ಶುಕ್ರವಾರ, ಏಪ್ರಿಲ್ 21, 2023

ಒಲವೇ (ಕವಿತೆ) - ಭಾಗ್ಯ ಎಲ್.ಆರ್.

ಒಲವೇ ನೀನು ಇಲ್ಲದೇ ಏನಿದೆ 
ಮನಸ್ಸೆಲ್ಲ ನಿನ್ನಲ್ಲೇ ನೆಲೆಯಾಗಿದೆ;
ಹಗಲಲ್ಲು ನಿನದೇ ಧ್ಯಾನ 
ಇರುಳಲ್ಲು ನಿನ್ನದೇ ಧ್ಯಾನ.

ನನ್ನ ಉಸಿರ ಕಣ ಕಣದಲ್ಲು ನೀನೇ ತುಂಬಿರುವೆ 
ನಿನ್ನ ದೂರದ ವಿರಹದ ನೋವು 
ನನ್ನ ಅನವರತ ಸುಡುತ್ತಿದೆ;
ನಿನ್ನ ನೋಡುವ ಹಂಬಲ 
ಸದಾ ನನ್ನ ಕಾಡುತ್ತಿದೆ.

ನೀ ನನ್ನ ಹೃದಯದಲ್ಲಿ 
ಭಿತ್ತಿದ ಒಲವಿನ ಬೀಜ 
ಅಂಕುರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ;
ನನ್ನ ಉಸಿರ ಕೊನೆಯವರೆಗೂ 
ಈ ನಮ್ಮ ಒಲವು ಶಾಶ್ವತ.

ಬಂದು ಒಮ್ಮೆ ನೀ ಸಮ್ಮತಿಸು 
ನಮ್ಮ ಒಲವಿನ ಔತಣಕ್ಕೆ ನಾ ನಿನ್ನ 
ಜೊತೆ ಇರುವೆ ನನ್ನ ಉಸಿರ ಕೊನೆಯವರೆಗೆ ನನ್ನ ಒಲವೇ.

- ಭಾಗ್ಯ ಎಲ್.ಆರ್., ಶಿವಮೊಗ್ಗ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...