ಶುಕ್ರವಾರ, ಏಪ್ರಿಲ್ 21, 2023

ಋಣ (ಕವಿತೆ) - ಮಾಲತಿ ಮೇಲ್ಕೋಟೆ.

ಜನನನಿಂ ಮರಣದನಕ
ಋಣದಲೇ ಬದುಕಿದುವು
ಒಂದೆರಡೆ ಹಲವಾರು
ಹೆಚ್ಚೊಮ್ಮೆ ಕಡಿಮೆಯೊಮ್ಮೆ

ಜನಿಸಿದೊಡನೆ ಪಂಚಭೂತಗಳ ಋಣ
ಬೆಳೆಸಿದ ತಾಯ್ತಂದೆಯರ ಋಣ
ಜೊತೆ ಬೆಳೆದ ಒಡಹುಟ್ಟಿದವರ ಋಣ
ಏನ ಹೆಸರಿಸಲಿ ಏನ ಬಿಡಲಿ

ವಿದ್ಯೆ ಕಲಿಸಿದ ಗುರುಗಳದೊ
ಅನ್ನ ನೀಡಿದ ರೈತನದೊ
ದೇಶ ಕಾಯ್ದ ಯೋಧನದೊ
ಕೈಹಿಡಿದು ಕಾಯ್ವ ದೇವನದೊ

ಚಿಕಿತ್ಸೆ ನೀಡಿದ ವೈದ್ಯರ ಋಣವೇ
ಸತ್ತ ನಂತರ ಬಿಟ್ಟಿತೇನು ಋಣವು
ಹೆಗಲು ಕೊಡುವವರ ಋಣವೇ
ಸಂಸ್ಕಾರ ಮಾಡುವವರ ಋಣವೇ

ಕಂಡಂತೆ ಕಾಣದಂತೆ
ತಿಳಿದಂತೆ ತಿಳಿಯದಂತೆ
ಋಣದಲೇ ಬದುಕಿದುವು
ಋಣಮುಕ್ತರಿಲ್ಲ ಇಲ್ಲಿ

- ಮಾಲತಿ ಮೇಲ್ಕೋಟೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...