ಬುಧವಾರ, ಮಾರ್ಚ್ 1, 2023

ಮನುಜನಾಗು (ಕವಿತೆ) - ಸಬ್ಬನಹಳ್ಳಿ ಶಶಿಧರ.

ಎಚ್ಚರಾಗು ಮೂಢಮನ
ಅರಿ ನಿನ್ನ ಆತ್ಮವನ
ಜಗದ ಜನರು ಎಲ್ಲಾ ಒಂದೆ
ಮರೆತೆ ಏಕೆ ನೀ ಅದನ?

ಜಗ ನೋಡದೆ ಕುರುಡಾಗಿರುವೆ
ಕುಬ್ಜನಾಗಿ ಬದುಕಿರುವೆ
ಜಾತಿ ಹೊಲಸ ನೀರಲಿ ಮಿಂದು
ಮಡಿ ಎಂದು ಬೀಗಿರುವೆ

ದೇವಗಿರದ ಮಡಿ ಮೈಲಿಗೆಯು
ಏಕೆ ಬಂತು ನಿನ್ನೆದೆಯೊಳಗೆ
ಮನುಜನಂತೆ ವೇಷ ತೊಟ್ಟು
ಅಲ್ಪನಾಗಿ ನೀ ಬದುಕಿರುವೆ

ಭಕ್ತಿಯಿರದ ಭಕ್ತನಹಾಗೆ
ಬಹಿರಂಗದಿ ನಟಿಸಿರುವೆ
ಒಳಗೆಲ್ಲ ಸ್ವಾರ್ಥ ತುಂಬಿ
ಕುರುಡನಾಗಿ ಅಲೆದಿರುವೆ

ಸರ್ವರನ್ನು ನಮ್ಮವರೆನ್ನು
ಜಗವೆಲ್ಲ ನಮಿಸುವುದು
ಜಾತಿ ಕ್ರಿಮಿ ನೀನಾಗಿದ್ದರೆ
ಜಗ ನಿನ್ನ ದೂರ ಇಡುವುದು.

- ಸಬ್ಬನಹಳ್ಳಿ ಶಶಿಧರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...