ಶುಕ್ರವಾರ, ಏಪ್ರಿಲ್ 21, 2023

ಸಾಪ್ಟ್ ವೇರ್ ಇಲ್ಲ (ಕವಿತೆ) - ಶ್ರೀಮತಿ ವಿಜಯ ಭರಮಶೆಟ್ರು.

ಬೆಚ್ಚನೆಯ ಹೃದಯದಲಿ
ನನ್ನೆಲ್ಲ ಆಸೆಗಳ ಬಚ್ಚಿಟ್ಟು
ಅವುಗಳಿಗಾಗಿ ಹುಚ್ಚಿಯಂತೆ
ಹರಿದಾಡಿ, ತಾರಾಡಿ, ಬಾರಾಡಿ
ಅಚ್ಚುಕಟ್ಟಾಗಿ ನೀರೆರೆದು
ಜೀವ ಪಣಕಿಟ್ಟು ಬೆಳೆಸಿದೆ
ಬಂದ ಫಲ ನಿರಾಶೆ
ಪಾಪಾಸುಕಳ್ಳಿ ಬೇಲಿಯಂತೆ
ಹರಡಿ ಹಾವು ಹೆಗ್ಗಣಗಳ ಪಾಲಾಯಿತು
ಅವುಗಳನೆಲ್ಲ ಸವರಿ ಕತ್ತರಿಸಿ
ಹೊಸ ಹೂಗಳ ಬೆಳೆಯಲಾರೆ
ಸೊಂಟ ಬಾಗಿದೆ ಮನಸ್ಸು ಕದಡಿದೆ
ಬೇವಿನ ಬೀಜಕ್ಕೆ ಬೆಲ್ಲ
ಹಾಲು ಸುರಿದು ಬೆಳೆಸಿದಂತಾಯಿತು
ಮೋಸಹೋದೆ ಈ ಬಾಳಿನಲಿ
ನನ್ನದೆಂಬ ಮೋಹ ಆವರಿಸಿತ್ತು
ಕಣ್ಣು ತೆರೆಯಿತು
ನೋಟ ಆಟ ನಿಚ್ಚಳಾಯಿತು
ಎಷ್ಟಾದರೂ ಇಷ್ಟೇ
ಇಂದಿನ ಬದುಕೇ
ಮುಂಬರುವ ದಿನಗಳಿಗೆ ಡಿಟ್ಟೋ
ಡಿಲೀಟ್ ಮಾಡಲು ಬರದು
ಎಲ್ಲ ವ್ಯ್ವವಹಾರಗಳು cut & paste
ಪ್ರೀತಿ ವಿಶ್ವಾಸಗಳು
ಅತಃಕರಣ ನಂಬಿಕೆಗಳು
ಡಿಲೀಟ್ ಆಗಿಬಿಟ್ಟಿವೆ
Install ಮಾಡಲು ಬರದು
ಆ software ರೇ ಈಗ ಇಲ್ಲ.
- ಶ್ರೀಮತಿ ವಿಜಯ ಭರಮಶೆಟ್ರು, ದಾವಣಗೆರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...