ಭೇದ ಭಾವವ ತೊರೆಯಿರಿ
ಎಳ್ಳು ಬೆಲ್ಲದಂತೆ ಕೂಡಿರಿ
ಸಿಹಿಯ ಬೀರುತ ನಡಿರಿ
ಕಹಿ ನೆನಪುಗಳು ಮರೆಯಿರಿ
ಸಡಗರದ ಪರ್ವ ಸಂಕ್ರಾಂತಿ
ತೊಡೆದು ಸುಟ್ಹಾಕಿ ಮನದೊಳುದುಗಿರುವ ಚಿಂತಿ
ಇದ್ದಂತೆಯೇ ಇರಲಿ ಕಳೆಯದಿರಲಿ ಮನಸ್ಥಿತಿ
ಹಂಚುತ್ತಾ ಸಾಗಿರಿ ಸರ್ವರಿಗೂ ಪ್ರೀತಿ
ಆಚರಣೆ ಮಾಡುವರು ನಾನಾ ಹೆಸರಿನಿಂದ
ಸಂಕ್ರಾಂತಿ, ಪೊಂಗಲ್ ಎಂಬ ನಾಮಗಳಿಂದ
ನಮಿಸುವರು ಸೂರ್ಯನಿಗೆ ಭಕ್ತಿಯಿಂದ
ಬರುವನು ಈ ದಿನ ರವಿಯು ಉತ್ತರಾಯಣದಿಂದ
ಈ ದಿನಕ್ಕೆ ಕಾದಿದ್ದನು ಮಹಾಭಾರತದ ಭೀಷ್ಮ
ಶರಶಯನದ ಮೇಲೆ ಜೀವವಿಡಿದು ಮಲಗಿದ್ದ ಮಹಾತ್ಮ
ಸ್ವರ್ಗಕ್ಕೆ ತೆರೆದಿಹುದಂತೆ ಬಾಗಿಲು ಆ ಕ್ಷಣ
ಪುಣ್ಯಾತ್ಮರು ಬಯಸುವರು ತಾವು ಕೊನೆಗೆ ಹೋಗಲು ಯಾನ
ರವಿಯ ಬೆಳಕು ಚೆಲ್ಲುವುದು ಸಂಕ್ರಮಣದಂದು
ಹಗಲು ಇರುವುದು ಹೆಚ್ಚು ಸಮಯ ಈ ದಿನದಂದು
ಇರುಳೋಡುವುದು ತನ್ನ ದಾರಿ ಹರಸಿ ಬಲು ದೂರಕ್ಕೆ
ಸಕಲ ಜೀವಾತ್ಮಗಳಿಗೆ ದೊರಕುವುದು ಸುಖಿಯ ರಸದೌತಣ
ಸಂಕ್ರಾಂತಿಯು ಬಂದು ತರುವುದು ಭುವಿಗೆ ನೆಮ್ಮದಿ
ಮಿಶ್ರಣದ ರಸಪಾಕದ ಹುಂಡಿ ನೀಡುವರು ಮನಿಮಂದಿ
ಅನ್ಯೋನ್ಯದ ಸಂಬಂಧ ನಮ್ಮವರೆಲ್ಲರಲ್ಲು ನಂಟು
ಬಿಡಿಸದಿರಲಿ ಬೇವು ಬೆಲ್ಲದಂತೆ ಕೂಡಿರುವ ನಮ್ಮನಸ್ಸುಗಳ ಗಂಟು
- ಬಿ.ಹೆಚ್.ತಿಮ್ಮಣ್ಣ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