ಸೋಮವಾರ, ಮಾರ್ಚ್ 20, 2023

ಮಾತುಗಳ ಹಪಾಹಪಿ (ಕವಿತೆ) - ಮೋಹನ್ ಬಸಪ್ಪನಾಯಕ.

ಮೌನದೊಳಗೆ ಮಾತು ಅರಳಿಸಿ
ನೋವ ಅಳಿಸುವೆ ಎಂದು
ನೆಚ್ಚಿ ನಿಂತಲ್ಲೇ ನಿಂತಿರುವೆ....,
ಕಾಲದ ಓಟಕ್ಕೂ ಲೆಕ್ಕಿಸದೆ
ಜಗವ ಮರೆತು ಆಗಿರುವೆ ನಾ ಕಲ್ಲು......!

ನಿನ್ನ ಸದ್ದು ಕೇಳಲು
ತವಕದಲಿ ತಲ್ಲಣಿಸುತ್ತ
ಕರೆ, ಸಂದೇಶದ ಕುತೂಹಲದಲ್ಲಿಯೇ
ನನ್ನ ಮೊಬೈಲ್ ಕೂಡ ಕಾದಿದೆ..,
ಬೇಸರವಿದ್ದರೂ ಅದು ಹೇಳಲು
ನಮ್ಮಂತೆ ಮಾತು ಕಲಿತ್ತಿಲ್ಲ.....!

ಹೂತಿಟ್ಟ ಆಸೆಗಳು
ಬೆಪ್ಪಾಗಿ ಬೇಸರವನ್ನೊದ್ದು
ಆನಂದವ ಮರೆತು ಬಿಟ್ಟಿವೆ.,
ಕೈತಪ್ಪಿದ ಆನಂದದ ಕುರುಹು
ಹುಡುಕಲು ನಿನ್ನಯ ಮಾತು
ತುರ್ತು ಬೇಕಾಗಿದೆ......!

ಎದೆಯ ನಾಟಿರುವ ಕೆಂಡಗಳ
ಕೊರಳ ಕತ್ತರಿಸಿ ಕನಸುಗಳ
ಬೆಳೆಸುವ ಧಾವಂತ ನನಗೆ.....,
ದಯೆ ತೋರಿ ಮೌನವನು
ಬದಿಗಿಟ್ಟು ಮಾತುಗಳ ಬುತ್ತಿಯೊಡನೆ
ಬಳಿಗೆ ಬಂದುಬಿಡು ಗೆಳತಿ......!


    - ಮೋಹನ್ ಬಸಪ್ಪನಾಯಕ
 ಡಿ. ಸಾಲುಂಡಿ (ಗ್ರಾ ), ಧನಗಳ್ಳಿ (ಅಂ), ಜಯಪುರ (ಹೋ ), ಮೈಸೂರು (ತಾ )&(ಜಿ )-570008


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...