ಶುಕ್ರವಾರ, ಜನವರಿ 13, 2023

ಸಂಕ್ರಾಂತಿ ಹಬ್ಬ ಸುಗ್ಗಿಯ ಹಾಡು (ಕವಿತೆ) - ಗೊರೂರು ಅನಂತರಾಜು.

ಸುಗ್ಗಿಯ ಕುಣಿತವ ಕುಣಿಯೋಣ ಬನ್ನಿ
ಸುಗ್ಗಿಯ ಹಾಡು ಹಾಡೋಣ
ಸುಗ್ಗಿಯ ಹಾಡು ಹಾಡುತ್ತಾ ನಾವು 
ಸುಗ್ಗಿಯ ಕುಣಿತ ಕುಣಿಯುತ್ತಾ ನಾವು
ನಮ್ಮೆಲ್ಲಾ ನೋವು ಮರೆಯೋಣ

ಊರಿನ ಜನರೆಲ್ಲಾಒಟ್ಟಾಗಿ ಸೇರಿ
ತೆನೆ ಭತ್ತ ಎಲ್ಲರೂ ಕುಯ್ಯೋಣ 
ಭತ್ತವ ನಾವು ಹೋರೋಣ ಬನ್ನಿ
ಜೊಳ್ಳನು ಗಾಳಿಲಿ ತೂರೋಣ
ನಾವು ಭತ್ತದ ರಾಶಿಯ ಮಾಡೋಣ

ಹಸನಾದ ಭತ್ತದ ರಾಶಿಯ ಮಾಡಿ
ಹಸೆಯನ್ನು ಬರೆದು ಬೆಳವಣ್ಣಮಾಡಿ
ಹೂವಿನ ಹಾರದ ಶೃಂಗಾರ ಮಾಡಿ 
ರಾಶಿಯ ಪೂಜೆ ಮಾಡೋಣ
ನಾವು ಕಣಜಕ್ಕೆ ಭತ್ತವ ತುಂಬೋಣ

ಸಂಕ್ರಾಂತಿ ಹಬ್ಬ ಊರಲ್ಲಿ ಮಾಡಿ
ದನಕರುಗಳ ಕಿಚ್ಚು ಹಾಯಿಸೋಣ
ನಾವು ಎಳ್ಳು ಬೆಲ್ಲ ಹಂಚೋಣ
ಊರಿನ ಸ್ವಚ್ಛತೆ ನಾವೆಲ್ಲಾ ಮಾಡಿ
ಸಂತಸ ಬದುಕು ನೆಡೆಸೋಣ

- ಗೊರೂರು ಅನಂತರಾಜು, ಹಾಸನ.
9449462879.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...