ಸೋಮವಾರ, ಜನವರಿ 30, 2023

ಗುರು ಅಮೂರ್ತ ಶಕ್ತಿಯ ಮೂರ್ತರೂಪವೇ- ಕಾರುಣ್ಯ ಬೋಧೆ (ಕೃತಿ ಪರಿಚಯ) - ಕಾರ್ತಿಕ ಆಚಾರ್ಯ ಎಂ.,ಕಲ್ಲಹಳ್ಳಿ.

ನಾ ಗುರು ಚರಣ ಸೇವಕ
ನನ್ನೆಲ್ಲಾ ಸಾಧನೆಗೆ ಗುರುವೇ ಕಾರಣಿಕ!!

ಎತ್ತಾಗಿ,ತೋತ್ತಾಗಿ,ಹಿತ್ತಲದ ಗಿಡವಾಗಿ,
ಮತ್ತೆ ಪಾದದ ಕೆರವಾಗಿ ಗುರುವಿನ ಹತ್ತಲಿರು ಸರ್ವಜ್ಞ.

ಮೊದಲಿನಿಂದಲೂ ಗುರು,ಗುರುಸೇವೆ,ಗುರುವಿನ ಸಂಗದಿಂದ ಬಂದವ ,ಆಯಾಸವಿರದೇ ಬೇಸರಗೊಳ್ಳದ ಮಾಡುವ ಕಾರ್ಯವೆಂದರೆ ಗುರುವೆಂಬ ಪದಕ್ಕಷ್ಟೇ ಹಾಗೆ ಪ್ರತಿ ಬಾರಿಯೂ ಕರೆಮಾಡಿದಾಗಲೂ ಒಂದೊಳ್ಳೆ ಅನುಭವ ಹಂಚುವ ಗುರುವಿನಿಂದ ಕೃತಿಬಂದದ್ದು ತೃಪ್ತಿ ಸಂತೋಷನೀಡಿದೆ ಮೊನ್ನೆಯಷ್ಟೇ ಗಿಣಿಗೇರಾದ ಶ್ರೀಮಠದ ಪೂಜ್ಯ ಶ್ರೀಕಂಠಶ್ರೀಗಳ ವಿರಚಿತ ಕಾರುಣ್ಯಬೋಧೆ ಕೃತಿ ಅದ್ದೂರಿಯಾಗಿ ಲೋಕಾರ್ಪಣೆ ಆದದ್ದು ಹರ್ಷನಿಯ ಸಂಗತಿ ಈ ಪುಣ್ಯಕಾರ್ಯಕ್ರಮದಲ್ಲಿ ಭಾಗಿಯಾದದ್ದು ಇನ್ನೂ ಪಾವನಭಾವವೇ ಹೊರಡಿತು!!

 ಅದೇನೋ ಮತ್ತಷ್ಟು  ಆತ್ಮೀಯರು ಗುರುಗಳು, ಯುವಯತಿವರೇಣ್ಯರು,ಅಪ್ಪಟ ಓದುಗ, ದುಪ್ಪಟ್ಟು ಸಾಹಿತ್ಯಾಭಿಮಾನಿಗಳು ಅಭಿನವ ಶ್ರೀಕಂಠಶ್ರೀಗಳು ನಾವುಗಳು ಆತ್ಮೀಯ ಗುರುಶಿಷ್ಯರಾದದ್ದು ಪರಿಚಯವಾದದ್ದು ಓದು,ಸತ್ ಚಿಂತನೆ,ಸಾಹಿತ್ಯದ ಹಾದಿಯಲ್ಲೇಯೇ  ಶ್ರೀಗಳ ವಿರಚಿತ 
ಕಾರಣ್ಯಬೋಧೆ ಇದು ಹೊತ್ತಿಗೆ ಎಂದರೆ ಸಾಮಾನ್ಯವಾದೀತೇನೋ ಕಾರಣ ವಿದ್ವತ್ಪೂರ್ಣ ಸಂತರ ಆಶೀರ್ವಾಣಿಯ ಸಂಗಮ ಅಚ್ಚೊತ್ತಿವೆ ಶ್ರೀಗಳ ಅನುಭವ - ಅನುಭಾವದ ಸಂಕಲನಗಳಾಗಿವೆ 
ಬಹಿರಂಗಕ್ಕೆ ಸೌಂದರ್ಯ ಎಷ್ಟು ಪ್ರಾಮುಖ್ಯತೆಯೋ ಅಂತರಂಗಕ್ಕೂ ಆಧ್ಯಾತ್ಮಿಕತೆ ಅಷ್ಟೇ ಮುಖ್ಯ ಎಂಬುದು ಮತ್ತೆ ನಿರೂಪಿಸಿದೆ ಇದೇ ಹಾದಿಯಲ್ಲಿ ಆಧ್ಯಾತ್ಮಿಕತೆ, ನೈತಿಕವಾಗಿ,ಅನುಭವದ ಮಜಲುಗಳನ್ನು ಎಷ್ಟು ಎಷ್ಟು ಚೆಂದ ಅಂತೀರಿ ಸರಳವಾಗಿ ಅಂದಾಗಿ ಚೆಂದಾಗಿ ಸುಮಾರು ೪೦ ಅಂಕಣಗಳ ವಿಂಗಡನೆಯಂತೆ ಬಹು ಅರ್ಥಪೂರ್ಣವಾಗಿ ಪ್ರಕಟಿಸುವಲ್ಲಿ ಚೊಚ್ಚಲ ಕೃತಿಯಲ್ಲಿಯೇ ಯಶಸ್ವಿಕಂಡಿದ್ದಾರೆ ಎಂಬ ಭಾವನೆ ನಮ್ಮದು.

