ಬುಧವಾರ, ಮಾರ್ಚ್ 1, 2023

ಶಕ್ತಿ ಯುಕ್ತಿಯು ಬೇಕಿದೆ (ಕವಿತೆ) - ತುಳಸಿದಾಸ ಬಿ ಎಸ್.

ಮಿಡಿಯು ಬೆಳೆವ ಹಾಗೆ ಭುವಿಗೆ
ಅಣುವು ಆಗಿ ಬಂದೆವು
ನೀರು ಆವಿ ಆಗುವಂತೆ
ಗಾಳಿಯಾಗಿ ಹೊರಟೆವು

ಸ್ಪರ್ಧೆಗಿಳಿದ ಕುದುರೆಯಂತೆ
ಓಡುತಿಹವು ದಿನಗಳು
ಬೆಟ್ಟದಿರುವ ಬಂಡೆಯಂತೆ
ಕನಸು ಕದಲದಾದವು

ಕರಗ ಬೇಕು ಮೇಣದಂತೆ
ಉರಿದು ಬೆಳಕ ನೀಡುತ
ಮರವು ಫಲವ ನೀಡಿದಂತೆ
ಜಗಕೆ ನೆರಳೆ ಆಗುತ

ಹುಲಿಗೆ ಸಿಕ್ಕ ಜಿಂಕೆಯಂತೆ
ಬಡವನ ಉಸಿರುಗಟ್ಟಿದೆ
ಲಾವದಂತೆ ಪಿಡುಗು ನೂರು
ಮನವು ಬೆಂದು ಹೋಗಿವೆ 

ಬೂದಿಯೊಳಗೆ ಕೆಂಡದಂತೆ
ಮೇಲಕೆಲ್ಲದು ಸರಿ ಇದೆ
ಉರಿಯು ನಂದೊ ಮಳೆಯ ಹಾಗೆ
ಉಕ್ತಿ ಶಕ್ತಿ ಬೇಕಿದೆ
- ತುಳಸಿದಾಸ ಬಿ. ಎಸ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....            ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್   ಉಪನಿರ್ದೇಶಕರ ಹಾಗೂ ಕ್ಷೇತ್ರ...