ಗುರುವಾರ, ಫೆಬ್ರವರಿ 16, 2023

ಸಾವಿನ ಸತ್ಯ (ಕವಿತೆ) - ಮಾಲತಿ ಮೇಲ್ಕೋಟೆ.

ಕಣ್ಣು ಮುಚ್ಚಿ ಮಲಗಿಹರು
ಚಿರನಿದ್ರೆಯಲಿ ರಾಯರು
ಸಂತಾಪ ಸೂಚಿಸಿಹರು
ಬಂದ ಜನ ಸಾವಿರಾರು

ದೇವರಂಥ ಮನುಜರಿವರು
ಗುಣಗಾನ ಮಾಡುತಿಹರು
ನಿತ್ಯ ಶಾಪ ಹಾಕುತಿದ್ದವರು
ಮುಖವಾಡದ ಜನರು

ಸರ್ಕಾರದಧಿಕಾರಿ ರಾಯರು
ಲಂಚಕೋರ-- ಬಿರುದಾಂಕಿತರು
ರಸ್ತೆ ಅಪಘಾತದಲಿ ಮಡಿದರು
ಶಿವನ ಪಾದ ಸೇರಿದರು

ಶವಯಾತ್ರೆ ಮುಗಿಸಿದರು
ಜನರಲ್ಲಿ ಗುಸುಗುಸು ಗುಟುರು
ಎಷ್ಟೋ ಕೋಟಿ ಗಳಿಸಿದ್ದರು
ಮಾಡಿದ ಪಾಪಕೆ ಬಲಿಯಾದರು.

- ಮಾಲತಿ ಮೇಲ್ಕೋಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...