     ಶ್ರೀಗಳ ಕಂಡಾಗಲೆಲ್ಲ ಈ ಮಾತು ಸ್ಮೃತಿಗೆ ಒದಗುತ್ತದೆ "ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ,ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿದಂತಿ "
ಈ ನುಡಿಗೆ ಭಾಜನರಾದವರೇ ನಮ್ಮ ಪೂಜ್ಯರು ಸಾಕ್ಷಿಯಾದದ್ದೇ ಅವರ ಕಾರುಣ್ಯಬೋಧೆ ಕೃತಿ 
ಅವರ ಸ್ಪೂರ್ತಿ,ಅಧ್ಯಯನ,ಗುರುಪರಂಪರೆ,ಕಂಡ ಮತ್ತು ಪಡೆದ ಅನುಭವದ ಮಜಲುಗಳನ್ನು ಬಿಂಬಿಸಿದ್ದಾರೆ ಕಗ್ಗಗಳು,ವಚನಗಳು,ಅನೇಕ ದಾರ್ಶನಿಕರಿಂದ ಪಡೆದ ಅನುಭವಗಳು,ಕನ್ನಡ,ಸಾಮಾಜಿಕ,ನೈತಿಕ ಮೌಲ್ಯಗಳಿಂದ ಕೂಡಿದ್ದಾಗಿದೆ ವಿದ್ವತ್ತು ಮತ್ತು ವಿನಯ,ಜ್ಞಾನದ ಈ ಮೂರನ್ನು ಮೈಗೂಡಿಸಿ ಬೆರೆಯುತ್ತಾ,ಸಂದೇಶ ನೀಡುತ್ತಾ,ಪ್ರತಿ ವಾರ ಪತ್ರಿಕೆಯ ಮುಖೇನ ಬಿತ್ತರಿಸುತ್ತಲೇ ಬಂದಿದ್ದಾರೆ ಗುರುವಿನ ನುಡಿಯಲ್ಲಿ ಧರ್ಮ ನೆಲೆಗೊಂಡಿದೆ ಎನ್ನುವುದು ಈ ಕೃತಿಯಿಂದ ಮತ್ತೆ ಸಾಬೀತಾಗಿದೆ‌‌.ಗುರುವಿನ ಕೃತಿಗೆ ಒಂದೆರಡು ಅಭಿಮಾನದ ನುಡಿ ಬರೆಯಬಹುದೇ ಹೊರತು ವಿಮರ್ಶೆ ನೀಡಲಾರೆ ಕಾರಣ ಸಿಹಿಯನ್ನು ಸಿಹಿಯಾಗಿದೆ ಎಂದು ಸಾಬೀತುಮಾಡಿದಂತಾಗುತ್ತದೆ.

ಎಲ್ಲರನ್ನೂ ಅಪ್ಪಿಕೊಳ್ಳುವ, ಎಲ್ಲರನ್ನೂ ಸಮಾನಹೃದಯಿಂದ ಕಾಣುವ ಶ್ರೀಗಳ ಕೃತಿ ಉನ್ನತ್ತೋನ್ನತವಾಗಿ ಕೀರ್ತಿಗಳಿಸಲಿ ಭಗವಂತ ಇನ್ನೂ ಚೈತನ್ಯನೀಡಲೆಂದು ಶ್ರೀಮಠದ ಗುರುಪರಂಪರೆಯಲ್ಲಿ ಪ್ರಾರ್ಥಿಸುವೆ ಮತ್ತಷ್ಟು ಕನ್ನಡ ಸಾಹಿತ್ಯ ಲೋಕಕ್ಕೆ, ಆಧ್ಯಾತ್ಮಿಕ ಸಂದೇಶಗಳು ಹಬ್ಬಲೆನ್ನುವೆ, ಆಶೀಸುವೆ, ಅಭಿವಂದಿಸುವೆ.

- ಕಾರ್ತಿಕ ಆಚಾರ್ಯ ಎಂ.,ಕಲ್ಲಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...