ಬುಧವಾರ, ಮಾರ್ಚ್ 1, 2023

ಅಧಿಕಾರದ ಕುರ್ಚಿ (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಎಲ್ಲರಲ್ಲೂ ಅಧಿಕಾರದ ಕುರ್ಚಿಯ ಮೋಹ
 ದೊರೆತಷ್ಟು ಬೇಕೆನ್ನುವ ತೀರದ ದಾಹ

 ಹೂವ ಹಾಸಿಗೆಯಲ್ಲ ಅಧಿಕಾರದ ಗದ್ದುಗೆಯದು
 ಸದಾ ಜಾಗೃತಗೊಳಿಸುವ ಕತ್ತಿಯ ಅಲುಗಂತಿಹುದು

  ಲಂಚ ಬ್ರಷ್ಟಾಚಾರದ ಕೂಪಕ್ಕೆ ಬಿದ್ದು
 ಮೆರೆಯದಿರು ದರ್ಪದ ಹೊದಿಕೆಯ ಹೊದ್ದು

 ತೂಗು ಕತ್ತಿಯು ಸದಾ ತೂಗುತ್ತಿರುವುದು ಜೋಕೆ
 ಕುರ್ಚಿಯದು ಸುಲಭದಿ ಸಿಗುವ ಸರಕಲ್ಲ ಮಂಕೆ

 ದರ್ಪ ದುರಹಂಕಾರದ ಗದ್ದುಗೆ ಏರಿ ಕುಳಿತು
 ಮೆರೆಯದಿರು ನೀ ಕಾಯಕನಿಷ್ಟೆ ಶ್ರದ್ಧೆಯ ಮರೆತು 

ನಿನ್ನಲ್ಲಿರುವ ಜ್ಞಾನ ವಿದ್ಯೆಗೆ ಭೂಷಣವಾಗಲಿ ಅಧಿಕಾರ
 ಆಗು ನೀ ಸ್ವಚ್ಛ ಸಮಾಜದ ನಿರ್ಮಾಣದ ಹರಿಕಾರ
 - ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...