ಶುಕ್ರವಾರ, ಏಪ್ರಿಲ್ 21, 2023

ಸಾಪ್ಟ್ ವೇರ್ ಇಲ್ಲ (ಕವಿತೆ) - ಶ್ರೀಮತಿ ವಿಜಯ ಭರಮಶೆಟ್ರು.

ಬೆಚ್ಚನೆಯ ಹೃದಯದಲಿ
ನನ್ನೆಲ್ಲ ಆಸೆಗಳ ಬಚ್ಚಿಟ್ಟು
ಅವುಗಳಿಗಾಗಿ ಹುಚ್ಚಿಯಂತೆ
ಹರಿದಾಡಿ, ತಾರಾಡಿ, ಬಾರಾಡಿ
ಅಚ್ಚುಕಟ್ಟಾಗಿ ನೀರೆರೆದು
ಜೀವ ಪಣಕಿಟ್ಟು ಬೆಳೆಸಿದೆ
ಬಂದ ಫಲ ನಿರಾಶೆ
ಪಾಪಾಸುಕಳ್ಳಿ ಬೇಲಿಯಂತೆ
ಹರಡಿ ಹಾವು ಹೆಗ್ಗಣಗಳ ಪಾಲಾಯಿತು
ಅವುಗಳನೆಲ್ಲ ಸವರಿ ಕತ್ತರಿಸಿ
ಹೊಸ ಹೂಗಳ ಬೆಳೆಯಲಾರೆ
ಸೊಂಟ ಬಾಗಿದೆ ಮನಸ್ಸು ಕದಡಿದೆ
ಬೇವಿನ ಬೀಜಕ್ಕೆ ಬೆಲ್ಲ
ಹಾಲು ಸುರಿದು ಬೆಳೆಸಿದಂತಾಯಿತು
ಮೋಸಹೋದೆ ಈ ಬಾಳಿನಲಿ
ನನ್ನದೆಂಬ ಮೋಹ ಆವರಿಸಿತ್ತು
ಕಣ್ಣು ತೆರೆಯಿತು
ನೋಟ ಆಟ ನಿಚ್ಚಳಾಯಿತು
ಎಷ್ಟಾದರೂ ಇಷ್ಟೇ
ಇಂದಿನ ಬದುಕೇ
ಮುಂಬರುವ ದಿನಗಳಿಗೆ ಡಿಟ್ಟೋ
ಡಿಲೀಟ್ ಮಾಡಲು ಬರದು
ಎಲ್ಲ ವ್ಯ್ವವಹಾರಗಳು cut & paste
ಪ್ರೀತಿ ವಿಶ್ವಾಸಗಳು
ಅತಃಕರಣ ನಂಬಿಕೆಗಳು
ಡಿಲೀಟ್ ಆಗಿಬಿಟ್ಟಿವೆ
Install ಮಾಡಲು ಬರದು
ಆ software ರೇ ಈಗ ಇಲ್ಲ.
- ಶ್ರೀಮತಿ ವಿಜಯ ಭರಮಶೆಟ್ರು, ದಾವಣಗೆರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...