋ,  ಗುಲಾಮಗಿರಿಗೆ ಮಾರಿಕೊಂಡಾರೋ.

 ಶಿಕ್ಷಣ,  ಸಂಘಟನೆ, 
 ಹೋರಾಟಗಳಿಲ್ಲ.
ಅದೋ  ಅಂಬೇಡ್ಕರ
ನೀ..ಕೊಟ್ಟ  ಶಿಕ್ಷಣ ಕಲಿತವರು, 
ನಿನ್ನನೇ ಮರೆತು. 
ನ್ಯಾಯ, ನಿಷ್ಠೆ, ಸ್ವಾಭಿಮಾನವ  ಮಾರಿಬಿಟ್ಟು,
ಸಮುದಾಯದ ಏಳ್ಗೆಯ ಅಡವಿಟ್ಟು,
ಮನುಸ್ಮೃತಿಯ ತಲೆಯಮೇಲಿಟ್ಟು!  ಮೆರೆದು ಮೆರೆದು, 
ಕೆಟ್ಟರು ಕಡೆಗೊಂದು ದಿನ.

ನೀ....ಕೊಟ್ಟ ವಿಮೋಚನಾಸ್ತ್ರ‌, ಅದುವೇ 
‌ಹೋರಾಟ ದಿಟ್ಟ ಹೆಜ್ಜೆ. 
ಎಲುಬಿಲ್ಲದ ನಾಲಿಗೆ, 
ಹಾವಿನಂತೆ ಹರಿದಾಡಿ
ವಿಷವನ್ನೇ... ಕಾರುತ್ತಿದೆ.
ಅಧಿಕಾರದ ಹುಚ್ಚು ಏರುತಿದೆ.

ಮನ್ನಿಸಿ ಬಿಡು, ಬೀಮ.
ನೀ ಕೊಟ್ಟ ಭೀಮಾಸ್ತ್ರವು 
ಅಂಗಾಗವ ಕಳಚಿವೆ,
ನಲುಗಿವೆ,
ಮಾರಾಟವಾಗುತ್ತಿವೆ.

 ಕೇಳಿ ಕೇಳಿ 
ನನ್ನ  ಜನಗಳೇ....
ಗುಲಾಮರಾಗಬ್ಯಾಡಿರೋ.
ಸ್ವಾಭಿಮಾನಿಗಳಾಗಿ  ಬಾಳಿರೋ.
ಭೀಮಾ ಕೊಟ್ಟ  ಸಂವಿಧಾನವ ಉಳಿಸಿ, ಬೆಳೆಸಿರೋ.
ವಿಶ್ವಜ್ಞಾನಿ, ಮಹಾಮಾನವನು ಕೊಟ್ಟ ಸಂವಿಧಾನವ ಉಳಿಸಿರೋ...

- ಗಂಗಾಧರ್, ಬಾಣಸಂದ್ರ.
# 8722780127

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...